SUDDIKSHANA KANNADA NEWS/ DAVANAGERE/ DATE:24-03-2024
ದಾವಣಗೆರೆ: ಯರಗುಂಟೆ 66/11 ವಿ.ವಿ ಕೇಂದ್ರದಿಂದ ಪೂರೈಕೆಯಾಗುವ ಚಿತ್ತಾನಹಳ್ಳಿ, ದೇವರಹಟ್ಟಿ, ಯರಗುಂಟೆ ಮತ್ತು ಅಮೃತನಗರ ಮಾರ್ಗ ವ್ಯಾಪ್ತಿಯಲ್ಲಿ ಎ.ಬಿ ಕೇಬಲ್ ಕಾಮಗಾರಿ ಇರುವುದರಿಂದ ಮಾರ್ಚ್ 24 ರಂದು ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಯರಗುಂಟೆ, ಅಶೋಕನಗರ ಕರೂರು, ದೊಡ್ಡಬೂದಿಹಾಳು, ಚಿಕ್ಕಬೂದಿಹಾಳು, ದೇವರಹಟ್ಟಿ, ಚಿತ್ತಾನಹಳ್ಳಿ, ಕಲ್ಪನಹಳ್ಳಿ ಮತ್ತು ಅಮೃತನಗರ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ. ಜನರು ಸಹಕರಿಸುವಂತೆ ಬೆಸ್ಕಾಂ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಅನಧಿಕೃತ ಚೀಟಿ ವ್ಯವಹಾರ ಕಾನೂನು ಬಾಹಿರ
ದಾವಣಗೆರೆ ನಗರದಲ್ಲಿ ಅನಧಿಕೃತ ಚೀಟಿ ವ್ಯವಹಾರ ಹೆಚ್ಚಿದ್ದು ಇದರಿಂದ ಸಾರ್ವಜನಿಕರಿಗೆ ಮೋಸ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ಹಿನ್ನೆಲೆಯಲ್ಲಿ ಅನಧಿಕೃತ ಚೀಟಿ ವ್ಯವಹಾರಗಳನ್ನು ನೆಡೆಸುವುದು ಕಾನೂನು ಬಾಹಿರವಾಗಿದ್ದು ಅಂತಹ ವ್ಯಕ್ತಿಗಳು ಮತ್ತು ಚೀಟಿ ಗುಂಪು ಪ್ರಾರಂಭಿಸಲು ಅನುಮತಿ ಪಡೆಯದೆ ಚೀಟಿ ನೆಡೆಸುವ ಸಂಸ್ಥೆ, ವ್ಯಕ್ತಿಗಳ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಸಹಕಾರ ಸಂಘಗಳ ಉಪ ನಿಬಂಧಕರಾದ ಹೆಚ್.ಅನ್ನಪೂರ್ಣ ತಿಳಿಸಿದ್ದಾರೆ.