Home ಉದ್ಯೋಗ ವಾರ್ತೆ ಅಂಚೆ ಇಲಾಖೆಯಲ್ಲಿ ನೇರ ಪ್ರತಿನಿಧಿಗಳ ಹುದ್ದೆಗೆ ನೇರ ಸಂದರ್ಶನ – ಆಗಸ್ಟ್ 13, 14ಕ್ಕೆ ಹಾಜರಾಗಿ: ಎಸ್ಎಸ್ಎಲ್ಸಿ ಪಾಸಾದವರಿಗೆ ಸುವರ್ಣಾವಕಾಶ!
ಉದ್ಯೋಗ ವಾರ್ತೆದಾವಣಗೆರೆಬೆಂಗಳೂರು

ಅಂಚೆ ಇಲಾಖೆಯಲ್ಲಿ ನೇರ ಪ್ರತಿನಿಧಿಗಳ ಹುದ್ದೆಗೆ ನೇರ ಸಂದರ್ಶನ – ಆಗಸ್ಟ್ 13, 14ಕ್ಕೆ ಹಾಜರಾಗಿ: ಎಸ್ಎಸ್ಎಲ್ಸಿ ಪಾಸಾದವರಿಗೆ ಸುವರ್ಣಾವಕಾಶ!

Share
ಅಂಚೆ
Share

ಶಿವಮೊಗ್ಗ: ಶಿವಮೊಗ್ಗ ಅಂಚೆ ವಿಭಾಗದಲ್ಲಿ ಅಂಚೆ ಜೀವ ವಿಮೆ (PLI) ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ (RPLI) ಉತ್ಪನ್ನಗಳನ್ನು ಮಾರಾಟ ಮಾಡಲು ಅರ್ಹ ಅಭ್ಯರ್ಥಿಗಳಿಂದ ‘ನೇರ ಪ್ರತಿನಿಧಿ’ (Direct Agents) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳಿಗೆ ಆಗಸ್ಟ್ 13 ಮತ್ತು 14 ರಂದು ಬೆಳಿಗ್ಗೆ 11:00 ಗಂಟೆಗೆ ಶಿವಮೊಗ್ಗ ಕೋಟೆ ರಸ್ತೆಯಲ್ಲಿರುವ ಅಂಚೆ ಅಧೀಕ್ಷಕರ ಕಚೇರಿಯಲ್ಲಿ (ಶಿವಮೊಗ್ಗ-2) ನೇರ ಸಂದರ್ಶನ (Walk-in Interview) ನಡೆಯಲಿದೆ.

ಅರ್ಹತೆ ಮತ್ತು ವಯೋಮಿತಿ:

ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಕಡ್ಡಾಯವಾಗಿ SSLC (10ನೇ ತರಗತಿ) ಉತ್ತೀರ್ಣರಾಗಿರಬೇಕು.

ವಯೋಮಿತಿ: ಕನಿಷ್ಠ 18 ವರ್ಷ ಪೂರೈಸಿರಬೇಕು. ಗರಿಷ್ಠ ವಯೋಮಿತಿ ಇರುವುದಿಲ್ಲ.

ಯಾರಿಗೆ ಆದ್ಯತೆ?

ನಿರುದ್ಯೋಗಿ ಯುವಕರು, ಸ್ವಯಂ ಉದ್ಯೋಗಿಗಳು, ವಿವಿಧ ವಿಮಾ ಕಂಪನಿಗಳ ಮಾಜಿ ಏಜೆಂಟರು/ಸಲಹೆಗಾರರು, ಮಾಜಿ ಸೈನಿಕರು, ಅಂಗನವಾಡಿ ಹಾಗೂ ಮಹಿಳಾ ಮಂಡಳ ಕಾರ್ಯಕರ್ತೆಯರು ಮತ್ತು ನಿವೃತ್ತ ಗ್ರಾಮ ಪಂಚಾಯಿತಿ ಪ್ರತಿನಿಧಿಗಳಿಗೆ ಆದ್ಯತೆ ನೀಡಲಾಗುವುದು. ಮಾರಾಟ ಕ್ಷೇತ್ರ ಹಾಗೂ ಸಂವಹನ ಕೌಶಲ್ಯ ಹೊಂದಿರುವವರಿಗೆ ವಿಶೇಷ ಮುನ್ನಣೆ ಸಿಗಲಿದೆ.

ಪ್ರಮುಖ ನಿಯಮಗಳು:

ಆಯ್ಕೆಯಾದ ಪ್ರತಿನಿಧಿಗಳು ₹5,000 ಮೌಲ್ಯದ ರಾಷ್ಟ್ರೀಯ ಉಳಿತಾಯ ಪತ್ರ (NSC) ಅಥವಾ ಕಿಸಾನ್ ವಿಕಾಸ ಪತ್ರ (KVP) ರೂಪದಲ್ಲಿ ಭದ್ರತಾ ಠೇವಣಿ ಇಡಬೇಕಾಗುತ್ತದೆ. ಇಲಾಖೆಯ ನಿಯಮಗಳಂತೆ ವ್ಯವಹಾರದ ಆಧಾರದ ಮೇಲೆ ಪ್ರೋತ್ಸಾಹಧನ (ಕಮಿಷನ್) ನೀಡಲಾಗುತ್ತದೆಯೇ ಹೊರತು, ಯಾವುದೇ ಪ್ರತ್ಯೇಕ ಭತ್ಯೆ (TA/DA) ನೀಡುವುದಿಲ್ಲ.

ಅಗತ್ಯ ದಾಖಲೆಗಳು: ಅಭ್ಯರ್ಥಿಗಳು ಇತ್ತೀಚಿನ ಭಾವಚಿತ್ರ, ಸ್ವವಿವರ (Resume) ಹಾಗೂ ಶೈಕ್ಷಣಿಕ ದಾಖಲೆಗಳ ನಕಲು ಪ್ರತಿಯೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು.

  • ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9036842084 (ಅಂಚೆ ಜೀವ ವಿಮಾ ಅಭಿವೃದ್ಧಿ ಅಧಿಕಾರಿಗಳು).

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles