SUDDIKSHANA KANNADA NEWS/ DAVANAGERE/ DATE:16-10-2024
ದಾವಣಗೆರೆ: ಚನ್ನಗಿರಿ ತಾಲೂಕಿನ ದೇವರಹಳ್ಳಿ ನಾಡಕಚೇರಿಯ ಉಪತಹಶೀಲ್ದಾರ್ ಸುಧಾ ಮೂಡಲಗಿರಿಯಪ್ಪ ಅವರು, ಟ್ರ್ಯಾಕ್ಟರ್ ಖರೀದಿಗೆ ದೃಢೀಕರಣ ಪತ್ರ ನೀಡಲು 1500 ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಇನ್ನು ಲಂಚ ಹಣದ ಜೊತೆಗೆ ಉಪತಹಶೀಲ್ದಾರ್ ಸುಧಾ ಅವರನ್ನು ಲೋಕಾಯುಕ್ತರು ಬಂಧಿಸಿದ್ದಾರೆ. ಟ್ರ್ಯಾಕ್ಟರ್ ಖರೀದಿಗೆ ದೃಢೀಕರಣ (ಬೋನಾಫೈಡ್) ಪತ್ರ ನೀಡುವಂತೆ ಚನ್ನಗಿರಿ ತಾಲೂಕಿನ ಹಿರೇಗಂಗೂರು ಗ್ರಾಮದ ರೈತ ಎಸ್. ಆರ್. ಕುಮಾರ್ ಅವರು ಮನವಿ ಮಾಡಿದ್ದರು. ಇದನ್ನು ನೀಡಲು 2 ಸಾವಿರ ರೂಪಾಯಿ ಕೇಳಿದ್ದ ಸುಧಾ ಅವರು 1500 ರೂಪಾಯಿ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ.
ಟ್ರ್ಯಾಕ್ಟರ್ ಖರೀದಿಗೆ ಬೇಕಾಗಿದ್ದ ದೃಢೀಕರಣ ಪತ್ರಕ್ಕೆ ್ರ್ಡಿ ಸಲ್ಲಿಸಿದ್ದ ರೈತನಿಗೆ ಪತ್ರ ಹಸ್ತಾಂತರಕ್ಕೆ ಸುಧಾ ಅವರು ಹಣ ಕೇಳಿದ್ದರು. ಮುಂಗಡವಾಗಿ 500 ರೂಪಾಯಿ ಪಡೆದುಕೊಂಡಿದ್ದರು ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ.
ಈಗಾಗಲೇ 500 ರೂಪಾಯಿ ಕೊಟ್ಟದ್ದ ರೈತನು 1500 ರೂಪಾಯಿ ಹಣ ನೀಡಲು ಇಷ್ಟವಿಲ್ಲದ ಕಾರಣ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಲೋಕಾಯುಕ್ತ ಇನ್ ಸ್ಪೆಕ್ಟರ್ ಸಿ. ಮಧುಸೂದನ್ ಹಾಗೂ ಪಿ. ಸರಳಾ ನೇತೃತ್ವದ ತಂಡವು ದಾಳಿ ನಡೆಸಿ, ಭ್ರಷ್ಟ ಅಧಿಕಾರಿಯನ್ನು ಬಂಧಿಸಿದ್ದಾರೆ.