ದಾವಣಗೆರೆ: ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್ ರಿಸಲ್ಟ್ ಕುತೂಹಲ ಮತ ಎಣಿಕೆ ಮುಗಿದಂತೆ ಗರಿಗೆದರಿದೆ. ಇನ್ನು ಉಳಿದಿರುವುದು ಕೇವಲ ನಾಲ್ಕು ಸುತ್ತಿನ ಮತ ಎಣಿಕೆ ಮಾತ್ರ. 17ನೇ ಸುತ್ತಿನ ಮತ ಎಣಿಕೆ ಮುಗಿದಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರು 6283 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಸಮರ್ಥ್ ಶಾಮನೂರು ಹಿನ್ನಡೆ ಅನುಭವಿಸಿದ್ದಾರೆ. ಎಸ್ ಡಿಪಿಐನ ಅಪ್ಸರ್ ಕೊಡ್ಲಿಬೆಟ್ಟು ಅವರು 16ನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡ ವೇಳೆ 17404 ಮತಗಳನ್ನು ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ಆರಂಭದಿಂದ ಸತತ ಏಳು ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದರೆ, ಎಂಟನೇ ಸುತ್ತಿನಿಂದ 17ನೇ ಸುತ್ತಿನವರೆಗೆ ಸಮರ್ಥ್ ಶಾಮನೂರು ಅವರು ಮುನ್ನಡೆ ಕಾಯ್ದುಕೊಂಡಿದ್ದಾರೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಫಲಿತಾಂಶ ಮತ ಎಣಿಕೆ ಪೂರ್ಣಗೊಳ್ಳುತ್ತಿದ್ದಂತೆ ರೋಚಕ ಘಟ್ಟ ತಲುಪುತ್ತಿದೆ. 13,14,15ನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದೆ. ಹದಿನಾರನೇ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರು 7516 ಮತಗಳ ಮುನ್ನಡೆ ಪಡೆದಿದ್ದಾರೆ. ಈ ಮೂಲಕ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಹಿನ್ನೆಡೆ ಅನುಭವಿಸಿದ್ದಾರೆ.
ಹದಿನಾರನೇ ಸುತ್ತಿನಲ್ಲಿ ಸಮರ್ಥ್ ಶಾಮನೂರು 7516 ಮತಗಳ ಮುನ್ನಡೆ ಪಡೆದಿದ್ದಾರೆ. ಕಾಂಗ್ರೆಸ್ ಮುನ್ನಡೆ ಮತಗಳು ಕಡಿಮೆಯಾಗುತ್ತಿದ್ದು, ರೋಚಕ ಘಟ್ಟದತ್ತ ಫಲಿತಾಂಶ ಮುಂದುವರಿದಿದೆ. ಕೊನೆ ಗಳಿಗೆಯಲ್ಲಿ ಬಿಜೆಪಿಗೆ ಹೆಚ್ಚಿನ ಮತಗಳು ಬಿದ್ದಿದ್ದೇ ಆದರೆ ಫಲಿತಾಂಶ ಕುತೂಹಲದತ್ತ ಸಾಗಲಿದೆ.
ಸದ್ಯದ ಮಾಹಿತಿ ಪ್ರಕಾರ ಸಮರ್ಥ್ ಶಾಮನೂರು ಏಳೂವರೆ ಸಾವಿರ ಮತಗಳ ಮುನ್ನಡೆ ಹೊಂದಿದ್ದರೂ ಮುಂದಿನ ಮತ ಎಣಿಕೆಯಲ್ಲಿ ಏನಾಗಬಹುದು ಎಂಬ ಕುತೂಹಲದ ಕಣ್ಣುಗಳಿಂದ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ನೋಡುತ್ತಿದ್ದಾರೆ.
- Afsar Kodlipet SDPI
- Davanagere Election Counting
- Davanagere South By-election Result
- Davanagere South Constituency.
- Karnataka By-election Updates 2026.
- Samarth Shamanur Lead
- Srinivas Dasakariyappa
- ಅಪ್ಸರ್ ಕೊಡ್ಲಿಬೆಟ್ಟು
- ಕರ್ನಾಟಕ ರಾಜಕೀಯ
- ಕಾಂಗ್ರೆಸ್ ಲೀಡ್
- ದಾವಣಗೆರೆ ದಕ್ಷಿಣ ಉಪಚುನಾವಣೆ
- ಬಿಜೆಪಿ ಹಿನ್ನಡೆ
- ಮತ ಎಣಿಕೆ ಫಲಿತಾಂಶ
- ಶ್ರೀನಿವಾಸ್ ದಾಸಕರಿಯಪ್ಪ
- ಸಮರ್ಥ್ ಶಾಮನೂರು





Leave a comment