ದಾವಣಗೆರೆ: ಸಾವಿನ ನಂತರವೂ ಮತ್ತೊಬ್ಬರ ಬಾಳಿಗೆ ಬೆಳಕಾಗುವ ಮಹತ್ವದ ಮಾನವೀಯ ಕಾರ್ಯ ಅಂಗಾಂಗ ದಾನ. ಈ ಪ್ರತಿಜ್ಞೆ ಅಭಿಯಾನಕ್ಕೆ ನಗರದಲ್ಲಿ ಚಾಲನೆ ನೀಡಲಾಯಿತು.
ಎಸ್ ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್ ವತಿಯಿಂದ ಶನಿವಾರ ಪ್ರತಿಜ್ಞಾ ವಿಧಿ ಅಥವಾ ಅಂಗಾಂಗ ದಾನ ವಾಗ್ದಾನ ಅಭಿಯಾನದ ವಾಹನಕ್ಕೆ ಚಾಲನೆ ನೀಡಲಾಯಿತು.
ಸಾರ್ವಜನಿಕರಲ್ಲಿ ಅಂಗಾಂಗ ದಾನದ ಕುರಿತು ಜಾಗೃತಿ ಮೂಡಿಸುವುದರ ಜತೆಗೆ ಸ್ಥಳದಲ್ಲೇ ಪ್ರತಿಜ್ಞೆಗೆ ಸಹಿ ಹಾಕುವ ಅವಕಾಶ ನೀಡಲಾಗುತ್ತದೆ. ಅಂಗಾಂಗ ದಾನದ ಬಗ್ಗೆ ಸಮಗ್ರ ಮಾಹಿತಿ ಒಳಗೊಂಡ ಈ ವಿಶೇಷ ವಾಹನವು ದಾವಣಗೆರೆ, ಚಿತ್ರದುರ್ಗ, ಹಾವೇರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಸಂಚರಿಸಲಿದೆ. ಸಾರ್ವಜನಿಕರು ವಾಹನದ ಬಳಿ ಬಂದು ಸಹಿ ಮಾಡಬಹುದಾಗಿದೆ.
ಈ ಮೂಲಕ ಸಾರ್ವಜನಿಕರಿಂದ ವಾಗ್ದಾನ ಪಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಮಾಹಿತಿ ಪಡೆಯವ ಮೂಲಕ ಅಭಿಯಾನದಲ್ಲಿ ಪಾಲ್ಗೊಳ್ಳಬೇಕೆಂದು ಕೋರಲಾಗಿದೆ.
ಈ ಅಭಿಯಾನಕ್ಕೆ ಎಸ್.ಎಸ್. ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಎಸ್. ಪ್ರಸಾದ್, ವೈದ್ಯಕೀಯ ನಿರ್ದೇಶಕರಾದ ಡಾ. ಅರುಣ್ ಅಜ್ಜಪ್ಪ, ಎಸ್.ಎಸ್. ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್, ದಾವಣಗೆರೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸುನಿಲ್ ಭಂಡಾರಿಗಲ್ ಹಾಗೂ ಎಲ್ಲ ವೈದ್ಯರು ಮತ್ತು ಸಿಬ್ಬಂದಿ ಚಾಲನೆ ನೀಡಿದರು.
- awareness vehicle
- Chitradurga
- Davangere News
- Dr Arun Ajjappa
- Dr BS Prasad
- Haveri
- Karnataka health news
- organ donation campaign
- organ donation pledge
- SS Narayana Health Davanagere
- Sunil Bhandarigal
- Vijayanagara
- ಅಂಗಾಂಗ ದಾನ ಅಭಿಯಾನ
- ಅಂಗಾಂಗ ದಾನ ಪ್ರತಿಜ್ಞೆ
- ಆರೋಗ್ಯ ಸುದ್ದಿ
- ಎಸ್.ಎಸ್. ನಾರಾಯಣ ಹೆಲ್ತ್
- ಚಿತ್ರದುರ್ಗ
- ಜಾಗೃತಿ ರಥ
- ಡಾ ಅರುಣ್ ಅಜ್ಜಪ್ಪ
- ಡಾ ಬಿ ಎಸ್ ಪ್ರಸಾದ್
- ದಾವಣಗೆರೆ ಸುದ್ದಿ
- ವಿಜಯನಗರ
- ಸುನಿಲ್ ಭಂಡಾರಿಗಲ್
- ಹಾವೇರಿ





Leave a comment