Home ದಾವಣಗೆರೆ ಜಿರಳೆಗಳು ಗಟಾರದಿಂದಲೇ ಬರುತ್ತವೆ: ‘ಜನರೇಷನ್ ಗಟರ್’ ವಿವಾದಕ್ಕೆ ಮತ್ತೆ ಕಿಚ್ಚು ಹಚ್ಚಿದ ಕಂಗನಾ ರಣಾವತ್ ಕೆಂಡ!
ದಾವಣಗೆರೆನವದೆಹಲಿಬೆಂಗಳೂರುಸಿನಿಮಾ

ಜಿರಳೆಗಳು ಗಟಾರದಿಂದಲೇ ಬರುತ್ತವೆ: ‘ಜನರೇಷನ್ ಗಟರ್’ ವಿವಾದಕ್ಕೆ ಮತ್ತೆ ಕಿಚ್ಚು ಹಚ್ಚಿದ ಕಂಗನಾ ರಣಾವತ್ ಕೆಂಡ!

Share
ಕಂಗನಾ ರಣಾವತ್
Share

ನವದೆಹಲಿ: ಯುವ ಪ್ರತಿಭಟನಾಕಾರರನ್ನು ಉದ್ದೇಶಿಸಿ ತಾವು ನೀಡಿದ್ದ “ಜನರೇಷನ್ ಗಟರ್” (Generation Gutter) ಎಂಬ ವಿವಾದಾತ್ಮಕ ಹೇಳಿಕೆಯನ್ನು ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ತಮ್ಮ ಹೇಳಿಕೆಯು ಇಡೀ ದೇಶದ ಯುವಜನತೆಯನ್ನು ಉದ್ದೇಶಿಸಿದ್ದಲ್ಲ, ಬದಲಿಗೆ ನಿರ್ದಿಷ್ಟ ಗುಂಪಿಗೆ ಮಾತ್ರ ಸೀಮಿತವಾಗಿತ್ತು ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಸುದ್ದಿ ಸಂಸ್ಥೆ ‘ಎಎನ್‌ಐ’ (ANI) ಜೊತೆ ಮಾತನಾಡಿದ ಕಂಗನಾ, “ತಮ್ಮನ್ನು ತಾವೇ ‘ಜಿರಳೆಗಳು’ ಎಂದು ಕರೆದುಕೊಳ್ಳುವವರು, ಗಟಾರದಿಂದ ಜಿರಳೆಗಳು ಹೊರಬರುತ್ತವೆ ಎಂದು ಹೇಳಿದಾಗ ಏಕೆ ಬೇಸರ ಮಾಡಿಕೊಳ್ಳಬೇಕು?” ಎಂದು ಪ್ರಶ್ನಿಸಿದ್ದಾರೆ. “ನಾನಂತೂ ನನ್ನನ್ನು ಜಿರಳೆ ಎಂದು ಭಾವಿಸುವುದಿಲ್ಲ. ಯಾರಾದರೂ ನಾನು ಗಟಾರದಲ್ಲಿ ವಾಸಿಸುತ್ತೇನೆ ಎಂದರೆ ಒಪ್ಪುವುದಿಲ್ಲ. ಆದರೆ ತಮ್ಮನ್ನು ತಾವೇ ಜಿರಳೆ ಎಂದು ಕರೆದುಕೊಂಡರೆ, ಅವರು ಗಟಾರದಲ್ಲೇ ವಾಸಿಸಬೇಕಾಗುತ್ತದೆ ಅಲ್ಲವೇ?” ಎಂದು ತಮ್ಮ ಮಾತುಗಳನ್ನು ಸಮರ್ಥಿಸಿಕೊಂಡಿದ್ದಾರೆ.

ಹಿನ್ನೆಲೆ ಏನು?

ನೀಟ್-ಯುಜಿ (NEET-UG) ಪರೀಕ್ಷಾ ಅಕ್ರಮ ಖಂಡಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ ಬ್ಯಾನರ್ ಅಡಿಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಯ ವಿಡಿಯೋಗಳನ್ನು ಉಲ್ಲೇಖಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದ ಕಂಗನಾ, “ಪ್ರತಿಭಟನೆಯಲ್ಲಿ ಬಳಸಲಾದ ಭಾಷೆ ಮತ್ತು ಶೈಲಿ ಅಸಹ್ಯಕರವಾಗಿದೆ” ಎಂದು ಟೀಕಿಸಿ, ‘ಜನರೇಷನ್ ಗಟರ್’ ಎಂದು ಕರೆದಿದ್ದರು.

ಕಂಗನಾ ಅವರ ಈ ಹೇಳಿಕೆಗೆ ನಟ ಸೋನು ಸೂದ್, ಎಐಎಂಐಎಂ ಮುಖಂಡ ವಾರಿಸ್ ಪಠಾಣ್ ಮತ್ತು ಕಾಂಗ್ರೆಸ್ ನಾಯಕ ಭಾಯಿ ಜಗತಾಪ್ ಸೇರಿದಂತೆ ಹಲವು ಗಣ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಕಂಗನಾ, ಮಾದಕ ವ್ಯಸನ, ಗ್ಯಾಂಬ್ಲಿಂಗ್ ಮತ್ತು ಡಾರ್ಕ್ ವೆಬ್‌ನಲ್ಲಿ ತೊಡಗಿರುವ ನಿರ್ದಿಷ್ಟ ಯುವಕರನ್ನು ಉದ್ದೇಶಿಸಿ ಮಾತನಾಡಿದ್ದು ಇಡೀ ದೇಶದ ಯುವಜನತೆಗೆ ನೀಡಿದ ಸಾರ್ವತ್ರಿಕ ಹೇಳಿಕೆಯಲ್ಲ ಎಂದು ವಿವರಿಸಿದ್ದಾರೆ

Share

Leave a comment

Leave a Reply

Your email address will not be published. Required fields are marked *