ಗುರುಗ್ರಾಮ: ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಮಹಿಳಾ ಬೈಕರ್ (ಸಿಯಾ) ಅವರಿಗೆ ಕಾರಿನಿಂದ ಡಿಕ್ಕಿ ಹೊಡೆದು ಅಪಘಾತ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ಕಲ್ಯಾಣ್ ಬ್ಯಾಂಸ್ಲಾ ತಾನು ಬೇಕೆಂದೇ ಈ ಕೃತ್ಯ ಎಸಗಿಲ್ಲ ಎಂದು ಹೇಳಿಕೊಂಡಿದ್ದಾನೆ.
ಆನ್ಲೈನ್ನಲ್ಲಿ ಈ ಘಟನೆಯ ವೀಡಿಯೋ ವೈರಲ್ ಆದ ನಂತರ ಮತ್ತು ಪೊಲೀಸರು ಪ್ರಕರಣ ದಾಖಲಿಸಿಕೊಂಡ ಬಳಿಕ, ಕಲ್ಯಾಣ್ ಬ್ಯಾಂಸ್ಲಾ ಈ ಕುರಿತು ಮಾಧ್ಯಮಗಳಿಗೆ ತನ್ನ ಕಡೆಯ ವಿವರಣೆ ನೀಡಿದ್ದಾನೆ. “ಬೈಕ್ ಸವಾರರು ಪದೇ ಪದೇ ನನ್ನ ಕಾರಿನ ಮುಂದೆ ಬಂದು ವೇಗ ತಗ್ಗಿಸುತ್ತಿದ್ದರು. ನಾನು ಅವರನ್ನು ನಿಧಾನವಾಗಿ ಚಾಲನೆ ಮಾಡಲು ಹೇಳುತ್ತಿದ್ದೆ. ಆದರೆ, ಅವರು ಹಠಾತ್ ಆಗಿ ಬೈಕ್ ತಿರುಗಿಸಿದ್ದರಿಂದ ನಿಯಂತ್ರಣ ತಪ್ಪಿ ಕಾರು ಡಿಕ್ಕಿಯಾಗಿದೆ. ಬೈಕ್ನಲ್ಲಿ ಮಹಿಳೆ ಸವಾರಿ ಮಾಡುತ್ತಿದ್ದರೆಂಬುದು ನನಗೆ ತಿಳಿದಿರಲಿಲ್ಲ. ಆಕೆಗೆ ಗಾಯಗಳಾಗಿದ್ದಕ್ಕೆ ನನಗೆ ವಿಷಾದವಿದೆ,” ಎಂದು ಆತ ತಿಳಿಸಿದ್ದಾನೆ.
ಆದರೆ, ಸಂತ್ರಸ್ತೆ ಸಿಯಾ ಹಾಗೂ ಆಕೆಯ ಸಹ-ಸವಾರರು ಕಾರು ಚಾಲಕ ತಮ್ಮನ್ನು ಬೆನ್ನಟ್ಟಿ, ಬೇಜವಾಬ್ದಾರಿಯಿಂದ ಮತ್ತು ಆಕ್ರಮಣಕಾರಿಯಾಗಿ ಚಾಲನೆ ಮಾಡಿ ಡಿಕ್ಕಿ ಹೊಡೆದಿದ್ದಾನೆ ಎಂದು ಆರೋಪಿಸಿದ್ದಾರೆ. ಪ್ರಸ್ತುತ ಗುರುಗ್ರಾಮ ಪೊಲೀಸರು ಸ್ವಯಂಪ್ರೇರಿತ ದೂರು (Suo Motu FIR) ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.





Leave a comment