Home ದಾವಣಗೆರೆ 2029ಕ್ಕೆ ದೇಶಾದ್ಯಂತ ಅಹಿಂದಾಸ್ತ್ರಕ್ಕೆ ಕಾಂಗ್ರೆಸ್ ಹೈಕಮಾಂಡ್ ಪ್ಲ್ಯಾನ್: ಕಾದು ನೋಡುವ ತಂತ್ರಕ್ಕೆ ಮುಂದಾಗಿರೋ ಸಿದ್ದರಾಮಯ್ಯ ಕೈಯಲ್ಲಿ ಡಿಕೆಶಿ ಸಿಎಂ ಆಸೆ ಕನಸು!
ದಾವಣಗೆರೆನವದೆಹಲಿಬೆಂಗಳೂರು

2029ಕ್ಕೆ ದೇಶಾದ್ಯಂತ ಅಹಿಂದಾಸ್ತ್ರಕ್ಕೆ ಕಾಂಗ್ರೆಸ್ ಹೈಕಮಾಂಡ್ ಪ್ಲ್ಯಾನ್: ಕಾದು ನೋಡುವ ತಂತ್ರಕ್ಕೆ ಮುಂದಾಗಿರೋ ಸಿದ್ದರಾಮಯ್ಯ ಕೈಯಲ್ಲಿ ಡಿಕೆಶಿ ಸಿಎಂ ಆಸೆ ಕನಸು!

Share
ಸಿದ್ದರಾಮಯ್ಯ
Share

ನವದೆಹಲಿ: ಕರ್ನಾಟಕ ರಾಜಕಾರಣದಲ್ಲಿ ಭಾರಿ ರಾಜಕೀಯ ಮುನ್ನೆಡೆ ಚರ್ಚೆಗಳು ಶುರುವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಕಾಂಗ್ರೆಸ್ ಹೈಕಮಾಂಡ್ ದೆಹಲಿಯಲ್ಲಿ ಮಹತ್ವದ ಆಫರ್ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ಅವರನ್ನು ರಾಜ್ಯಸಭೆ ಮೂಲಕ ದೆಹಲಿಗೆ ಕರೆತಂದು, 2029ರ ಲೋಕಸಭಾ ಚುನಾವಣೆಗೆ ಪಕ್ಷದ ಪ್ರಮುಖ ರಾಷ್ಟ್ರೀಯ ಒಬಿಸಿ (OBC) ಮುಖಂಡರನ್ನಾಗಿ ಬಿಂಬಿಸಲು ಹೈಕಮಾಂಡ್ ಪ್ಲಾನ್ ಮಾಡಿದೆ.

ದೆಹಲಿಯಲ್ಲಿ ನಡೆದ 7 ಗಂಟೆಗಳ ಸುದೀರ್ಘ ಸಭೆಯಲ್ಲಿ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಈ ಪ್ರಸ್ತಾಪವನ್ನು ಇಟ್ಟಿದ್ದಾರೆ. ಆದರೆ ಸಿದ್ದರಾಮಯ್ಯ ಇದಕ್ಕೆ ತಕ್ಷಣ ಒಪ್ಪಿಗೆ ನೀಡದೆ ಕಾಲಾವಕಾಶ ಕೇಳಿದ್ದಾರೆ.

ಒಂದು ವೇಳೆ ಸಿದ್ದರಾಮಯ್ಯ ಒಪ್ಪಿದರೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಂದಿನ ಮುಖ್ಯಮಂತ್ರಿಯಾಗುವ ಸಾಧ್ಯತೆ ದಟ್ಟವಾಗಿದೆ. ಆದರೆ ಅಧಿಕೃತವಾಗಿ ಕಾಂಗ್ರೆಸ್ ನಾಯಕರು ಈ ನಾಯಕತ್ವ ಬದಲಾವಣೆಯ ಸುದ್ದಿಯನ್ನು ನಿರಾಕರಿಸಿದ್ದು, ಸಭೆಯಲ್ಲಿ ಕೇವಲ ರಾಜ್ಯಸಭಾ ಚುನಾವಣೆ ಬಗ್ಗೆ ಚರ್ಚೆಯಾಗಿದೆ ಎಂದಿದ್ದಾರೆ.

Share

Leave a comment

Leave a Reply

Your email address will not be published. Required fields are marked *