ಫತೇಹಾಬಾದ್ (ಹರ್ಯಾಣ): ಪತಿಯ ಮಾದಕದ್ರವ್ಯ ವ್ಯಸನ ಹಾಗೂ ನಿರಂತರ ಗೃಹಹಿಂಸೆಗೆ ಬೇಸತ್ತ ಅಂಗನವಾಡಿ ಕಾರ್ಯಕರ್ತೆಯೊಬ್ಬರು, ತಮ್ಮ ಇಬ್ಬರು ಮಕ್ಕಳಿಗೆ ಹಾಲಿನಲ್ಲಿ ವಿಷ ಬೆರೆಸಿ ಕೊಂದು, ಬಳಿಕ ತಾವೂ ನೀರಿನ ಟ್ಯಾಂಕ್ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಹರ್ಯಾಣದ ಫತೇಹಾಬಾದ್ ಜಿಲ್ಲೆಯ ಮೆಹುವಾಲಾ ಗ್ರಾಮದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಸುದೇಶ್ (31) ಹಾಗೂ ಅವರ ಇಬ್ಬರು ಮಕ್ಕಳಾದ ಜ್ಯೋತಿ ಮತ್ತು ವಿನೀತ್ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮೃತರ ಸಹೋದರ ನೀಡಿದ ದೂರಿನನ್ವಯ ಪೊಲೀಸರು ಪತಿ ಸಂದೀಪ್ ಮಾಚ್ರಾ ಅವರನ್ನು ಬಂಧಿಸಿದ್ದಾರೆ.
ವಿಷವಿಕ್ಕಿ ಟ್ಯಾಂಕ್ಗೆ ತಳ್ಳಿದ ತಾಯಿ:
ಪ್ರಾಥಮಿಕ ತನಿಖೆಯ ಪ್ರಕಾರ, ಸುದೇಶ್ ಮೊದಲು ತಮ್ಮ ಇಬ್ಬರು ಮಕ್ಕಳಿಗೆ ಹಾಲಿನಲ್ಲಿ ವಿಷ ಬೆರೆಸಿ ಕುಡಿಸಿದ್ದಾರೆ. ನಂತರ ಅವರನ್ನು ಮನೆಯ ಆವರಣದಲ್ಲಿದ್ದ ನೀರಿನ ಟ್ಯಾಂಕ್ಗೆ ತಳ್ಳಿ, ತಾವೂ ವಿಷ ಸೇವಿಸಿ ಅದೇ ಟ್ಯಾಂಕ್ಗೆ ಹಾರಿ ಪ್ರಾಣ ಬಿಟ್ಟಿದ್ದಾರೆ.
ಸಾವಿಗೂ ಮುನ್ನ ವಿಡಿಯೋ ರೆಕಾರ್ಡ್:
ಆತ್ಮಹತ್ಯೆಗೂ ಮುನ್ನ ಸುದೇಶ್ ತಮ್ಮ ಮೊಬೈಲ್ನಲ್ಲಿ ವಿಡಿಯೋ ಹಾಗೂ ಸೋಶಿಯಲ್ ಮೀಡಿಯಾ ರೀಲ್ಸ್ ಮಾಡಿ ಅಪ್ಲೋಡ್ ಮಾಡಿದ್ದಾರೆ. ಇದರಲ್ಲಿ ಪತಿ ನೀಡುತ್ತಿದ್ದ ಕಿರುಕುಳ ಮತ್ತು ದಾಂಪತ್ಯ ಜೀವನದಲ್ಲಿದ್ದ ಕಷ್ಟಗಳ ಬಗ್ಗೆ ಕಣ್ಣೀರು ಹಾಕುತ್ತಾ ವಿವರಿಸಿದ್ದಾರೆ. ಸುದೇಶ್ ಅವರ ಫೋನ್ ವಶಪಡಿಸಿಕೊಂಡಿರುವ ಪೊಲೀಸರು, ತನಿಖೆ ಚುರುಕುಗೊಳಿಸಿದ್ದಾರೆ.
ಸಹೋದರನ ದೂರಿನ ಮೇರೆಗೆ ಪತಿ ಬಂಧನ:
2014ರಲ್ಲಿ ಪ್ರೀತಿಸಿ ಮದುವೆಯಾಗಿದ್ದ ಸಂದೀಪ್, ಡ್ರಗ್ಸ್ ಚಟಕ್ಕೆ ಬಿದ್ದು ಸುದೇಶ್ಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ ಎಂದು ಮೃತರ ಸಹೋದರ ಪ್ರವೀಣ್ ಆರೋಪಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 103(1) ಮತ್ತು 108 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಸಂದೀಪ್ನನ್ನು ಬಂಧಿಸಿದ್ದಾರೆ. ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಮುಂದಿನ ತನಿಖೆ ಮುಂದುವರಿಸಿದ್ದಾರೆ.
- Anganwadi worker suicide
- BNS section 103
- domestic violence Haryana
- Fatehabad news
- Haryana mother kills children
- Mehuwala village incident
- poison laced milk
- Sandeep Machra arrested
- water tank tragedy Fatehabad
- ಅಂಗನವಾಡಿ ಕಾರ್ಯಕರ್ತೆ ಆತ್ಮಹತ್ಯೆ
- ಗೃಹಹಿಂಸೆ ಆತ್ಮಹತ್ಯೆ
- ನೀರಿನ ಟ್ಯಾಂಕ್ನಲ್ಲಿ ಶವ
- ಪತಿ ಬಂಧನ
- ಫತೇಹಾಬಾದ್ ದುರಂತ
- ಭಾರತೀಯ ನ್ಯಾಯ ಸಂಹಿತೆ
- ಮಕ್ಕಳಿಗೆ ವಿಷವಿಕ್ಕಿ ಕೊಲೆ
- ಸುದೇಶ್ ಫತೇಹಾಬಾದ್
- ಹರ್ಯಾಣ ಅಪರಾಧ ಸುದ್ದಿ





Leave a comment