SUDDIKSHANA KANNADA NEWS/ DAVANAGERE/ DATE:18-10-2024
ದಾವಣಗೆರೆ: ಕನ್ನಡ ಸಾಂಸ್ಕೃತಿಕ ಗತವೈಭವ ಅಕಾಡೆಮಿಯು ಅಕ್ಬೋಬರ್ 20ರಂದು ನಗರದ ಕುವೆಂಪು ಕನ್ನಡ ಭವನದಲ್ಲಿ ವಿವಿಧ ಸಾಧಕರಿಗೆ ಪ್ರಶಸ್ತಿ ಪ್ರದಾನ, ಬೆಳ್ಳಿಗನೂಡು ಜಿ.ಬಿ.ಮಾಲತೇಶ ಅವರ ಕನವರಿಕೆ ಕವನ ಸಂಕಲನ ಲೋಕಾರ್ಪಣೆ ಹಾಗೂ ರಾಜ್ಯಮಟ್ಟದ ಕವಿಗೋಷ್ಠಿ ಹಮ್ಮಿಕೊಂಡಿದೆ.
ದಾವಣಗೆರೆ ವಿವಿಯ ಕನ್ನಡ ವಿಭಾಗ ಮತ್ತು ಸಂಶೋಧನೆ ಕೇಂದ್ರದ ಡಾ. ವಿ. ಜಯರಾಮಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಕಸಾಪ ಅಧ್ಯಕ್ಷ ವಾಮದೇವಪ್ಪ ಕಾರ್ಯಕ್ರಮ ಉದ್ಘಾಟಿಸುವರು,
ಚಾಮರಾಜನಗರದ ಎಂವೈಎಫ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಆಡಳಿತಾಧಿಕಾರಿ ಮೊಹಮ್ಮದ್ ಸಾಬೀರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಶಿಕ್ಷಕ ಮತ್ತು ಸಾಹಿತಿ ಹಸನ್ ಬೆಳ್ಳಿಗನೂಡು
ಅವರು ಪುಸ್ತಕದ ಕುರಿತು ಪರಿಚಯ ಮಾಡಿಕೊಡಲಿದ್ದಾರೆ.
ದಾವಣಗೆರೆ ವಿವಿಯ ಜಿಆರ್ ಹಳ್ಳಿ ಕನ್ನಡ ಅಧ್ಯಯನ ವಿಭಾಗ ಮತ್ತು ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ ಡಾ. ಮಾಂತೇಶ್ ಪಾಟೀಲ್ ರಾಜ್ಯ ಮಟ್ಟದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ರಾಜ್ಯಮಟ್ಟದ
ಶಿಕ್ಷಕ ಪ್ರಶಸ್ತಿ ಪುರಸ್ಕೃತ ಡಾ. ಮಹೇಶ್ ಕೆ. ಎನ್. ಬರಲಿದ್ದಾರೆ.
ಫೌಝಿಯ ಸಲೀಂ ಅವರ 2022-23ನೆಯ ಸಾಲಿನ ಕ್ರಮವಾಗಿ 33-ಬಾಳಪಯಣ, ನೀ ದೂರ ಹೋದಾಗ ಕಾದಂಬರಿಗೆ ಅಝಾದ್ ಕಾದಂಬರಿ ಸಾಧಕ ಪ್ರಶಸ್ತಿ, ಸಂತೋಶ ಕುಮಾರ್ ಅವರ ಸಾಗರ ಸೃಷ್ಟಿ ಕಥಾ ಸಂಕಲನವು 2022ನೆಯ ಸಾಲಿನ
ಅಝಾದ್ ಕಥಾಸಾಧಕ ಪ್ರಶಸ್ತಿ, ಮತ್ತು ಸಂತೇಬೆನ್ನೂರು ಫೈಜ್ನಟ್ರಾಜ್ ಅವರ ನದಿಯೊಂದು ಕಡಲ ಹುಡುಕುತ್ತಾ ಕಥಾಸಂಕಲನವು 2023ನೆಯ ಸಾಲಿನ ಅಝಾದ್ ಕಥಾಸಾಧಕ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಸ್ಥೆಯ
ಅಧ್ಯಕ್ಷ ಡಾ. ಷಕೀಬ್ ಎಸ್. ಕಣದ್ಮನೆ ನವಿಲೇಹಾಳ್ ಅವರು ತಿಳಿಸಿದ್ದಾರೆ.