SUDDIKSHANA KANNADA NEWS/ DAVANAGERE/ DATE:23-03-2024
ದಾವಣಗೆರೆ: ದಾವಣಗೆರೆ ಜಿಲ್ಲೆಯಾದ್ಯಂತ ಮಾರ್ಚ್ 25 ರಂದು ಹೋಳಿ ಹಬ್ಬದ ನಿಮಿತ್ತ ಬೆಳಿಗ್ಗೆ 6 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಜಿಲ್ಲೆಯಾದ್ಯಂತ ಮದ್ಯ ಮಾರಾಟ ಹಾಗೂ ಮದ್ಯ ಸರಬರಾಜು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ಆದೇಶಿಸಿದ್ದಾರೆ.
ಬಿಎಸ್ಎನ್ಎಲ್, ಪ್ರಾಚೈಸಿ ರಜಾ ದಿನವೂ ಒಪನ್:
ಬಿಎಸ್ಎನ್ಎಲ್ ಮತ್ತು ಪ್ರಾಚೈಸಿ ಎಲ್ಲಾ ಗ್ರಾಹಕರ ಸೇವಾ ಕೇಂದ್ರಗಳು ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯಲ್ಲಿ ಮಾರ್ಚ್ 24 ಭಾನುವಾರ, ರಜಾ ದಿನಗಳಾದ ಮಾ.29 ಮತ್ತು 31 ರಂದು ತೆರೆದಿರುತ್ತದೆ.
ಗ್ರಾಹಕರು ಇದರ ಸದುಪಯೋಗ ಮಾಡಿಕೊಳ್ಳಲು ಬಿಎಸ್ಎನ್ಎಲ್ ಡೆಪ್ಯೂಟಿ ಜನರಲ್ ಮ್ಯಾನೇಜರ್ ತಿಳಿಸಿದ್ದಾರೆ.