ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಬಿಜಿನೆಸ್ ಗಳಲ್ಲಿ ಲಾಭ ಆಗಬೇಕಾದರೆ ಏನು ಮಾಡಬೇಕು? ನೀವು ಆರ್ಥಿಕವಾಗಿ ಸಂಕಷ್ಟ ಏಕೆ? ಎದುರಿಸುತ್ತಿದ್ದೀರಿ…?

On: February 24, 2024 11:00 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:25-02-2024

ಜನ್ಮ ಕುಂಡಲಿಯಲ್ಲಿ ಈ ಗ್ರಹಗಳು ಇದ್ದರೆ ಆಗರ್ಭ ಶ್ರೀಮಂತರು….. ಧನ ಯೋಗ ಪ್ರಾಪ್ತಿ..

ಶ್ರೀ ಸೋಮಶೇಖರ್ ಗುರೂಜಿ B.Sc
Mob.No.9353488403
ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ,
ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.

ಪ್ರತಿಯೊಬ್ಬರೂ ಹಣಕ್ಕಾಗಿ ಶ್ರಮ ಪಟ್ಟು ದುಡಿಯುತ್ತಾರೆ. ತಮ್ಮ ಜಾತಕವನ್ನು ತೋರಿಸಿದಾಗಲೂ ಹಣದ ಬಗ್ಗೆ ಕೇಳುತ್ತಾರೆ. ಆಯಾ ರಾಶಿಗೆ ಅನುಗುಣವಾಗಿ ಯಾವ ಗ್ರಹವಿದ್ದರೆ ಧನ ಲಾಭವಾಗುವುದು ಎಂಬ ಮಾಹಿತಿ ಇಲ್ಲಿದೆ.

ಮೇಷ ಲಗ್ನ: ಸಿಂಹರಾಶಿಯಲ್ಲಿ ರವಿ, ಕುಂಭ ರಾಶಿಯಲ್ಲಿ ಗುರು ಚಂದ್ರರಿದ್ದರೆ ಧನವಂತನಾಗುವನು ಅಥವಾ ಜನ್ಮ ಲಗ್ನವಾದ ಮೇಷದಲ್ಲಿ ಕುಜ ಶುಕ್ರನಿಂದ ಕೂಡಿದ್ದರೆ ಧನವಂತನಾಗುವನು.

ವೃಷಭಲಗ್ನ: ಶುಕ್ರನುಬುಧ-ಶನಿಗಳಿಂದ ಕೂಡಿದ್ದರೆ ಧನವಂತನಾಗುವನು ಅಥವಾ ಲಗ್ನವನ್ನು ನೋಡಿದರೂ ಧನವಂತನಾಗುವನು.

ಮಿಥುನ ಲಗ್ನ: ಬುಧನು ಶನಿ-ಶುಕ್ರನಿಂದ ಕೂಡಿದ್ದರೆ ಬಹು ಧನವಂತನಾಗುವನು ಅಥವಾ ಈ ಲಗ್ನವನ್ನು ಬುಧ-ಶನಿ-ಶುಕ್ರರು ನೋಡಿದರೂ ಬಹು ಧನವಂತನಾಗುವನು.

ಕಟಕ ಲಗ್ನ: ಗುರು-ಕುಜರು ಇದ್ದು ಚಂದ್ರನಿಂದ ನೋಡಿದರೂ ಅಥವಾ ಈ ಲಗ್ನವನ್ನು ಕುಜ, ಗುರು, ಚಂದ್ರರು ನೋಡಿದರೂ ಬಹು ಧನವಂತನಾಗುವನು.

ಸಿಂಹ ಲಗ್ನ: ಧನಸ್ಸಿನಲ್ಲಿ ಗುರುವು ಮಿಥುನದಲ್ಲಿ ಚಂದ್ರರಿದ್ದರೆ ಧನವಂತನಾಗುವನು. ಅಲ್ಲದೆ ಲಗ್ನದಲ್ಲಿ ಸೂರ್ಯನು, ಕುಜನು ಬೃಹಸ್ಪತಿಗಳು ಕೂಡಿದ್ದರೂ, ನೋಡಿದರೂ ಧನವಂತನಾಗುವನು.

ಕನ್ಯಾ ಲಗ್ನ: ಮಕರದಲ್ಲಿ ಶನಿ, ಕರ್ಕಾಟಕದಲ್ಲಿ ಕುಜನಿದ್ದರೆ ಬಹು ಧನವಂತನಾಗುವನು. ಈ ಲಗ್ನಕ್ಕೆ ಶನಿ-ಕುಜರ ದೃಷ್ಟಿ ಇದ್ದರೂ ಧನವಂತನಾಗುವನು.

ತುಲಾ ಲಗ್ನ: ಲಗ್ನದಲ್ಲಿ ಶುಕ್ರನಿದ್ದು ಶನಿ-ಬುಧರಿಂದ ಕೂಡಿದ್ದರೆ ಅಥವಾ ಶನಿ-ಬುಧರಿಂದ ನೋಡಿದರೆ ಧನವಂತನಾಗುವನು.

ವೃಶ್ಚಿಕ ಲಗ್ನ: ಕುಜನಿದ್ದು ಚಂದ್ರ, ಶುಕ್ರ, ಶನಿ ಈ ಮೂರು ಗ್ರಹಗಳಿಂದ ಕೂಡಿದ್ದರೂ ಅಥವಾ ನೋಡಿದರೂ ಬಹು ಧನವಂತನಾಗುವನು.

ಧನಸ್ಸು ಲಗ್ನ: ಬೃಹಸ್ಪತಿಯಿದ್ದು ಬುಧ-ಅಂಗಾರಕರಿಂದ ಕೂಡಿದ್ದರೂ ಅಥವಾ ನೋಡಿದರೂ ಜಾತಕದವನು ಧನವಂತನಾಗುವನು.

ಮಕರ ಲಗ್ನ: ಶನಿಯಿದ್ದು ಶುಕ್ರನಿಂದ ಕೂಡಿದ್ದರೂ ಅಥವಾ ನೋಡಿದರೂ ಧನವಂತನಾಗುವನು.

ಕುಂಭ ಲಗ್ನ: ಶನಿಯು ಬುಧರಿಂದ ಕೂಡಿದ್ದರೂ ಧನವಂತನಾಗುವನು.

ಮೀನ ಲಗ್ನ: ಬೃಹಸ್ಪತಿಯಿದ್ದು ಬುಧ-ಅಂಗಾರಕರಿಂದ ಕೂಡಿದ್ದರೂ ಧನವಂತನಾಗುತ್ತಾನೆ.

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.

ಶ್ರೀ ಸೋಮಶೇಖರ್B.Sc
( ವಂಶಪಾರಂಪರಿತ)
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
Mob.No.93534 88403

ಯೋಗರಾಜ್

ಇದು ಡಿಜಿಟಲ್ ಯುಗ. ಕೈ ಬೆರಳಿನಲ್ಲೇ ಸುದ್ದಿಗಳು ಜನರಿಗೆ ತಲುಪಬೇಕು ಎಂಬುದು ನಮ್ಮ ಸದುದ್ದೇಶ. ಈಗಾಗಲೇ ಲಕ್ಷಾಂತರ ಓದುಗರನ್ನೊಳಗೊಂಡ ಈ ಡಿಜಿಟಲ್ ಮಾಧ್ಯಮ ಜನಮನ ಗೆದ್ದಿದೆ. ಡೈಲಿಹಂಟ್ ನಲ್ಲಿಯೂ ಜನರ ಕೈಬೆರಳಿನಲ್ಲೇ ಸಿಗುತ್ತದೆ. ದಾವಣಗೆರೆ, ಕೃಷಿ, ಉದ್ಯೋಗ, ವಾಣಿಜ್ಯ, ಅಪರಾಧ ಜಗತ್ತಿನ, ರಾಷ್ಟ್ರ, ಅಂತಾರಾಷ್ಟ್ರೀಯ ಸೇರಿದಂತೆ ಓದುಗರಿಗೆ ಬೇಕಾದ ಮಾಹಿತಿ ಒದಗಿಸಲಾಗುತ್ತಿದೆ. ಭಾರೀ ಮಟ್ಟದಲ್ಲಿ ಪ್ರತಿಕ್ರಿಯೆಯೂ ಬಂದಿದೆ, ಬರುತ್ತಲೇ ಇದೆ. ಓದುಗರು ನೀಡಿದ ಪ್ರೋತ್ಸಾಹ, ತೋರಿದ ಪ್ರೀತಿ, ನೀಡುತ್ತಿರುವ ಮಾರ್ಗದರ್ಶನವೇ ಈ ಮಾಧ್ಯಮ ಇಷ್ಟೊಂದು ಪ್ರಮಾಣದಲ್ಲಿ ಬೆಳೆಯಲು ಸಾಧ್ಯವಾಗಿದೆ. ದಾವಣಗೆರೆಯಲ್ಲಿ ನಂಬರ್ ಒನ್ ನ್ಯೂಸ್ ಪೋರ್ಟಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಎಷ್ಟೋ ಮಂದಿ ನ್ಯೂಸ್ ಪ್ರಕಟಿಸುವಂತೆ ಹೇಳುತ್ತಲೇ ಇದ್ದಾರೆ. ದಾವಣಗೆರೆ ಜಿಲ್ಲೆ ಮಾತ್ರವಲ್ಲ, ಬೇರೆ ಜಿಲ್ಲೆಗಳಿಂದಲೂ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಸ್ಥಳೀಯ ಸಮಸ್ಯೆಗಳು, ಜನರಿಗೆ ಮತ್ತಷ್ಟು ಹತ್ತಿರವಾಗುವ ಸದುದ್ದೇಶದಿಂದ ಸುದ್ದಿಗಳನ್ನು ಪ್ರಕಟಿಸಲಾಗುವುದು. ವೈಯಕ್ತಿಕ ವಿಚಾರ, ಆಸ್ತಿ ವಿಚಾರ, ಗಂಡ ಹೆಂಡತಿ ಸಮಸ್ಯೆಯಂಥ ಸುದ್ದಿಗಳನ್ನ ಬಿತ್ತರಿಸಲಾಗುವುದಿಲ್ಲ. ನಿಜವಾದ ಸಮಸ್ಯೆಗಳಿದ್ದರೆ ಖಂಡಿತವಾಗಿಯೂ ಪ್ರಕಟಿಸಲಾಗುವುದು. ಹಾಗಾಗಿ, ಹೊಸ ವೇದಿಕೆ ಕಲ್ಪಿಸಿಕೊಡಲಾಗುತ್ತಿದೆ. ವಾಟ್ಸಪ್ ನಂಬರ್: 96869-97836, ಇ-ಮೇಲ್ ವಿಳಾಸ: suddikshana.com ಈ ವಿಳಾಸಕ್ಕೆ ಕಳುಹಿಸಿಕೊಡಿ. ಅರ್ಹವಿದ್ದ ಸುದ್ದಿಗಳನ್ನು ಖಂಡಿತವಾಗಿಯೂ ಪ್ರಕಟಿಸಲಾಗುತ್ತದೆ. ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment