ಮುಂಬೈ: ಸಮಾಜದಲ್ಲಿ ಜಾತಿ ಆಧಾರಿತ ಅಸಮಾನತೆ ಮತ್ತು ತಾರತಮ್ಯ ಜೀವಂತವಾಗಿರುವವರೆಗೆ ಮೀಸಲಾತಿ ವ್ಯವಸ್ಥೆ ಮುಂದುವರಿಯಬೇಕು ಎಂದು ಆರ್ಎಸ್ಎಸ್ (RSS) ಸರಸಂಘಚಾಲಕ ಮೋಹನ್ ಭಾಗವತ್ ಪ್ರತಿಪಾದಿಸಿದ್ದಾರೆ. ಮುಂಬೈನ ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ನಲ್ಲಿ (NMACC) ಐಐಎಂಯುಎನ್ (IIMUN) ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ 2,000ಕ್ಕೂ ಹೆಚ್ಚು ಜ his Gen Z ಮತ್ತು Gen Alpha ಯುವಜನರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರ ದೃಷ್ಟಿಕೋನ ಅಗತ್ಯ:
ಮೀಸಲಾತಿಯನ್ನು ಸೀಮಿತಗೊಳಿಸಬೇಕೇ ಅಥವಾ ಹಿಂಪಡೆಯಬೇಕೇ ಎಂಬ ಪ್ರಶ್ನೆಗೆ ಉತ್ತರಿಸಿದ ಭಾಗವತ್, “ಡಾ. ಬಿ.ಆರ್. ಅಂಬೇಡ್ಕರ್ ಅವರು ಮೀಸಲಾತಿ ಕುರಿತು ಹೊಂದಿದ್ದ ದೃಷ್ಟಿಕೋನವನ್ನು ನಾವು ಪ್ರಾಮಾಣಿಕವಾಗಿ ಅನುಸರಿಸಬೇಕು. ಸಾಮಾಜಿಕ ಕಾರಣಗಳಿಗಾಗಿ ಮೀಸಲಾತಿ ಅಸ್ತಿತ್ವಕ್ಕೆ ಬಂದಿದೆ, ಹೀಗಾಗಿ ಸಮಾಜದಲ್ಲಿ ತಾರತಮ್ಯ ಇರುವವರೆಗೂ ಇದು ಇರಲಿದೆ” ಎಂದರು.
ಲಾಭ ಪಡೆದವರು ಸೌಲಭ್ಯ ಬಿಟ್ಟುಕೊಡಲಿ:
ಮೀಸಲಾತಿಯ ಸೌಲಭ್ಯವನ್ನು ಪಡೆದು ಸಾಮಾಜಿಕ ಹಾಗೂ ಆರ್ಥಿಕವಾಗಿ ಮುನ್ನಡೆ ಸಾಧಿಸಿರುವ ಕುಟುಂಬಗಳು ಅಥವಾ ವ್ಯಕ್ತಿಗಳು ತಮ್ಮ ಸಮುದಾಯದ ಇತರ ವಂಚಿತರಿಗೆ ಅವಕಾಶ ಮಾಡಿಕೊಡಲು ದೊಡ್ಡಮನಸ್ಸು ಮಾಡಬೇಕು. ಈ ರೀತಿಯ ಆಲೋಚನೆ ಈಗಾಗಲೇ ಮೀಸಲಾತಿ ಫಲಾನುಭವಿಗಳ ಕೆಲವು ವರ್ಗಗಳಲ್ಲಿ ಮೂಡುತ್ತಿರುವುದು ಸ್ವಾಗತಾರ್ಹ ಎಂದರು.
ಒಳಮೀಸಲಾತಿ ಮತ್ತು ರಾಜಕೀಯ ಮುಕ್ತ ಅನುಷ್ಠಾನ:
ಮೀಸಲಾತಿಯ ಪ್ರಯೋಜನಗಳು ಪ್ರತಿಯೊಬ್ಬರಿಗೂ ತಲುಪಬೇಕೆಂಬ ಉದ್ದೇಶದಿಂದ ಒಳಮೀಸಲಾತಿಯ ಬೇಡಿಕೆಗಳು ಎದ್ದಿವೆ. ಪ್ರಸ್ತುತ ಮೀಸಲಾತಿ ವಿಷಯ ರಾಜಕೀಯ ವಸ್ತುವಾಗಿರುವುದು ವಿಷಾದಕರ. ಇದನ್ನು ರಾಜಕೀಯ ಹಿತಾಸಕ್ತಿಗಳಿಂದ ದೂರವಿಟ್ಟು, ಸಾಮಾಜಿಕ ಏಕತೆಯ ಅಸ್ತ್ರವಾಗಿ ಪ್ರಾಮಾಣಿಕವಾಗಿ ಜಾರಿಗೊಳಿಸಿದರೆ, ಮೀಸಲಾತಿಯ ಅಗತ್ಯತೆ ಬೇಗನೇ ಕೊನೆಗೊಳ್ಳಲಿದೆ ಎಂದು ಭಾಗವತ್ ತಿಳಿಸಿದರು.





Leave a comment