Home ದಾವಣಗೆರೆ ದಾವಣಗೆರೆ ಜಿ. ಪಂ. ನೂತನ ಸಿಇಒ ಸಾಹಿತ್ಯ ಎಂ. ಆಲದಕಟ್ಟೆ ನಿಯೋಜನೆ: ಐಎಎಸ್ ಅಧಿಕಾರಿ ಎಲ್ಲಿಯವರು? ಸಾಧನೆ ಹುಬ್ಬೇರಿಸುವಂಥದ್ದು!
ದಾವಣಗೆರೆನವದೆಹಲಿಬೆಂಗಳೂರು

ದಾವಣಗೆರೆ ಜಿ. ಪಂ. ನೂತನ ಸಿಇಒ ಸಾಹಿತ್ಯ ಎಂ. ಆಲದಕಟ್ಟೆ ನಿಯೋಜನೆ: ಐಎಎಸ್ ಅಧಿಕಾರಿ ಎಲ್ಲಿಯವರು? ಸಾಧನೆ ಹುಬ್ಬೇರಿಸುವಂಥದ್ದು!

Share
ದಾವಣಗೆರೆ
Share

ದಾವಣಗೆರೆ: ದಾವಣಗೆರೆ ಜಿಲ್ಲಾ ಪಂಚಾಯಿತಿ ಸಿಇಒ ಆಗಿ 2022ನೇ ಬ್ಯಾಚಿನ ಕರ್ನಾಟಕ ಕೆಡರ್‌ನ ಐಎಎಸ್ ಅಧಿಕಾರಿ ಸಾಹಿತ್ಯ ಎಂ. ಆಲದಕಟ್ಟಿ ನಿಯೋಜನೆಗೊಂಡಿದ್ದಾರೆ.

33 ವರ್ಷ ಪ್ರಾಯದ ಸಾಹಿತ್ಯ ಆಲದಕಟ್ಟಿ ಅವರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಮೂಲದವರಾಗಿದ್ದು, ಹುಬ್ಬಳ್ಳಿಯ ಬಿ.ವಿ. ಭೂಮರೆಡ್ಡಿ ಎಂಜಿನಿಯರಿಂಗ್‌ ಕಾಲೇಜಿನಿಂದ ಮಾಹಿತಿ ತಂತ್ರಜ್ಞಾನ (Information Science) ವಿಭಾಗದಲ್ಲಿ ಬಿ.ಇ ಪದವಿ ಪಡೆದಿದ್ದಾರೆ.

2021ರ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 250ನೇ ರ್‍ಯಾಂಕ್ ಗಳಿಸುವ ಮೂಲಕ ಐಎಎಸ್‌ ಅಧಿಕಾರಿಯಾಗಿ ಆಯ್ಕೆಯಾಗಿದ್ದರು. ಈ ಹಿಂದೆ ಕಲಬುರಗಿ ಉಪವಿಭಾಗದ ಸಹಾಯಕ ಆಯುಕ್ತರಾಗಿ (AC) ಹಾಗೂ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಸಿಇಒ ಆಗಿದ್ದ ಗಿತ್ತೆ ಮಾಧವ ವಿಠಲರಾವ್ ಅವರ ಜಾಗಕ್ಕೆ ಸಾಹಿತ್ಯ ಎಂ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

ಸಾಹಿತ್ಯ ಎಂ. ಆಲದಕಟ್ಟೆ ಅವರು ಕಲಬುರಗಿ ಜಿಲ್ಲೆಯ ಉಪವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.

ನೇರ ಆಯ್ಕೆ:

ಯುಪಿಎಸ್‍ಸಿ ನಾಗರಿಕ ಸೇವಾ ಪರೀಕ್ಷೆ ಉತ್ತೀರ್ಣರಾಗಿದ್ದ ಸಾಹಿತ್ಯ ಅವರು, ನೇರವಾಗಿ ಆಯ್ಕೆಯಾಗಿ ಗಮನ ಸೆಳೆದಿದ್ದರು. ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ದಾಖಲೆಗಳ ಪ್ರಕಾರ ‘01KN121K03’ ಐಎಡಿ ಗುರುತಿನ ಸಂಖ್ಯೆ ಹೊಂದಿದ್ದಾರೆ.

ಅಧಿಕಾರಿಯ ಪ್ರಮುಖ ವಿವರಗಳು:

ಹೆಸರು: ಸಾಹಿತ್ಯ ಎಂ. ಆಲದಕಟ್ಟಿ

ಸೇವೆ / ಬ್ಯಾಚ್: ಐಎಎಸ್ (IAS) – 2022

ಸೇವೆ ಸಲ್ಲಿಸಿದ ಸ್ಥಳ: ಹಿರಿಯ ಉಪವಿಭಾಗಾಧಿಕಾರಿ ಕಲಬುರಗಿ ಉಪವಿಭಾಗ

ನಿಯೋಜನೆ ದಿನಾಂಕ: 13 ಸೆಪ್ಟೆಂಬರ್ 2024 ರಿಂದ ಕಾರ್ಯನಿರ್ವಹಿಸಿದ್ದರು.

ವಿದ್ಯಾಭ್ಯಾಸ:

ಬಿ.ಇ. ಮಾಹಿತಿ ತಂತ್ರಜ್ಞಾನ (B.E. Information Science), ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU), ಬೆಳಗಾವಿ

ಬಿವಿಬಿ ಎಂಜಿನಿಯರಿಂಗ್ ಕಾಲೇಜು ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಸೈನಿಕ ಶಾಲೆಯ ಹಳೆಯ ವಿದ್ಯಾರ್ಥಿನಿಯಾಗಿರುವ ಇವರು ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನವರಾಗಿದ್ದಾರೆ.

Share

Leave a comment

Leave a Reply

Your email address will not be published. Required fields are marked *