ಬೆಂಗಳೂರು: ವಾಲ್ಮೀಕಿ ಹಗರಣದಲ್ಲಿ ನನ್ನ ಪಾತ್ರ ಇಲ್ಲ. ನಾನು ಯಾವುದೇ ಕಾರಣಕ್ಕೂ ಮನುವಾದಿಗಳಿಗೆ ಬಗ್ಗಲ್ಲ, ಜಗ್ಗಲ್ಲ. ಸಂವಿಧಾನಕ್ಕೆ ಬೆಲೆ ಕೊಡುತ್ತೇನೆಯೇ ಹೊರತು ಬಿಜೆಪಿಯಂಥ ಮನುವಾದಿಗಳಲ್ಲ ಎಂದು ಕಾಂಗ್ರೆಸ್ ಶಾಸಕ ಬಿ. ನಾಗೇಂದ್ರ ಹೇಳಿದ್ದಾರೆ.
ವಿಧಾನಸೌಧದ ಕೊಠಡಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮನುವಾದಿಗಳು ಆದಿವಾಸಿ, ದಲಿತರು ಬೆಳೆಯಬಾರದು ಎಂಬ ಷಡ್ಯಂತ್ರ ರೂಪಿಸಿದ್ದಾರೆ. ನಾನು ಆದಿವಾಸಿ ಎಂಬ ಕಾರಣಕ್ಕೆ ಟಾರ್ಗೆಟ್ ಮಾಡಿದ್ದಾರೆ. ಇದ್ಯಾವುದಕ್ಕೂ ಜಗ್ಗಲ್ಲ, ಕುಗ್ಗಲ್ಲ ಎಂದಿದ್ದಾರೆ.
ನಾನು ತಪ್ಪು ಮಾಡದಿದ್ದರೂ ವರಿಷ್ಠರಿಗೆ ನನ್ನಿಂದ ಮುಜುಗರ ಆಗಬಾರದು ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬಂದಿದ್ದೇನೆ. ನನ್ನಿಂದ ಪಕ್ಷಕ್ಕೆ, ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರಿಗೆ ಯಾವುದೇ ರೀತಿಯ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ನಿರ್ಧಾರಕ್ಕೆ ಬಂದಿದ್ದೇನೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಜುಗರ ಆಗಬಾರದು ಎಂಬ ಕಾರಣಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ. ದಲಿತರು, ಅಲ್ಪಸಂಖ್ಯಾತರನ್ನು ಬಿಜೆಪಿಯವರು ಬೆಳೆಯಲು ಬಿಡುತ್ತಾರೆಯೇ ಎಂದು ಪ್ರಶ್ನಿಸಿದರು.
ಚುನಾವಣೆಯಲ್ಲಿ ಎದುರಿಸಲಿ. ಅದನ್ನು ಬಿಟ್ಟು ಜನರ ಹಿತಕ್ಕೋಸಕ್ಕರ ರಾಜೀನಾಮೆ ನೀಡುತ್ತಿದ್ದೇನೆ. ಪಕ್ಷಕ್ಕೆ ಮುಜುಗರ ಆಗಬಾರದು ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬಂದಿದ್ದೇನೆ ಹೊರತು ಬಿಜೆಪಿಯವರ ಗೊಡ್ಡು ಬೆದರಿಕೆಗಳಿಗಲ್ಲ. ಎಸ್ಐಟಿ, ಸಿಐಡಿ ಮೇಲೆ ನಂಬಿಕೆ ಇದೆ. ರಾಜ್ಯ ಪೊಲೀಸರು ಸಮರ್ಥರಿದ್ದಾರೆ. ನನ್ನ ಪಾತ್ರವಿಲ್ಲದಿದ್ದರೂ ಮೂರು ತಿಂಗಳು ಜೈಲಿಗೆ ಹೋಗಿ ಬಂದಿದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಬಿ. ನಾಗೇಂದ್ರ ಹೇಳಿದರು.
ಸುಳ್ಳನ್ನು ಹೇಳಿ ಹೇಳಿ ನಿಜ ಮಾಡಲು ಹೊರಟಿದ್ದಾರೆ ಎಂದು ಬಿ. ನಾಗೇಂದ್ರ ಕಣ್ಣೀರು ಸುರಿಸಿದರು.
- B Nagendra
- B Nagendra statement
- BJP vs Congress Karnataka
- Cauvery Farmers Issue
- Congress Minister Nagendra
- Karnataka Drought
- Karnataka Politics
- KPSC scam
- Opposition politics
- Vidhana Soudha
- ಕರ್ನಾಟಕ ರಾಜಕೀಯ
- ಕಾಂಗ್ರೆಸ್ ಶಾಸಕ
- ಕಾವೇರಿ ರೈತರ ಸಮಸ್ಯೆ
- ಕೆಪಿಎಸ್ಸಿ ಹಗರಣ
- ಬರಗಾಲ ಸಮಸ್ಯೆ
- ಬಿ ನಾಗೇಂದ್ರ
- ಬಿಜೆಪಿ ವಾಗ್ದಾಳಿ
- ರಾಜೀನಾಮೆ ಚರ್ಚೆ
- ವಿಧಾನಸೌಧ
- ವಿರೋಧ ಪಕ್ಷಗಳ ರಾಜಕಾರಣ





Leave a comment