Home ದಾವಣಗೆರೆ ದುರ್ಗೆ, ಲಕ್ಷ್ಮಿ ದೇವಿಯರ ಶ್ಲೋಕಗಳಿಗೆ ಆಕ್ಷೇಪವೇ? ಸೋನಿಯಾ ಗಾಂಧಿಗೆ ಪಾರ್ಲಿಮೆಂಟ್ ಕಾಯ್ದೆ ತೂರಿಬಿಸಾಡುವ ಹಕ್ಕಿದೆಯಾ?: ಸ್ಮೃತಿ ಇರಾನಿ ಕಿಡಿ
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ದುರ್ಗೆ, ಲಕ್ಷ್ಮಿ ದೇವಿಯರ ಶ್ಲೋಕಗಳಿಗೆ ಆಕ್ಷೇಪವೇ? ಸೋನಿಯಾ ಗಾಂಧಿಗೆ ಪಾರ್ಲಿಮೆಂಟ್ ಕಾಯ್ದೆ ತೂರಿಬಿಸಾಡುವ ಹಕ್ಕಿದೆಯಾ?: ಸ್ಮೃತಿ ಇರಾನಿ ಕಿಡಿ

Share
ಸೋನಿಯಾ ಗಾಂಧಿ
Share

ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಯಂದು ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ರಾಷ್ಟ್ರಗೀತೆ ‘ವಂದೇ ಮಾತರಂ’ ಗಾಯನ ನಡೆಯುತ್ತಿದ್ದಾಗ ಸೋನಿಯಾ ಗಾಂಧಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಮಾತನಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ, ಬಿಜೆಪಿ ನಾಯಕಿ ಸ್ಮೃತಿ ಇರಾನಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂಡಿಯಾ ಟುಡೇಗೆ ನೀಡಿದ ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ ಮಾತನಾಡಿದ ಸ್ಮೃತಿ ಇರಾನಿ, “ಭಾರತದ ಸಂಸತ್ತು ಒಂದು ವಿಷಯದ ಬಗ್ಗೆ ಕಾನೂನು ರೂಪಿಸಿದ ನಂತರ, ಆ ಕಾನೂನನ್ನು ಕಾಲದ ಕಸದ ಬುಟ್ಟಿಗೆ ಎಸೆಯುವ ಅನನ್ಯ ಹಕ್ಕು ಸೋನಿಯಾ ಗಾಂಧಿ ಅವರಿಗೆ ಇದೆಯೇ?” ಎಂದು ಪ್ರಶ್ನಿಸಿದ್ದಾರೆ. 1950ರಲ್ಲಿ ಸಂವಿಧಾನ ಸಭೆಯಲ್ಲಿ ಭಾರತದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ‘ಜನ ಗಣ ಮನ’ ಗೀತೆಗೆ ನೀಡಿದಷ್ಟೇ ಗೌರವವನ್ನು ‘ವಂದೇ ಮಾತರಂ’ ಗೀತೆಗೂ ನೀಡಬೇಕು ಎಂದು ಸ್ಪಷ್ಟಪಡಿಸಿದ್ದರು ಎಂಬುದನ್ನು ಅವರು ಈ ಸಂದರ್ಭದಲ್ಲಿ ನೆನಪಿಸಿದರು.

ವಂದೇ ಮಾತರಂ ಗೀತೆಯ 5 ಮತ್ತು 6 ನೇ ಚರಣಗಳಲ್ಲಿ ಬರುವ ದುರ್ಗಾದೇವಿ ಹಾಗೂ ಲಕ್ಷ್ಮಿ ದೇವಿಯರ ಕುರಿತ ಸಾಲುಗಳ ಬಗ್ಗೆ ಸೋನಿಯಾ ಗಾಂಧಿಯವರಿಗೆ ಆಕ್ಷೇಪವಿದೆಯೇ? “ಮಾ ಭಾರತಿ ಅಥವಾ ದುರ್ಗಾದೇವಿಯ ಬಗ್ಗೆ ಶ್ರೀಮತಿ ಗಾಂಧಿಯವರಿಗೆ ಏನು ಸಮಸ್ಯೆ ಇದೆ?” ಎಂದು ಸ್ಮೃತಿ ಇರಾನಿ ತೀವ್ರವಾಗಿ ಸವಾಲು ಎಸೆದಿದ್ದಾರೆ.

Share

Leave a comment

Leave a Reply

Your email address will not be published. Required fields are marked *