SUDDIKSHANA KANNADA NEWS/ DAVANAGERE/ DATE:24-03-2024
ದಾವಣಗೆರೆ: ಬಣ್ಣ ಬಣ್ಣದ ರಂಗದೋಕುಳಿಗೆ ಬೆಣ್ಣೆನಗರಿ ಸಿದ್ಧವಾಗ್ತಿದೆ. ನಗರದ ರಾಮ್ ಅಂಡ್ ಕೋ ಸರ್ಕಲ್ ನಲ್ಲಿ ಮಾರ್ಚ್ 25ಕ್ಕೆ ಅದ್ಧೂರಿಯಾಗಿ ಹೋಳಿ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ನಗರದ ಬಹುತೇಕ ಕಡೆಗಳಲ್ಲಿ ಕಾಮದಹನ ನಡೆಸಲಾಗುತ್ತಿದೆ. ಸಾಂಪ್ರದಾಯಿಕವಾಗಿ ಕಾಮದಹನ ಮಾಡುವ ಮೂಲಕ ಹೋಳಿ ಆಚರಣೆಗೆ ಅದ್ಧೂರಿಯಾಗಿ ಅಕ್ಕಿ ವರ್ತಕರು ಚಾಲನೆ ನೀಡಿದರು.
ನಗರದ ಹಳೇ ದಾವಣಗೆರೆಯಲ್ಲಿ ಅಕ್ಕಿ ವರ್ತಕರು ಹೋಳಿ ಹುಣ್ಣಿಮೆ ಪ್ರಯುಕ್ತ ಮಾರ್ಚ್ 25ಕ್ಕೆ ನಡೆಯುವ ರಂಗೋತ್ಸವದ ಅಂಗವಾಗಿ ಕಾಮದಹನ ಮಾಡಿದರು. ಬಣ್ಣದೋಕುಳಿಗೆ ಅದ್ಧೂರಿಯಾಗಿ ಸಿದ್ಧತೆ ಮಾಡಿಕೊಂಡಿದ್ದಾರೆ.
ಅಕ್ಕಿ ವರ್ತಕರಾದ ಎಂ.ವಿ.ಜಯಪ್ರಕಾಶ್ ಮಾಗಿ, ಬಿ. ಪಿ. ಎಂ. ಜಗದೀಶ್, ಹಲವಾಗಲ ರುದ್ರೇಶ್, ಜಯರಾಜ್ ಮೇಟಿ, ಟಿ. ಎಸ್ .ಮಲ್ಲಿಕಾರ್ಜುನ, ಸತೀಶ್ ಹುಬ್ಬಳ್ಳಿ, ಪರುಶುರಾಮ್ ಪಿ.ಎಸ್, ಎ.ಬಿ. ಬಸವರಾಜ್,
ಶಾಸ್ತ್ರೀ ಬಸವರಾಜ್, ವಿನಾಯಕ ಬ್ಯಾಡಗಿ, ಮಾಳಗಿ ಸಿದ್ದು, ವಿಶ್ವನಾಥ ಬಾದಾಮಿ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಟಿ. ಪಾಟೀಲ್, ಟಿಂಕರ್ ಮಂಜಣ್ಣ, ಜಿ. ಬಿ. ಉಮೇಶ್, ಎಂ. ವೈ. ಆನಂದ್ ಮತ್ತಿತರರು ಕಾಮದಹಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.