Home ದಾವಣಗೆರೆ ವರ್ಷಕ್ಕೆ 1.30 ಲಕ್ಷ ಹೊಸ ವೈದ್ಯರು, 2030ರ ವೇಳೆಗೆ ಮೆಡಿಕಲ್ ಕ್ಷೇತ್ರದಲ್ಲಿ ಎದುರಾಗಲಿದೆಯೇ ಉದ್ಯೋಗ ಬಿಕ್ಕಟ್ಟು? ಡಾ. ಸಿ.ಎನ್. ಮಂಜುನಾಥ್ ಕಳವಳ ವ್ಯಕ್ತಪಡಿಸಿದ್ಯಾಕೆ?
ದಾವಣಗೆರೆನವದೆಹಲಿಬೆಂಗಳೂರು

ವರ್ಷಕ್ಕೆ 1.30 ಲಕ್ಷ ಹೊಸ ವೈದ್ಯರು, 2030ರ ವೇಳೆಗೆ ಮೆಡಿಕಲ್ ಕ್ಷೇತ್ರದಲ್ಲಿ ಎದುರಾಗಲಿದೆಯೇ ಉದ್ಯೋಗ ಬಿಕ್ಕಟ್ಟು? ಡಾ. ಸಿ.ಎನ್. ಮಂಜುನಾಥ್ ಕಳವಳ ವ್ಯಕ್ತಪಡಿಸಿದ್ಯಾಕೆ?

Share
ಡಾ. ಸಿ.ಎನ್. ಮಂಜುನಾಥ್
Share

ಬೆಂಗಳೂರು: ದೇಶದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದ್ದು, 2030ರ ವೇಳೆಗೆ ವೈದ್ಯರು ಕೂಡ ನಿರುದ್ಯೋಗ ಎದುರಿಸುವ ಸನ್ನಿವೇಶ ಸೃಷ್ಟಿಯಾಗಲಿದೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಹಾಗೂ ಖ್ಯಾತ ಹೃದ್ರೋಗ ತಜ್ಞ ಡಾ. ಸಿ.ಎನ್. ಮಂಜುನಾಥ್ ಎಚ್ಚರಿಸಿದ್ದಾರೆ.

ನಗರದಲ್ಲಿ ಏರ್ಪಡಿಸಲಾಗಿದ್ದ ‘ಕರ್ನಾಟಕ ಕ್ಲಿನಿಕಲ್ ಪರ್ಫ್ಯೂಷನಿಸ್ಟ್ಸ್ ಅಸೋಸಿಯೇಷನ್’  ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವರದಿಯ ಪ್ರಮುಖ ಮುಖ್ಯಾಂಶಗಳು: ವೈದ್ಯರ ಸಂಖ್ಯೆಯಲ್ಲಿ ಭಾರಿ ಏರಿಕೆ: ಪ್ರಸ್ತುತ ದೇಶದಲ್ಲಿ 825ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳಿದ್ದು, ಪ್ರತಿ ವರ್ಷ 1.30 ಲಕ್ಷಕ್ಕೂ ಅಧಿಕ ಎಂ.ಬಿ.ಬಿ.ಎಸ್ (MBBS) ಹಾಗೂ 90 ಸಾವಿರಕ್ಕೂ ಹೆಚ್ಚು ಸ್ನಾತಕೋತ್ತರ (PG) ಪದವೀಧರರು ಹೊರಬರುತ್ತಿದ್ದಾರೆ. ಕೌಶಲಾಧಾರಿತ ಶಿಕ್ಷಣಕ್ಕೆ ಆದ್ಯತೆ: ಉನ್ನತ ಪದವಿಗಳು ಅಥವಾ ಪಿಎಚ್‌.ಡಿ ಹೊಂದಿದ್ದರೂ ಸೂಕ್ತ ಕೆಲಸ ಸಿಗದ ಪರಿಸ್ಥಿತಿ ಬಂದೊದಗಿದೆ. ಆದರೆ ಕೌಶಲಯುತ ತಂತ್ರಜ್ಞರಿಗೆ (Technicians) ಸದಾ ಬೇಡಿಕೆ ಇದೆ. ಆದ್ದರಿಂದ ವಿದ್ಯಾರ್ಥಿಗಳು ಪದವಿಯೊಂದಿಗೆ ಪ್ರಾಯೋಗಿಕ ಕೌಶಲ ನೀಡುವ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಕಲಿಯಬೇಕು ಎಂದು ಸಲಹೆ ನೀಡಿದರು.

ಪರ್ಫ್ಯೂಷನಿಸ್ಟ್‌ಗಳ ಮಹತ್ವ:

ತೆರೆದ ಹೃದಯ ಶಸ್ತ್ರಚಿಕಿತ್ಸೆ (Open Heart Surgery) ವೇಳೆ ರಕ್ತದ ಪರಿಚಲನೆ ಯಂತ್ರದ ಮೂಲಕ ಸರಿಯಾಗಿ ನಡೆಯುವಂತೆ ನೋಡಿಕೊಳ್ಳುವಲ್ಲಿ ಪರ್ಫ್ಯೂಷನಿಸ್ಟ್‌ಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ. ಶಸ್ತ್ರಚಿಕಿತ್ಸಕರ ಮಿದುಳಿನಂತೆ ಕೆಲಸ ಮಾಡುವ ಇವರ ಮೇಲೆಯೇ ಶಸ್ತ್ರಚಿಕಿತ್ಸೆಯ ಯಶಸ್ಸು ನಿರ್ಧಾರವಾಗಿರುತ್ತದೆ. ಬೇಡಿಕೆ ಮತ್ತು ಶಿಫಾರಸು: ಭಾರತದಲ್ಲಿ ವರ್ಷಕ್ಕೆ ಸುಮಾರು 4 ಲಕ್ಷ ತೆರೆದ ಹೃದಯ ಶಸ್ತ್ರಚಿಕಿತ್ಸೆಗಳು ನಡೆಯುವುದರಿಂದ ಪರ್ಫ್ಯೂಷನ್‌ ತಂತ್ರಜ್ಞರಿಗೆ ಅಪಾರ ಉದ್ಯೋಗಾವಕಾಶಗಳಿವೆ. ಪಿಯುಸಿ (10+2) ನಂತರ ಬಿ.ಎಸ್ಸಿ ಪರ್ಫ್ಯೂಷನ್ ಟೆಕ್ನಾಲಜಿ ಕೋರ್ಸ್ ಲಭ್ಯವಿದ್ದು, ಹೃದಯ ಶಸ್ತ್ರಚಿಕಿತ್ಸಾ ಸೌಲಭ್ಯವಿರುವ ಪ್ರಮುಖ ಆಸ್ಪತ್ರೆಗಳಲ್ಲೇ ಈ ಕೋರ್ಸ್ ಪ್ರಾರಂಭಿಸಲು ಸಂಸದೀಯ ಸ್ಥಾಯಿ ಸಮಿತಿಗೆ ಶಿಫಾರಸು ಮಾಡುವುದಾಗಿ ತಿಳಿಸಿದರು.

Share

Leave a comment

Leave a Reply

Your email address will not be published. Required fields are marked *