Home ಕ್ರೈಂ ನ್ಯೂಸ್ ಅನೈತಿಕ ಸಂಬಂಧಕ್ಕೆ ಪತಿ ಬಲಿ: ‘ತಾತನ ಸಮಾಧಿ’ ನೆಪದಲ್ಲಿ ಗುಂಡಿ ತೋಡಿ ಪತಿಯನ್ನೇ ಹೂತುಹಾಕಿದ ಕ್ರೂರಿ ಪತ್ನಿ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಅನೈತಿಕ ಸಂಬಂಧಕ್ಕೆ ಪತಿ ಬಲಿ: ‘ತಾತನ ಸಮಾಧಿ’ ನೆಪದಲ್ಲಿ ಗುಂಡಿ ತೋಡಿ ಪತಿಯನ್ನೇ ಹೂತುಹಾಕಿದ ಕ್ರೂರಿ ಪತ್ನಿ!

Share
ಪತಿ
Share

ಸಂಗಾರೆಡ್ಡಿ (ತೆಲಂಗಾಣ): ಪ್ರಿಯಕರನ ದೈಹಿಕ ಮೋಹಕ್ಕೆ ಬಿದ್ದ ಮಹಿಳೆಯೊಬ್ಬಳು, ಹೆತ್ತ 5 ವರ್ಷದ ಮಗಳ ಭವಿಷ್ಯವನ್ನೂ ಲೆಕ್ಕಿಸದೆ ತನ್ನ ಗಂಡನನ್ನೇ ಅತ್ಯಂತ ಭೀಕರವಾಗಿ ಕೊಲೆ ಮಾಡಿರುವ ದಾರುಣ ಘಟನೆಯೊಂದು ತೆಲಂಗಾಣದ ನಾರಾಯಣಖೇಡ್‌ನಲ್ಲಿ ಬೆಳಕಿಗೆ ಬಂದಿದೆ. ಯಾರಿಗೂ ಅನುಮಾನ ಬಾರದಿರಲು ಸಿನಿಮೀಯ ಶೈಲಿಯಲ್ಲಿ ಸ್ಕೆಚ್ ಹಾಕಿ ಪತಿಯನ್ನು ಮುಗಿಸಿರುವ ಈ ಕೃತ್ಯ ಸಮಾಜವನ್ನೇ ಬೆಚ್ಚಿಬೀಳಿಸಿದೆ.

ಅಕ್ರಮ ಸಂಬಂಧವೇ ಮುಳುವಾಯ್ತು!

ಮೃತ ವ್ಯಕ್ತಿಯನ್ನು ಬೋರ್‌وಾವೆಲ್ ರಿಪೇರಿ ಕೆಲಸ ಮಾಡಿಕೊಂಡಿದ್ದ ಮುತ್ಯಂ ರೆಡ್ಡಿ (35) ಎಂದು ಗುರುತಿಸಲಾಗಿದೆ. ಇವರ ಪತ್ನಿ ಕಲ್ಪನಾ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಆಕೆಗೆ ಆರ್‌ಟಿಸಿ (RTC) ಮೆಕಾನಿಕ್ ಆಗಿದ್ದ ಪಂಡರಿ ಎಂಬಾತನ ಪರಿಚಯವಾಗಿ, ಅದು ಅನೈತಿಕ ಸಂಬಂಧಕ್ಕೆ ತಿರುಗಿದೆ. ಇವರ ಈ ಸಂಬಂಧಕ್ಕೆ ಪತಿ ಮುತ್ಯಂ ರೆಡ್ಡಿ ಅಡ್ಡಿಯಾಗತೊಡಗಿದ್ದರಿಂದ ಆತನನ್ನು ಮುಗಿಸಿಬಿಡಲು ಇಬ್ಬರೂ ತೀರ್ಮಾನಿಸಿದ್ದರು.

‘ತಾತನ ಸಮಾಧಿ’ ಹೆಸರಲ್ಲಿ ಮೊದಲೇ ತೋಡಿದ್ದ ಗುಂಡಿ!

ಯಾರಿಗೂ ಯಾವುದೇ ಅನುಮಾನ ಬರಬಾರದು ಎಂದು ಮುಂಜಾಗ್ರತೆಯಾಗಿ, ‘ತಾತನ ಸಮಾಧಿ’ ನಿರ್ಮಿಸಬೇಕಿದೆ ಎಂದು ಸುಳ್ಳು ಹೇಳಿ ಜೆಸಿಬಿ (JCB) ಮೂಲಕ ಕೃಷಿ ಭೂಮಿಯೊಂದರಲ್ಲಿ ಮೊದಲೇ ಒಂದು ದೊಡ್ಡ ಗುಂಡಿಯನ್ನು ತೋಡಿಸಿ ಸಿದ್ಧವಾಗಿಟ್ಟುಕೊಂಡಿದ್ದರು.

ಮದ್ಯ ಕುಡಿಸಿ ಭೀಕರ ಕೊಲೆ:

ಯೋಜನೆಯಂತೆ, ಮೇ 16 ರಂದು ಮುತ್ಯಂ ರೆಡ್ಡಿಗೆ ಅತಿಯಾಗಿ ಮದ್ಯ ಕುಡಿಸಲಾಗಿದೆ. ಆತ ಪ್ರಜ್ಞೆ ಕಳೆದುಕೊಳ್ಳುತ್ತಿದ್ದಂತೆ ಇಬ್ಬರೂ ಸೇರಿ ಆತನ ಕುತ್ತಿಗೆ ಹಿಸುಕಿ ಭೀಕರವಾಗಿ ಕೊಲೆ ಮಾಡಿದ್ದಾರೆ. ಯಾರ ಕಣ್ಣಿಗೂ ಬೀಳದಂತೆ, ಮೊದಲೇ ಸಿದ್ಧಪಡಿಸಿದ್ದ ಆ ‘ಸಮಾಧಿ’ಯ ಗುಂಡಿಯೊಳಗೆ ಶವವನ್ನು ಹಾಕಿ ಹೂತು ಮೂಚ್ಚಿದ್ದಾರೆ. ಎರಡು ದಿನಗಳ ಬಳಿಕ ಪತ್ನಿ ಕಲ್ಪನಾಳೇ ಏನೂ ತಿಳಿಯದವಳಂತೆ ಪತಿ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಳು.

ಕಾಲ್ ಡೇಟಾದಿಂದ ಬಯಲಾಯ್ತು ಪಾಪದ ಕೃತ್ಯ!

ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ ಪತ್ನಿ ಕಲ್ಪನಾ ನಡವಳಿಕೆ ಮೇಲೆ ಅನುಮಾನ ಬಂದಿದೆ. ತಕ್ಷಣ ಆಕೆಯ ಮೊಬೈಲ್‌ನ ಕಾಲ್ ಡೇಟಾ ರೆಕಾರ್ಡ್ (CDR) ಪರಿಶೀಲಿಸಿದಾಗ, ಆಕೆ ಪಂಡರಿ ಎಂಬಾತನ ಜೊತೆ ನಿರಂತರ ಸಂಪರ್ಕದಲ್ಲಿರುವುದು ಪತ್ತೆಯಾಗಿದೆ. ಪೊಲೀಸರು ಕಲ್ಪನಾಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಕೊಲೆಯ ರಹಸ್ಯ ಬಯಲಾಗಿದೆ.

ಅನಾಥವಾಯ್ತು ಮಗು:

ಕೇವಲ ಪ್ರಿಯಕರನ ದೈಹಿಕ ಮೋಹಕ್ಕಾಗಿ ಪತಿಯನ್ನೇ ಕೊಂದ ಈ ಪಾಪಿ ತಾಯಿಯಿಂದಾಗಿ 5 ವರ್ಷದ ಹೆಣ್ಣು ಮಗಳು ಅನಾಥವಾಗಿದೆ. ತಂದೆ ಮಣ್ಣು ಪಾಲಾದರೆ, ತಾಯಿ ಜೈಲು ಕಂಬಿ ಎಣಿಸುತ್ತಿದ್ದಾಳೆ.

ಸದ್ಯ ಪೊಲೀಸರು ತಹಶೀಲ್ದಾರ್ ಸಮ್ಮುಖದಲ್ಲಿ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಆರೋಪಿಗಳಿಬ್ಬರನ್ನೂ ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *