Home ಕ್ರೈಂ ನ್ಯೂಸ್ ಮನೆ ಮುಂದೆ ನಿತ್ಯವೂ ಕಾರು, ಬೈಕ್ ತೊಳೀತೀರಾ? ದಾವಣಗೆರೆ ಜನರೇ ಎಚ್ಚರ, ಕಟ್ ಆಗುತ್ತೆ ವಾಟರ್ ಕನೆಕ್ಷನ್!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಮನೆ ಮುಂದೆ ನಿತ್ಯವೂ ಕಾರು, ಬೈಕ್ ತೊಳೀತೀರಾ? ದಾವಣಗೆರೆ ಜನರೇ ಎಚ್ಚರ, ಕಟ್ ಆಗುತ್ತೆ ವಾಟರ್ ಕನೆಕ್ಷನ್!

Share
ದಾವಣಗೆರೆ
Share

ದಾವಣಗೆರೆ: ಮನೆ ಮುಂದೆ ಪ್ರತಿನಿತ್ಯ ವಾಹನ ತೊಳೀತೀರಾ. ಹಾಗಾದ್ರೆ ನಿಮಗೆ ಕಾದಿದೆ ಆಪತ್ತು. ಹೌದು. ದಾವಣಗೆರೆ ಜಿಲ್ಲಾಡಳಿತವು ನೀರು ಪೋಲು ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ.

ನಗರದಲ್ಲಿ ಬೆಳಗ್ಗಿನ ಅವಧಿಯಲ್ಲಿ ವಾಹನಗಳನ್ನು ತೊಳೆಯಲು ಹಾಗೂ ಮನೆ ಮುಂದಿನ ರಸ್ತೆಗಳಿಗೆ ಪೈಪ್‌ಗಳ ಮೂಲಕ ನೂರಾರು ಲೀಟರ್ ಕುಡಿಯುವ ನೀರನ್ನು ಅನಗತ್ಯವಾಗಿ ಪೋಲು ಮಾಡುತ್ತಿರುವುದು ಕಂಡುಬಂದಿದೆ.

ಇಂತಹ ಕೃತ್ಯಗಳಿಂದಾಗಿ ಡಾಂಬರು ರಸ್ತೆಗಳು ಹಾಳಾಗುತ್ತಿವೆ. ನೀರನ್ನು ಪೋಲು ಮಾಡುವ ಮನೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮಹಾನಗರ ಪಾಲಿಕೆಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ.

ಅಂತಹ ಮನೆಗಳಿಗೆ ಭಾರಿ ಮೊತ್ತದ ದಂಡ ವಿಧಿಸುವುದರ ಜೊತೆಗೆ ನೀರಿನ ಸಂಪರ್ಕವನ್ನು (Water Connection) ಕಡಿತಗೊಳಿಸಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಎಂ. ಗಂಗಾಧರ ಸ್ವಾಮಿ ತಿಳಿಸಿದ್ದಾರೆ.

ರಸ್ತೆಗಳೂ ಹಾಳಾಗುತ್ತಿವೆ, ನೀರೂ ಪೋಲಾಗುತ್ತಿದೆ!

ಬೆಳಗ್ಗಿನ ಅವಧಿಯಲ್ಲಿ ವಾಹನಗಳನ್ನು ತೊಳೆಯಲು ಹಾಗೂ ಮನೆ ಮುಂದಿನ ರಸ್ತೆಗಳಿಗೆ ಪೈಪ್‌ಗಳ ಮೂಲಕ ನೂರಾರು ಲೀಟರ್ ಕುಡಿಯುವ ನೀರನ್ನು ಅನಗತ್ಯವಾಗಿ ಪೋಲು ಮಾಡುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ಇಂತಹ ಕೃತ್ಯಗಳಿಂದಾಗಿ ಕೇವಲ ನೀರು ಪೋಲಾಗುತ್ತಿಲ್ಲ, ಬದಲಿಗೆ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಡಾಂಬರು ರಸ್ತೆಗಳೂ ಸಹ ಹಾಳಾಗುತ್ತಿವೆ ಎಂದು ಜಿಲ್ಲಾಡಳಿತ ಕಳವಳ ವ್ಯಕ್ತಪಡಿಸಿದೆ.

ಜಿಲ್ಲಾಧಿಕಾರಿಗಳ ಖಡಕ್ ಆದೇಶ ಏನೇನು?

ನೀರಿನ ದುರ್ಬಳಕೆ ತಡೆಯಲು ಜಿಲ್ಲಾಧಿಕಾರಿ ಜಿ. ಎಂ. ಗಂಗಾಧರ ಸ್ವಾಮಿ ಅವರು ಮಹಾನಗರ ಪಾಲಿಕೆಗೆ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಿದ್ದಾರೆ:

ಭಾರಿ ಮೊತ್ತದ ದಂಡ: ಕುಡಿಯುವ ನೀರನ್ನು ಅನಗತ್ಯವಾಗಿ ಪೋಲು ಮಾಡುವ ಮನೆಗಳಿಗೆ ದೊಡ್ಡ ಮೊತ್ತದ ಪೆನಾಲ್ಟಿ ವಿಧಿಸಲಾಗುವುದು.

ಕನೆಕ್ಷನ್ ಕಟ್: ದಂಡ ವಿಧಿಸುವುದಷ್ಟೇ ಅಲ್ಲದೆ, ಅಂತಹ ಮನೆಗಳ ನೀರಿನ ಸಂಪರ್ಕವನ್ನು (Water Connection) ತಕ್ಷಣವೇ ಕಡಿತಗೊಳಿಸಲು ಸೂಚಿಸಲಾಗಿದೆ.

ಜಿಲ್ಲಾಡಳಿತದ ಮನವಿ: ಕುಡಿಯುವ ನೀರು ಅತ್ಯಮೂಲ್ಯವಾಗಿದ್ದು, ಸಾರ್ವಜನಿಕರು ಜವಾಬ್ದಾರಿಯಿಂದ ಬಳಸಬೇಕು. ವಾಹನ ತೊಳೆಯಲು ಮತ್ತು ರಸ್ತೆ ಸ್ವಚ್ಛಗೊಳಿಸಲು ಕುಡಿಯುವ ನೀರನ್ನು ಪೈಪ್‌ಗಳ ಮೂಲಕ ಪೋಲು ಮಾಡುವುದನ್ನು ನಿಲ್ಲಿಸಬೇಕಾಗಿ ಜಿಲ್ಲಾಧಿಕಾರಿಗಳು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles