ದಾವಣಗೆರೆ: ಮನೆಯಿಂದ ಹೊರ ಹೋದ ಒಂದೇ ಕುಟುಂಬದ ನಾಲ್ವರು ನಿಗೂಢ ರೀತಿಯಲ್ಲಿ ನಾಪತ್ತೆಯಾಗಿರುವ ಘಟನೆ ನಗರದ ಬನಶಂಕರಿ ಬಡಾವಣೆಯಲ್ಲಿ ನಡೆದಿದೆ.
ದಾವಣಗೆರೆ ತಾಲೂಕಿನ ಶ್ಯಾಗಲೆ ಗ್ರಾಮದ ರಮೇಶ್ ಕುಮಾರ್ ಅವರ ಕುಟುಂಬ ನಗರದ ಬನಶಂಕರಿ ಬಡಾವಣೆಯಲ್ಲಿ ವಾಸವಿತ್ತು. 38 ವರ್ಷದ ರಮೇಶ್, ಪತ್ನಿ ಜಯಶೀಲಾ (36), ಪುತ್ರ ಹಿತೇಶ್ (9) ಹಾಗೂ ಪುತ್ರಿ ಪ್ರೇರಣಾ (13) ನಿಗೂಢವಾಗಿ ಕಣ್ಮರೆಯಾಗಿರುವವರು.
ಬನಶಂಕರಿ ಬಡಾವಣೆಯಲ್ಲಿ ಷೇರು ಹೂಡಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ರಮೇಶ್ ಕಳೆದ ಕೆಲ ದಿನಗಳಿಂದ ನಷ್ಟ ಅನುಭವಿಸಿದ್ದರು. ಮಾತ್ರವಲ್ಲ, ಜನರಿಂದ ಹಣ ಸಂಗ್ರಹಿಸಿ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಷೇರು ಹೂಡಿಕೆಗಳಲ್ಲಿ ನಷ್ಟ ಅನುಭವಿಸಿದ್ದರಿಂದ ಹತಾಶರಾಗಿದ್ದರು ಎಂದು ಮೂಲಗಳು ತಿಳಿಸಿವೆ.
ರಮೇಶ್ ಕುಮಾರ್ ಅವರು ಆಗಸ್ಟ್ 14ರಂದು ಪೋಷಕರಿಗೆ ಕರೆ ಮಾಡಿದ್ದಾರೆ. ಈ ವೇಳೆ ಬೆಂಗಳೂರಿಗೆ ವ್ಯವಹಾರದ ಉದ್ದೇಶದಿಂದ ಹೋಗುತ್ತಿದ್ದೇನೆ. ಶಾಲೆಗೆ ರಜೆ ಇರುವ ಕಾರಣದಿಂದಾಗಿ ಪತ್ನಿ ಜಯಶೀಲಾ, ಮಕ್ಕಳಾದ ಹಿತೇಶ್ ಹಾಗೂ ಪ್ರೇರಣಾ ಅವರನ್ನು ಕರೆದುಕೊಂಡು ಹೋಗುತ್ತಿದ್ದೇನೆ. ಕಾರು ಮತ್ತು ಬೈಕ್ ಮನೆಯಲ್ಲಿ ಇದ್ದು, ಬ್ಯಾಗ್ ತೆಗೆದುಕೊಂಡು ಮನೆಯಿಂದ ಹೋಗುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ನಾಲ್ಕೈದು ದಿನಗಳಾದರೂ ಮನೆಗೆ ಬಾರದಿರುವುದನ್ನು ಗಮನಿಸಿದ ಪೋಷಕರು ವಿದ್ಯಾನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳು, ಮೊಬೈಲ್ ನೆಟ್ ವರ್ಕ್ ಸೇರಿದಂತೆ ಎಲ್ಲಾ ರೀತಿಯಲ್ಲಿಯೂ ಪತ್ತೆಗೆ ಬಲೆ ಬೀಸಿದ್ದಾರೆ.
- Banashankari nagar Davanagere
- Bengaluru
- CCTV Footage
- DAVANAGERE NEWS
- Karnataka crime news
- Missing family
- Ramesh Kumar missing
- Share market loss
- Vidyanagar Police Station
- ಕರ್ನಾಟಕ ಅಪರಾಧ ಸುದ್ದಿ
- ದಾವಣಗೆರೆ ಸುದ್ದಿ
- ನಿಗೂಢ ನಾಪತ್ತೆ
- ಬನಶಂಕರಿ ಬಡಾವಣೆ
- ಬೆಂಗಳೂರು
- ವಿದ್ಯಾನಗರ ಪೊಲೀಸ್ ಠಾಣೆ
- ಶ್ಯಾಗಲೆ ರಮೇಶ್ ಕುಮಾರ್
- ಷೇರು ಮಾರುಕಟ್ಟೆ ನಷ್ಟ
- ಸಿಸಿಟಿವಿ ದೃಶ್ಯ





Leave a comment