Home ದಾವಣಗೆರೆ ಆಸ್ತಿ ಹಾಗೂ ಅಕ್ರಮ ಸಂಬಂಧಕ್ಕೆ ತಂದೆಯನ್ನೇ ಬಲಿ ಪಡೆದ ಮಗಳು: ನಿವೃತ್ತ ಶಿಕ್ಷಕನ ಕೊಲೆ ಕೇಸ್‌ಗೆ ರೋಚಕ ತಿರುವು!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಆಸ್ತಿ ಹಾಗೂ ಅಕ್ರಮ ಸಂಬಂಧಕ್ಕೆ ತಂದೆಯನ್ನೇ ಬಲಿ ಪಡೆದ ಮಗಳು: ನಿವೃತ್ತ ಶಿಕ್ಷಕನ ಕೊಲೆ ಕೇಸ್‌ಗೆ ರೋಚಕ ತಿರುವು!

Share
ಶಿಕ್ಷಕ
Share

ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಚೌಡಿಹಾಳ ರಸ್ತೆ ಬಳಿ ನಡೆದಿದ್ದ 62 ವರ್ಷದ ನಿವೃತ್ತ ಶಿಕ್ಷಕ ಸಿದ್ದಪ್ಪ ಅಂಜುಟಗಿ ಅವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರೋಚಕ ಸತ್ಯವನ್ನು ಹೊರಗೆಳೆದಿದ್ದಾರೆ.

ತಂದೆಯ ಆಸ್ತಿ ವಿವಾದ ಹಾಗೂ ಆಕೆಯ ಅಕ್ರಮ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದೇ ಕೊಲೆಗೆ ಪ್ರಮುಖ ಕಾರಣ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.

ಮೃತರ ಹಿರಿಯ ಮಗಳು ನಿಖಿತಾ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಇಂಡಿ ನಗರ ಠಾಣೆ ಪೊಲೀಸರು, ಕಿರಿಯ ಮಗಳು ಪ್ರಿಯಾಂಕಾ ಹಾಗೂ ಆಕೆಯ ಪ್ರಿಯಕರ ಸಂತೋಷ್ (ಸಂತೋಷ್ ಸಿಂಧೆ) ನನ್ನು ಬಂಧಿಸಿದ್ದಾರೆ.

ದಾಳಿಯಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಆರೋಪಿ ಗುರುರಾಜ್ ಬಿರಾದಾರ್ ಪ್ರಸ್ತುತ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *