SUDDIKSHANA KANNADA NEWS/ DAVANAGERE/ DATE:17-10-2024
ದಾವಣಗೆರೆ: ಮನೆ ಕಳ್ಳತನ ಮಾಡಿದ್ದ ಇಬ್ಬರು ಅಂತರಾಜ್ಯ ಕಳ್ಳರನ್ನು ಬಂಧಿಸಿ, ಸ್ವತ್ತು ಅನ್ನು ಆರ್ ಎಂ ಸಿ ಯಾರ್ಡ್ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಒರಿಸ್ಸಾ ರಾಜ್ಯದ ಸಂಬಲ್ ಪುರ ಜಿಲ್ಲೆಯ ಅತಾವೀರ ಗ್ರಾಮದ ನಂದಿನಿ ಅಲಿಯಾಸ್ ನಂದಿನಿ ಸಿಂಗ್ (32), ರುವೀ ಅಲಿಯಾಸ್ ರುಬೀ ಜಾನಿ ಬಂಧಿತ ಆರೋಪಿಗಳು.
ಅಕ್ಟೋಬರ್ 1ರಂದು ಆರ್ ಎಂ ಸಿ ರಸ್ತೆಯ ಮಂಜುನಾಥ ದೇವಸ್ಥಾನದ ಹಿಂಭಾಗದಲ್ಲಿ ವಾಸವಿದ್ದ ಕೊಟ್ರೇಶ್ ಆಚಾರಿ ಎಂಬುವವರು ತಮ್ಮ ಮನೆಯಲ್ಲಿಟ್ಟಿದ್ದ 57 ಗ್ರಾಂ ಬಂಗಾರದ ಆಭರಣಗಳು, 535 ಗ್ರಾಂ ಬೆಳ್ಳಿಯ ಆಭರಣಗಳು ಮತ್ತು 93,000 ರೂ ನಗದು ಹಣ ಕಳ್ಳತನವಾಗಿದ್ದು, ಆರೋಪಿ ಮತ್ತು ಸ್ವತ್ತು ಪತ್ತೆ ಮಾಡುವಂತೆ ಆರ್ ಎಂ ಸಿ ಯಾರ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಆರ್ ಎಂ ಸಿ ಯಾರ್ಡ್ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಸಚೀನ್ ಬಿರಾದಾರ್, ಪಿಎಸ್ ಐ ಪುಷ್ಪಲತಾ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು. ಇಬ್ಬರು ಆರೋಪಿತರಿಂದ ಸುಮಾರು 4,29,000 ರೂ. ಬೆಲೆ ಬಾಳುವ 57 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ 535 ಗ್ರಾಂ ತೂಕದ ಬೆಳ್ಳಿಯ ಆಭರಣಗಳು, 91,000 ರೂಪಾಯಿ ನಗದು ಹಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಪತ್ತೆ ಕಾರ್ಯ ತಂಡಕ್ಕೆ ಶ್ಲಾಘನೆ: ಈ ಪ್ರಕರಣದಲ್ಲಿ ಆರೋಪಿತರ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಅಧಿಕಾರಿಗಳಾದ ಆರ್.ಎಂ.ಸಿ ಯಾರ್ಡ್ ಠಾಣೆಯ ಪಿಎಸ್ಐ ಸಚಿನ್ ಬಿರಾದಾರ್, ಪಿಎಸ್ಐ ಪುಷ್ಪಲತಾ ಮತ್ತು ಸಿಬ್ಬಂದಿಯಾದ ಮಂಜುನಾಥ ಆರ್, ಸೈಯಾದ್ ಅಲಿ, ಮಂಜುನಾಥ ಜೆ,ಎಮ್, ಕರಿಬಸಪ್ಪ, ಕವಿತಾ ಪೂರದ್, ಶಾಹಿನಾ ಬಾನು ರವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅವರು ಶ್ಲಾಘಿಸಿದ್ದಾರೆ.