SUDDIKSHANA KANNADA NEWS/ DAVANAGERE/ DATE:14-10-2024
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡ ಜಾಮೀನು ಅರ್ಜಿ ವಜಾ ಆಗುತ್ತಿದ್ದಂತೆ ಕುಸಿದು ಬಿದ್ದ ಘಟನೆ ನಡೆದಿದೆ. ಮಾತ್ರವಲ್ಲ, ಆಕೆ ಕಣ್ಣೀರು ಹಾಕಿದ್ದಾಳೆ.
ಜಾಮೀನು ಸಿಕ್ಕೇ ಸಿಗುತ್ತದೆ ಎಂಬ ಬಲವಾದ ವಿಶ್ವಾಸದಲ್ಲಿದ್ದ ಪವಿತ್ರಾ ಗೌಡ ರಾತ್ರಿಯಿಂದಲೂ ಟೆನ್ಶನ್ ನಲ್ಲಿದ್ದಳು. ಮಾತ್ರವಲ್ಲ, ವಕೀಲರಾದ ಸಿ. ವಿ. ನಾಗೇಶ್ ಅವರ ಪ್ರಬಲ ವಾದ ಕೇಳಿದ್ದ ಪವಿತ್ರಾ ಗೌಡ ಬೇಲ್ ನಿರೀಕ್ಷೆಯಲ್ಲಿದ್ದಳು. ಜೈಲು ಹಕ್ಕಿಯಾದ ದಾಸನ ಪ್ರಿಯತಮೆ ಗಳಗಳನೇ ಅತ್ತುಬಿಟ್ಟಿದ್ದಾಳೆ.
ಜೈಲಲ್ಲಿ ಸುಬ್ಬಿ ಕಣ್ಣೀರು ಸುರಿಸಿದ್ದು, ಅತ್ತ ಸುಬ್ಬನೂ ಸಹ ದಿಗ್ಬ್ರಾಂತಕ್ಕೆ ಒಳಗಾಗಿದ್ದಾರೆ. ಬೆಂಗಳೂರಿನ 57 ನೇ ಸಿಸಿಹೆಚ್ ನ್ಯಾಯಾಲಯವು ಆದೇಶ ಪ್ರಕಟಿಸುತ್ತಿದ್ದಂತೆ ಪವಿತ್ರಾ ಗೌಡ ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ಸುತ್ತಮುತ್ತಲಿದ್ದವರು ಸಂತೈಸಲು ಮುಂದಾದರು. ಜಾಮೀನು ಅರ್ಜಿ ವಜಾಗೊಳ್ಳುತ್ತಿದ್ದಂತೆ ಅಯ್ಯೋ ಯಾಕೆ ಹಿಂಗಾಯ್ತು ಅಂತಾ ಪದೇ ಪದೇ ಬಡಬಡಾಯಿಸಿದ್ದಾಳೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.