Home ಕ್ರೈಂ ನ್ಯೂಸ್ ಭಾರತ-ಪಾಕ್ ಗಡಿ ಬಂದ್ ನಡುವೆಯೂ ವಿಮಾನದಲ್ಲಿ ಬಂದ 150 ವಧುಗಳ ಕಲ್ಯಾಣ, ಇನ್ನೂ 300 ಮಂದಿ ನಿರೀಕ್ಷೆಯಲ್ಲಿದ್ದಾರೆ ಯುವತಿಯರು!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಭಾರತ-ಪಾಕ್ ಗಡಿ ಬಂದ್ ನಡುವೆಯೂ ವಿಮಾನದಲ್ಲಿ ಬಂದ 150 ವಧುಗಳ ಕಲ್ಯಾಣ, ಇನ್ನೂ 300 ಮಂದಿ ನಿರೀಕ್ಷೆಯಲ್ಲಿದ್ದಾರೆ ಯುವತಿಯರು!

Share
ಕಲ್ಯಾಣ
Share

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಕೈಗೊಂಡಿದ್ದ ‘ಆಪರೇಷನ್ ಸಿಂಧೂರ್’ ಹಾಗೂ ವಾಘಾ-ಅಟ್ಟಾರಿ ಗಡಿ ಬಂದ್‌ನಿಂದಾಗಿ ಪಾಕಿಸ್ತಾನದಲ್ಲಿ ಸಿಲುಕಿಕೊಂಡಿದ್ದ 150 ಸಿಂಧಿ ವಧುಗಳು, ಈಗ ಕೊನೆಗೂ ವಿಮಾನದ ಮೂಲಕ ಭಾರತಕ್ಕೆ ಆಗಮಿಸಿ ತಮ್ಮ ಕಲ್ಯಾಣವನ್ನು ನೆರವೇರಿಸಿಕೊಂಡಿದ್ದಾರೆ.

ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಯುವತಿಯರಿಗೆ ಭಾರತದ ಯುವಕರೊಂದಿಗೆ ನಿಶ್ಚಯವಾಗಿದ್ದ ಮದುವೆಗಳು, ಗಡಿ ನಿರ್ಬಂಧದಿಂದಾಗಿ ಅತಂತ್ರಗೊಂಡಿದ್ದವು. ವಾಘಾ-ಅಟ್ಟಾರಿ ಗಡಿ ಮಾರ್ಗವನ್ನು ಮುಚ್ಚಿದ್ದರಿಂದ ಕುಟುಂಬಗಳು ತೀವ್ರ ಸಂಕಷ್ಟ ಎದುರಿಸಬೇಕಾಯಿತು.

ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಿಂಧಿ ಸಮುದಾಯದ ಮುಖಂಡ ರಾಜೇಶ್ ಝಾಂಬಿಯಾ ಹಾಗೂ ರಾಯ್‌ಪುರದ ಶಾದಾನಿ ದರ್ಬಾರ್‌ನ ಆಧ್ಯಾತ್ಮಿಕ ಮುಖ್ಯಸ್ಥ ಸಂತ ಯುಧಿಷ್ಠಿರ್ ಲಾಲ್ ಅವರ ನೇತೃತ್ವದಲ್ಲಿ ಮುಖಂಡರು ಕೇಂದ್ರ ಗೃಹ ಸಚಿವಾಲಯವನ್ನು ಸಂಪರ್ಕಿಸಿದರು.

ಸಮುದಾಯದ ಮನವಿಗೆ ಸ್ಪಂದಿಸಿದ ಗೃಹ ಸಚಿವಾಲಯವು, ಭೂಮಾರ್ಗದ ಬದಲಿಗೆ ಕೇವಲ ವಿಮಾನದ ಮೂಲಕ (ಬಾಹ್ಯ ದೇಶಗಳ ಟ್ರಾನ್ಸಿಟ್ ಮಾರ್ಗವಾಗಿ) ಭಾರತ ಪ್ರವೇಶಿಸಲು ವಧುಗಳು ಹಾಗೂ ಅವರ ಸಂಬಂಧಿಕರಿಗೆ ವಿಶೇಷ ವಿಸಾ ಅನುಮತಿ ನೀಡಿತು.

ಇದರನ್ವಯ ದುಬೈ, ಒಮಾನ್, ಶ್ರೀಲಂಕಾ ಮತ್ತು ಬಾಂಗ್ಲಾದೇಶದಂತಹ ದೇಶಗಳ ಮಾರ್ಗವಾಗಿ ಕಳೆದ ಏಪ್ರಿಲ್‌ನಿಂದ ಇಲ್ಲಿವರೆಗೆ ಒಟ್ಟು 150 ಪಾಕಿಸ್ತಾನಿ ವಧುಗಳು ಭಾರತಕ್ಕೆ ಬಂದಿಳಿದಿದ್ದಾರೆ.

ನಾಗಪುರ, ರಾಯ್‌ಪುರ, ಜೋಧ್‌ಪುರ, ಪುಣೆ ಹಾಗೂ ಅಹಮದಾಬಾದ್ ಸೇರಿದಂತೆ ವಿವಿಧ ಭಾರತೀಯ ನಗರಗಳಲ್ಲಿ ಈ ವಿವಾಹಗಳು ನೆರವೇರಿವೆ. ಆದಾಗ್ಯೂ, ಇನ್ನೂ ಸುಮಾರು 300ಕ್ಕೂ ಅಧಿಕ ವಧುಗಳು ಪಾಕಿಸ್ತಾನದಲ್ಲಿ ವಿಸಾಕ್ಕಾಗಿ ಕಾಯುತ್ತಿದ್ದು, ಅವರಿಗೂ ಕೂಡ ಶೀಘ್ರದಲ್ಲೇ ವಿಸಾ ಒದಗಿಸುವಂತೆ ಸಮುದಾಯದ ವತಿಯಿಂದ ಭಾರತ ಸರ್ಕಾರಕ್ಕೆ ಮನವಿ ಮಾಡಲಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles