SUDDIKSHANA KANNADA NEWS/ DAVANAGERE/ DATE:03-10-2024
ದಾವಣಗೆರೆ: ಮಾಜಿ ಸಚಿವ ರೇಣುಕಾಚಾರ್ಯರ ಆತ್ಮಶುದ್ಧಿ ಕರ್ನಾಟಕ ನೋಡಿದೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೇರಿದಂತೆ ಕೆಲ ಬಿಜೆಪಿ ನಾಯಕರ ಆತ್ಮಶುದ್ಧಿ ಬಗ್ಗೆ ಮಾತನಾಡಿದ್ದಾರೆ. ಮೊದಲು ರೇಣುಕಾಚಾರ್ಯ ಆತ್ಮಶುದ್ಧಿ ಏನೆಂದು ತಿಳಿದುಕೊಳ್ಳಲಿ ಎಂದು ಬಿಜೆಪಿ ಮಾಜಿ ಅಧ್ಯಕ್ಷ ವೀರೇಶ್ ಹನಗವಾಡಿ ಲೇವಡಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರವಾಹ ಬಂದಾಗ ಒಂದೂವರೆ ಅಡಿ ನೀರಿನಲ್ಲಿ ತೆಪ್ಪ ಓಡಿಸಿದ ಮಹಾನ್ ನಾಯಕ. ರವೀಂದ್ರನಾಥ್ ಮನೆ ಅಡ್ಡ ಮಾಡಿಕೊಂಡಿದ್ದಾರೆ. ಪಕ್ಷ ಕಟ್ಟಿದ್ದಾರೆ. ಹಿರಿಯರು. ಅದರಲ್ಲಿ
ಎರಡೇ ಮಾತಿಲ್ಲ. ವಿನಾಕಾರಣ ಅವರಿಗೂ ಗೊಂದಲ ಉಂಟು ಮಾಡಿ ಹೇಳಿಕೆ ನೀಡುವಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮಾಜಿ ಶಾಸಕ ಗುರುಸಿದ್ದನಗೌಡ ಮಗನನ್ನು ಯಾಕೆ ಕಾಂಗ್ರೆಸ್ ಗೆ ಕಳುಹಿಸಿದರು. ಮೋದಿಗೆ ಹಿನ್ನೆಡೆ ಮಾಡಿದವರು ಪಕ್ಷ ನಿಷ್ಠೆ ಬಗ್ಗೆ ಮಾತನಾಡುತ್ತಾರೆ. ಸಮಸ್ಯೆ ಸರಿಹೋಗಲು ಬಿಡಲ್ಲ. ಅಗ್ಗದ ಪ್ರಚಾರ ಗೀಳು ಬಿಡಿ. ಭ್ರಮೆಯಲ್ಲಿದ್ದೀರಿ. ಯಾವ ಕಾರ್ಯಕರ್ತರಿಗೂ ನಿಮ್ಮ ಬಗ್ಗೆ ಅಭಿಮಾನ ಇಲ್ಲ ಎಂದು ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ವೀರೇಶ್ ಹನಗವಾಡಿ ಆಕ್ರೋಶ ವ್ಯಕ್ತಪಡಿಸಿದರು.