Home ಕ್ರೈಂ ನ್ಯೂಸ್ ಮಹಿಳೆಯರು ಸಾರ್ವಜನಿಕ ವೇದಿಕೆಗಳಿಗೆ ಬರುವುದು “ಮಹಾ ವಿನಾಶಕ್ಕೆ” ಕಾರಣವೆಂಬ ಎ.ಪಿ. ಅಬೂಬಕರ್ ಮುಸ್ಲಿಯಾರ್ ಹೇಳಿಕೆ “ಪಾಂಡಿತ್ಯಪೂರ್ಣ ಅಭಿವ್ಯಕ್ತಿ”: ಮುಸ್ಲಿಂ ಲೀಗ್ ನಾಯಕರು!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಮಹಿಳೆಯರು ಸಾರ್ವಜನಿಕ ವೇದಿಕೆಗಳಿಗೆ ಬರುವುದು “ಮಹಾ ವಿನಾಶಕ್ಕೆ” ಕಾರಣವೆಂಬ ಎ.ಪಿ. ಅಬೂಬಕರ್ ಮುಸ್ಲಿಯಾರ್ ಹೇಳಿಕೆ “ಪಾಂಡಿತ್ಯಪೂರ್ಣ ಅಭಿವ್ಯಕ್ತಿ”: ಮುಸ್ಲಿಂ ಲೀಗ್ ನಾಯಕರು!

Share
ಎ.ಪಿ. ಅಬೂಬಕರ್
Share

ತಿರುವನಂತಪುರಂ: ಮಹಿಳೆಯರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಸಾರ್ವಜನಿಕ ಆಕ್ರೋಶಕ್ಕೆ ಗುರಿಯಾಗಿದ್ದ ಕೇರಳದ ಪ್ರಮುಖ ಸುನ್ನಿ ಧರ್ಮಗುರು ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರನ್ನು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್  ಪ್ರಮುಖ ನಾಯಕರು ಭೇಟಿ ಮಾಡಿ ಚರ್ಚಿಸಿದ್ದಾರೆ.

ಐಯುಎಂಎಲ್ ರಾಜ್ಯಾಧ್ಯಕ್ಷ ಪಾಣಕ್ಕಾಡ್ ಸಾದಿಕ್ ಅಲಿ ಶಿಹಾಬ್ ತಂಗಲ್ ಹಾಗೂ ಹಿರಿಯ ನಾಯಕ, ಸಚಿವ ಪಿ.ಕೆ. ಕುಂಞಾಲಿಕುಟ್ಟಿ ಅವರು ಕಾಂತಪುರಂ ಅವರನ್ನು ಭೇಟಿಯಾದರು. ಮಲೇಶಿಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ಧರ್ಮಗುರುಗಳ ಭೇಟಿಗೆ ಬಂದಿದ್ದ ಸಂದರ್ಭದಲ್ಲೇ ಈ ನಾಯಕರ ಸಭೆಯೂ ನಡೆದಿದ್ದು, ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.

ಸಮಸ್ತ ಕೇರಳ ಜಮೀ ಅಯ್ಯತುಲ್ ಉಲೇಮಾ ಇತ್ಯಾದಿ ಬಿಸಿಬಿಸಿ ರಾಜಕೀಯ ಬೆಳವಣಿಗೆಗಳ ನಡುವೆ, ಸಿಪಿಐ(ಎಂ) ಜೊತೆ ನಿಕಟ ಸಂಬಂಧ ಹೊಂದಿದ್ದ ಕಾಂತಪುರಂ ಬಣವು ಈಗ ಮುಸ್ಲಿಂ ಲೀಗ್‌ಗೆ ಹತ್ತಿರವಾಗುತ್ತಿದೆ ಎಂಬ ಮುನ್ಸೂಚನೆಯನ್ನು ಈ ಭೇಟಿ ನೀಡಿದೆ.

ಮಹಿಳೆಯರು ಸಾರ್ವಜನಿಕ ವೇದಿಕೆಗಳಿಗೆ ಬರುವುದು “ಮಹಾ ವಿನಾಶಕ್ಕೆ” ಕಾರಣವಾಗುತ್ತದೆ ಮತ್ತು ಇಸ್ಲಾಂನಲ್ಲಿ ಮಹಿಳೆಯರಿಗೆ ಪರ್ದಾ ಕಡ್ಡಾಯ ಎಂದು ಕಾಂತಪುರಂ ಹೇಳಿದ್ದರು. ಈ ಹೇಳಿಕೆಯನ್ನು ವಿಪಕ್ಷ ನಾಯಕ ವಿ.ಡಿ. ಸತೀಶನ್ ಸೇರಿದಂತೆ ಹಲವರು ತೀವ್ರವಾಗಿ ಖಂಡಿಸಿದ್ದರು. ಆದರೆ, ಮುಸ್ಲಿಂ ಲೀಗ್ ನಾಯಕರು ಧರ್ಮಗುರುಗಳ ಹೇಳಿಕೆಯನ್ನು “ಪಾಂಡಿತ್ಯಪೂರ್ಣ ಅಭಿವ್ಯಕ್ತಿ” ಎಂದು ಸಮರ್ಥಿಸಿಕೊಂಡಿದ್ದರು

Share

Leave a comment

Leave a Reply

Your email address will not be published. Required fields are marked *

Related Articles