ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾದ ಸಮರ್ಥ್ ಶಾಮನೂರು ಅವರಿಗೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಅಭೂತಪೂರ್ವ ಅಭಿನಂದನೆ ಸಲ್ಲಿಸಿದರು.
ಶಾಸಕರ ಭರ್ಜರಿ ಜಯವನ್ನು ಸಂಭ್ರಮಿಸಲು ನಗರದ 28 ಮತ್ತು 37ನೇ ವಾರ್ಡ್ನ ಕಾಂಗ್ರೆಸ್ ಮುಖಂಡರು ಪಟಾಕಿ ಸಿಡಿಸಿ, ಪರಸ್ಪರ ಸಿಹಿತಿನಿಸಿ ವಿಜೃಂಭಣೆಯ ವಿಜಯೋತ್ಸವವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಮತ್ತು ಜನರ ವಿಶ್ವಾಸಕ್ಕೆ ತಕ್ಕಂತೆ ಕೆಲಸ ಮಾಡಲು ಶಾಸಕರಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು.
ಈ ವಿಜಯೋತ್ಸವದಲ್ಲಿ ಕಾಂಗ್ರೆಸ್ ಮುಖಂಡರಾದ ಚಾರ್ಲಿ, ಗಜೇಂದ್ರ ಜಗನ್ನಾಥ್, ಪಾಪಣ್ಣಿ, ಡೋಬಿ ಮಂಜಣ್ಣ, ಎಲೆಕ್ಟ್ರಿಕಲ್ ಅಶೋಕ, ಶಿವಕುಮಾರ್, ನಾಗರಾಜಣ್ಣ, ಪ್ರಕಾಶ್, ಚಂದ್ರಶೇಖರ್ ಜಗನ್ನಾಥ್, ಫಾಝಿಲ್ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡು ಸಂಭ್ರಮಿಸಿದರು.
- 28ನೇ ವಾರ್ಡ್ ಕಾಂಗ್ರೆಸ್
- 37ನೇ ವಾರ್ಡ್ ಅಭಿನಂದನೆ
- Congress Leaders Davanagere.
- Congress Victory Celebration
- DAVANAGERE NEWS
- DAVANAGERE SOUTH
- Karnataka Elections.
- Samarth Shamanur
- Samarth Shamanur MLA
- Ward 28 and 37 Congress
- ಕರ್ನಾಟಕ ರಾಜಕೀಯ
- ಕಾಂಗ್ರೆಸ್ ವಿಜಯೋತ್ಸವ
- ದಾವಣಗೆರೆ ದಕ್ಷಿಣ
- ದಾವಣಗೆರೆ ಸುದ್ದಿ
- ಶಾಮನೂರು ಶಿವಶಂಕರಪ್ಪ
- ಸಮರ್ಥ್ ಶಾಮನೂರು





Leave a comment