Home ಕ್ರೈಂ ನ್ಯೂಸ್ ವಿಪಕ್ಷಗಳದ್ದು ಕುತಂತ್ರ ರಾಜಕಾರಣ, ನನ್ನ ವಿರುದ್ಧ ಹರಿಹಾಯ್ದರೂ ಚರ್ಚೆಗೆ ಬರಲಿಲ್ಲ: ಬಿ. ನಾಗೇಂದ್ರ ಕಿಡಿ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿ

ವಿಪಕ್ಷಗಳದ್ದು ಕುತಂತ್ರ ರಾಜಕಾರಣ, ನನ್ನ ವಿರುದ್ಧ ಹರಿಹಾಯ್ದರೂ ಚರ್ಚೆಗೆ ಬರಲಿಲ್ಲ: ಬಿ. ನಾಗೇಂದ್ರ ಕಿಡಿ!

Share
ಬಿ. ನಾಗೇಂದ್ರ
Share

ಬೆಂಗಳೂರು: “ಸಂವಿಧಾನ ನಮ್ಮನ್ನು ಖಂಡಿತವಾಗಿಯೂ ಕಾಪಾಡುತ್ತದೆ ಎಂಬ ದೃಢ ನಂಬಿಕೆ ನನಗಿದೆ” ಎಂದು ಹೇಳಿರುವ ಕಾಂಗ್ರೆಸ್ ಶಾಸಕ ಹಾಗೂ ಸಚಿವ ಬಿ. ನಾಗೇಂದ್ರ, ವಿರೋಧ ಪಕ್ಷಗಳಾದ ಬಿಜೆಪಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ವಿರೋಧ ಪಕ್ಷಗಳು ಕೇವಲ ಕುತಂತ್ರ ರಾಜಕಾರಣ ಮಾಡುತ್ತಾ ನನ್ನ ವಿರುದ್ಧ ಸದನದಲ್ಲಿ ಹಲವು ಬಾರಿ ಮಾತನಾಡಿದವು. ಆದರೆ, ‘ನಾನು ಯಾಕೆ ರಾಜೀನಾಮೆ ನೀಡಬೇಕು?’ ಎಂಬ ವಿಷಯದ ಕುರಿತು ಮುಖಾಮುಖಿ ಚರ್ಚೆಗೆ ಬನ್ನಿ ಎಂದು ಹಲವು ಬಾರಿ ಕರೆ ನೀಡಿದರೂ ಅವರು ಬರಲೇ ಇಲ್ಲ” ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಪ್ರಸ್ತುತ ಸಾಲಿನಲ್ಲಿ ತೀವ್ರ ಬರಗಾಲ ತಾಂಡವವಾಡುತ್ತಿದೆ. ಮತ್ತೊಂದೆಡೆ ಕೆಪಿಎಸ್‌ಸಿ ಹಗರಣ ಬೆಳಕಿಗೆ ಬಂದಿದ್ದು, ಕಾವೇರಿ ಭಾಗದ ರೈತರು ಗಂಭೀರ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಇಷ್ಟೆಲ್ಲಾ ಜ್ವಲಂತ ಸಮಸ್ಯೆಗಳಿದ್ದರೂ ಬಿಜೆಪಿಯ ಯಾವೊಬ್ಬ ಶಾಸಕರೂ ತಮ್ಮ ಕ್ಷೇತ್ರದ ಜನರ ಸಮಸ್ಯೆಗಳ ಬಗ್ಗೆ ಮಾತನಾಡಲು ಅಥವಾ ಚರ್ಚಿಸಲು ಆಸಕ್ತಿ ತೋರಿಸಲಿಲ್ಲ ಎಂದು ನಾಗೇಂದ್ರ ವಾಗ್ದಾಳಿ ನಡೆಸಿದರು.

Share

Leave a comment

Leave a Reply

Your email address will not be published. Required fields are marked *

Related Articles