ಭೋಪಾಲ್: ಮಾಜಿ ಮಿಸ್ ಪುಣೆ ಹಾಗೂ ಬಹುಭಾಷಾ ನಟಿ ಟ್ವಿಶಾ ಶರ್ಮಾ (33) ಅವರ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರ ಅತ್ತೆ, ನಿವೃತ್ತ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ಅವರು ಟ್ವಿಶಾ ಪೋಷಕರ ವಿರುದ್ಧವೇ ಗಂಭೀರ ಹಣಕಾಸು ಮತ್ತು ವೈಯಕ್ತಿಕ ಆರೋಪಗಳನ್ನು ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಟ್ವಿಶಾ ಪೋಷಕರು ಆಕೆಯನ್ನು ಚಿಕ್ಕ ವಯಸ್ಸಿನಲ್ಲೇ ಗ್ಲಾಮರ್ ಜಗತ್ತಿಗೆ ತಳ್ಳಿ, ಆಕೆಯ ಗಳಿಕೆಯಲ್ಲೇ ಜೀವನ ಸಾಗಿಸುತ್ತಿದ್ದರು” ಎಂದು ಆರೋಪಿಸಿದ್ದಾರೆ.
ನೊಯ್ಡಾ ಮೂಲದ ಟ್ವಿಶಾ ಶರ್ಮಾ, ವಕೀಲ ಸಮರ್ಥ್ ಸಿಂಗ್ ಎಂಬುವವರನ್ನು ಪ್ರೀತಿಸಿ ಡಿಸೆಂಬರ್ 2025 ರಲ್ಲಿ ವಿವಾಹವಾಗಿದ್ದರು. ಮದುವೆಯಾದ ಕೇವಲ ಐದೇ ತಿಂಗಳಲ್ಲಿ, ಅಂದರೆ ಮೇ 12 ರಂದು ಭೋಪಾಲ್ನ ಕಟಾರಾ ಹಿಲ್ಸ್ನಲ್ಲಿರುವ ಪತಿಯ ಮನೆಯಲ್ಲಿ ಟ್ವಿಶಾ ಶವವಾಗಿ ಪತ್ತೆಯಾಗಿದ್ದರು.
ಟ್ವಿಶಾ ಕುಟುಂಬಸ್ಥರು ಇದು ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಎಂದು ಆರೋಪಿಸಿದ್ದರೆ, ಇತ್ತ ಅತ್ತೆ ಗಿರಿಬಾಲಾ ಸಿಂಗ್ ಅವರು ಟ್ವಿಶಾ ಮೇ 7 ರಂದು ಕುಟುಂಬದ ವಿರೋಧದ ನಡುವೆಯೂ ಗರ್ಭಪಾತದ ಮಾತ್ರೆಗಳನ್ನು ಸೇವಿಸಿದ್ದರು ಎಂದು ತಿರುಗೇಟು ನೀಡಿದ್ದಾರೆ.
ಪ್ರಸ್ತುತ ಈ ಪ್ರಕರಣದ ತನಿಖೆಗೆ 6 ಸದಸ್ಯರ ವಿಶೇಷ ತನಿಖಾ ತಂಡವನ್ನು (SIT) ರಚಿಸಲಾಗಿದೆ. ಭೋಪಾಲ್ ನ್ಯಾಯಾಲಯವು ನಿವೃತ್ತ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ಅವರಿಗೆ ನಿರಾಪೇಕ್ಷ ಜಾಮೀನು ಮಂಜೂರು ಮಾಡಿದ್ದು, ತಲೆಮರೆಸಿಕೊಂಡಿರುವ ಪತಿ ಸಮರ್ಥ್ ಸಿಂಗ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಆರೋಪಿ ಸಮರ್ಥ್ ಬಂಧನಕ್ಕೆ ಪೊಲೀಸರು ₹10,000 ಬಹುಮಾನ ಘೋಷಿಸಿದ್ದಾರೆ.
- Bhopal news
- Bhopal SIT investigation
- Dowry Harassment Case
- former Miss Pune death
- Giribala Singh
- Noida woman death
- Samarth Singh
- Twisha Sharma
- Twisha Sharma death case
- ಗಿರಿಬಾಲಾ ಸಿಂಗ್
- ಟ್ವಿಶಾ ಶರ್ಮಾ
- ಟ್ವಿಶಾ ಶರ್ಮಾ ಸಾವು ಪ್ರಕರಣ
- ಭೋಪಾಲ್ ಸುದ್ದಿ
- ಮಾಜಿ ಮಿಸ್ ಪುಣೆ
- ಮಾಡೆಲ್ ಆತ್ಮಹತ್ಯೆ ಭೋಪಾಲ್
- ವರದಕ್ಷಿಣೆ ಕಿರುಕುಳ ಪ್ರಕರಣ
- ವಿಶೇಷ ತನಿಖಾ ತಂಡ
- ಸಮರ್ಥ್ ಸಿಂಗ್





Leave a comment