Home ದಾವಣಗೆರೆ ಜಗಳೂರು ತಾಲ್ಲೂಕಿನ ಅಡಿಕೆ, ದಾಳಿಂಬೆ ಬೆಳೆಗಾರರಿಗೆ ಸುವಾರ್ತೆ: ಜೂನ್ 30 ರೊಳಗೆ ಬೆಳೆವಿಮೆ ಪಾವತಿಸಲು ಅವಕಾಶ
ದಾವಣಗೆರೆಬೆಂಗಳೂರುವಾಣಿಜ್ಯ

ಜಗಳೂರು ತಾಲ್ಲೂಕಿನ ಅಡಿಕೆ, ದಾಳಿಂಬೆ ಬೆಳೆಗಾರರಿಗೆ ಸುವಾರ್ತೆ: ಜೂನ್ 30 ರೊಳಗೆ ಬೆಳೆವಿಮೆ ಪಾವತಿಸಲು ಅವಕಾಶ

Share
ಜಗಳೂರು
Share

ದಾವಣಗೆರೆ: ಪ್ರಕೃತಿ ವಿಕೋಪ ಹಾಗೂ ಹವಾಮಾನ ವೈಪರೀತ್ಯದಿಂದ ನಷ್ಟ ಅನುಭವಿಸುವ ಜಗಳೂರು ತಾಲ್ಲೂಕಿನ ಅಡಿಕೆ ಮತ್ತು ದಾಳಿಂಬೆ ಬೆಳೆಗಾರರಿಗೆ ಪ್ರಸಕ್ತ ಸಾಲಿನ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆ ಅಡಿ ಪರಿಹಾರ ಪಡೆಯಲು ಉತ್ತಮ ಅವಕಾಶ ಕಲ್ಪಿಸಲಾಗಿದೆ.

ಬೆಳೆವಾರು ವಿಮೆ ಹಾಗೂ ಪ್ರೀಮಿಯಂ ವಿವರಗಳು: ತೋಟಗಾರಿಕೆ ಬೆಳೆಗಾರರು ಜೂನ್ 30ರ ಒಳಗಾಗಿ ಪ್ರೀಮಿಯಂ ಪಾವತಿಸಬೇಕಾಗಿದ್ದು, ಹೆಚ್.ಡಿ.ಎಫ್.ಸಿ ಎರ್ಗೋ (HDFC ERGO) ಸಂಸ್ಥೆಯನ್ನು ಅಧಿಕೃತ ವಿಮಾ ಕಂಪನಿಯನ್ನಾಗಿ ನಿಗದಿಪಡಿಸಲಾಗಿದೆ.

ಅಡಿಕೆ ಬೆಳೆ: ಪ್ರತಿ ಹೆಕ್ಟೇರ್‌ಗೆ ₹1,28,000 ವಿಮಾ ಮೊತ್ತಕ್ಕೆ ರೈತರು ₹6,400 ಪ್ರೀಮಿಯಂ ಪಾವತಿಸಬೇಕು.

ದಾಳಿಂಬೆ ಬೆಳೆ: ಪ್ರತಿ ಹೆಕ್ಟೇರ್‌ಗೆ ₹1,27,000 ವಿಮಾ ಮೊತ್ತಕ್ಕೆ ರೈತರು ₹6,350 ಪ್ರೀಮಿಯಂ ಪಾವತಿಸಬೇಕು.

ಅಗತ್ಯವಿರುವ ದಾಖಲೆಗಳು: ವಿಮೆ ಯೋಜನೆಗೆ ನೋಂದಾಯಿಸಿಕೊಳ್ಳಲು ರೈತರು ಪ್ರಸಕ್ತ ಸಾಲಿನ ಪಹಣಿ (RTC), ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಯೊಂದಿಗೆ ಹತ್ತಿರದ ಬ್ಯಾಂಕ್ ಶಾಖೆ ಅಥವಾ ನಾಗರಿಕ ಸೇವಾ ಕೇಂದ್ರಗಳನ್ನು (CSC) ಭೇಟಿ ಮಾಡಬಹುದು.

ಮಾಹಿತಿಗಾಗಿ ಸಂಪರ್ಕ ಸಂಖ್ಯೆಗಳು: ಹೆಚ್ಚಿನ ವಿವರಗಳಿಗಾಗಿ ಆಯಾ ಹೋಬಳಿಯ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಲಾಗಿದೆ:

ಕಸಬ ಹೋಬಳಿ (ಎಂ.ವಿ.ವಸಂತಕುಮಾರ): 7892366326

ಬಿಳಿಚೋಡು ಹೋಬಳಿ (ಗಜೇಂದ್ರ.ಎಸ್.ಕೆ): 8861239224

ಸೊಕ್ಕೆ ಹೋಬಳಿ (ಸುನೀಲ್ ಕುಮಾರ್.ಹೆಚ್.ಟಿ): 7899942287

Share

Leave a comment

Leave a Reply

Your email address will not be published. Required fields are marked *