Home ದಾವಣಗೆರೆ “ಹೆಚ್ಚು ಮಾತನಾಡಿದರೆ ಜೈಲಿಗೆ ಹಾಕ್ತೀನಿ!” ಸಾವಿನ ಮನೆಯಲ್ಲಿ ರಸ್ತೆ ಸಮಸ್ಯೆ ಪ್ರಶ್ನಿಸಿದ್ದಕ್ಕೆ ಬೆದರಿಕೆ ಹಾಕಿದ ಬಿಜೆಪಿ ಶಾಸಕ!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

“ಹೆಚ್ಚು ಮಾತನಾಡಿದರೆ ಜೈಲಿಗೆ ಹಾಕ್ತೀನಿ!” ಸಾವಿನ ಮನೆಯಲ್ಲಿ ರಸ್ತೆ ಸಮಸ್ಯೆ ಪ್ರಶ್ನಿಸಿದ್ದಕ್ಕೆ ಬೆದರಿಕೆ ಹಾಕಿದ ಬಿಜೆಪಿ ಶಾಸಕ!

Share
ರಸ್ತೆ
Share

ಆಗ್ರಾ (ಉತ್ತರ ಪ್ರದೇಶ): ಸರಿಯಾದ ರಸ್ತೆ ಸೌಲಭ್ಯವಿಲ್ಲದೆ ಪರದಾಡುತ್ತಿರುವ ಬಗ್ಗೆ ಪ್ರಶ್ನೆ ಮಾಡಿದ ಗ್ರಾಮಸ್ಥರಿಗೆ ಉತ್ತರ ಪ್ರದೇಶದ ಶಾಸಕರೊಬ್ಬರು ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಆಗ್ರಾದ ಫತೇಹಾಬಾದ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಛೋಟೇಲಾಲ್ ವರ್ಮಾ ಅವರ ಈ ವರ್ತನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಘಟನೆಯ ಹಿನ್ನೆಲೆ:

ಇತ್ತೀಚೆಗೆ ಅನಾರೋಗ್ಯದಿಂದ ಮೃತಪಟ್ಟ ಸ್ಥಳೀಯ ನಿವಾಸಿ ಸಾಹಿ ರಾಮ್ ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಶಾಸಕ ಛೋಟೇಲಾಲ್ ವರ್ಮಾ ಗ್ರಾಮಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಕಳೆದ ಹಲವು ವರ್ಷಗಳಿಂದ ಕೆಟ್ಟುಹೋಗಿರುವ ರಸ್ತೆಯ ಬಗ್ಗೆ ಶಾಸಕರ ಗಮನಕ್ಕೆ ತಂದರು. ಮಳೆಗಾಲದಲ್ಲಿ ರಸ್ತೆ ಪೂರ್ತಿ ಕೆಸರುಮಯವಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ, ಆಂಬುಲೆನ್ಸ್ ಕೂಡ ಬರಲು ಸಾಧ್ಯವಾಗದೆ ರೋಗಿಗಳನ್ನು ಮಂಚದ ಮೇಲೆ ಹೊತ್ತು ತರಬೇಕಾದ ಪರಿಸ್ಥಿತಿ ಇದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

ಜೈಲಿಗೆ ಕಳುಹಿಸುವ ಬೆದರಿಕೆ:

ಗ್ರಾಮಸ್ಥರು ಪ್ರಶ್ನಿಸುತ್ತಿದ್ದಂತೆಯೇ ಕೋಪಗೊಂಡ ಶಾಸಕ ವರ್ಮಾ, “ಏಕೆ ಕಣ್ಣು ಉರಿಸುತ್ತಿದ್ದೀಯಾ? ನಿನಗೆ ಅಹಂಕಾರ ಹೆಚ್ಚಾಗಿದೆ. ಹೆಚ್ಚು ಮಾತನಾಡಿದರೆ ನಿನ್ನನ್ನು ಸರಿಪಡಿಸಿ ಜೈಲಿಗೆ ಕಳುಹಿಸುತ್ತೇನೆ” ಎಂದು ಸಾರ್ವಜನಿಕವಾಗಿ ಬೆದರಿಕೆ ಹಾಕಿದ್ದಾರೆ. ಶಾಸಕರು ಸಾಂತ್ವನ ಹೇಳಲು ಬಂದಿದ್ದಾರೋ ಅಥವಾ ಪೊಲೀಸರಿಂದ ಬೆದರಿಸಲು ಬಂದಿದ್ದಾರೋ ಎಂದು ಸಾಹಿ ರಾಮ್ ಅವರ ಕುಟುಂಬದ ಮಹಿಳೆಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಸಕರ ಸ್ಪಷ್ಟನೆ:

ಘಟನೆ ವೈರಲ್ ಆಗುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಶಾಸಕ ಛೋಟೇಲಾಲ್ ವರ್ಮಾ, “ನಾನು ಸಾಂತ್ವನ ಹೇಳಲು ಹೋದಾಗ ಕೆಲವು ವ್ಯಕ್ತಿಗಳು ನನ್ನೊಂದಿಗೆ ದುರ್ವರ್ತನೆ ತೋರಿದರು ಹಾಗೂ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ನಿಂದನೀಯ ಮಾತುಗಳನ್ನಾಡಿದರು. ಅವರ ಪ್ರಚೋದನೆಯಿಂದಾಗಿ ನಾನು ಖಾರವಾಗಿ ಮಾತನಾಡಬೇಕಾಯಿತು” ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles