ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಮಿಸ್ ಮಾಡ್ಕೊಬೇಡಿ… ಫೆ. 13ರಿಂದ 15ರವರೆಗೆ ಪಾಲಿಕೆ ಎಲ್ಲಾ ವಾರ್ಡ್ ಗಳಲ್ಲಿ ಇ- ಆಸ್ತಿ ಖಾತಾ, ಆಸ್ತಿ ತೆರಿಗೆ ಪಾವತಿಗೆ ನಿಮಗೊಂದು ಸುವರ್ಣಾವಕಾಶ

On: February 11, 2024 8:54 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:12-02-2024

ದಾವಣಗೆರೆ: ಮಹಾನಗರ ಪಾಲಿಕೆಯ ಎಲ್ಲಾ ವಾರ್ಡ್ ಗಳಲ್ಲಿನ ಇ- ಆಸ್ತಿ ಖಾತಾ ಆಂದೋಲನ ಮತ್ತು ಆಸ್ತಿ ತೆರಿಗೆ ವಸೂಲಿ ಕಾರ್ಯಕ್ರಮವನ್ನು ಫೆಬ್ರವರಿ 13ರಿಂದ 15ರವರೆಗೆ ಏರ್ಪಡಿಸಲಾಗಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸ್ಥಿರಾಸ್ತಿಗಳನ್ನು ಇ- ಆಸ್ತಿ ತಂತ್ರಾಶಕ್ಕೆ ಒಳಪಡಿಸಿ ಇ- ಖಾತೆಗಳನ್ನು ವಿತರಿಸಲು ದಾವಣಗೆರೆ ಮಹಾನಗರ ಪಾಲಿಕೆಯ ವತಿಯಿಂದ ಇ- ಆಸ್ತಿ ಖಾತಾ ಆಂದೋಲನ, ಬಾಕಿಯಿರುವ ಆಸ್ತಿ ತೆರಿಗೆ, ನೀರು ಹಾಗೂ ಒಳಚರಂಡಿ ಶುಲ್ಕ ವಸೂಲಾತಿ ನಡೆಯಲಿದೆ. ನಗರದ ಸ್ಥಿರಾಸ್ತಿಗಳ ಮಾಲೀಕರು ಈ ಸುವರ್ಣಾವಕಾಶ ಸದುಪಯೋಗಪಡಿಸಿಕೊಂಡು ತಮ್ಮ ವಾರ್ಡ್ ವ್ಯಾಪ್ತಿಯ ವಲಯ ಕಚೇರಿ ಅಥವಾ ತಮ್ಮ ವಾರ್ಡ್ ನಲ್ಲಿ ನಿಗದಿಪಡಿಸಿದ ಇ- ಆಸ್ತಿ ಆಂದೋಲನ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ದಾಖಲಾತಿಗಳನ್ನು ಸಲ್ಲಿಸಿ ನೇರವಾಗಿ ತಮ್ಮ ಮನೆ ಬಾಗಿಲಿಗೆ ತಮ್ಮ ಆಸ್ತಿಗಳ ಇ- ಖಾತೆಯನ್ನು ಪಡೆದುಕೊಳ್ಳಬಹುದಾಗಿದೆ.

ಸಾರ್ವಜನಿಕರು ಇ- ಆಸ್ತಿ ಖಾತೆಗಳನ್ನು ಪಡೆಯಲು ಈ ದಾಖಲಾತಿಗಳನ್ನು ನೀಡಬೇಕು.

ಅರ್ಜಿ

  • ಅರ್ಜಿದಾರರ ಪಾಸ್ ಪೋರ್ಟ್ ಅಳತೆ ಭಾವಚಿತ್ರ ಮತ್ತು ನಿವೇಶನಯ ಮನೆಯ ಜಿಪಿಎಸ್ ಭಾವಚಿತ್ರ
  • ನೋಂದಣಿ ಕ್ರಯಪತ್ರ
  • ಇಸಿ 2023-24ನೇ ಸಾಲಿನಿಂದ ಈ ದಿನವರೆಗೆ ಪಾವತಿಸಿರುವ ಆಸ್ತಿ ತೆರಿಗೆ ಮತ್ತು ನೀರು ಮತ್ತು ಒಳಚರಂಡಿ ಶುಲ್ಕದ ಚಲನ್ ಗಳು
  • ಭೂ ಪರಿವರ್ತನೆ ಆದೇಶ (ಇಲ್ಲದಿದ್ದಲ್ಲಿ ಪಹಣಿ)
  • ಅನುಮೋದಿತ ಬಡಾವಣೆ ನಕ್ಷೆ ಮತ್ತು ಪರವಾನಗಿ
  • ಕಟ್ಟಡದ ಅನುಮೋದಿತ ನಕ್ಷೆ ಮತ್ತು ಪರವಾನಗಿ
  • ವಿದ್ಯುತ್ ಬಿಲ್ ಆರ್. ಆರ್. ನಂಬರ್

ಹೆಚ್ಚಿನ ಮಾಹಿತಿಗೆ ಈ ಕೆಳಕಂಡ ಮಹಾನಗರ ಪಾಲಿಕೆಯ ವಲಯ ಕಚೇರಿಗಳ ಆಯುಕ್ತರನ್ನು ಅಥವಾ ವಾರ್ಡ್ ನ ಕಂದಾಯ ಶಾಖೆಯ ಸಿಬ್ಬಂದಿ ಸಂಪರ್ಕಿಸುವಂತೆ ಕೋರಲಾಗಿದೆ.

ವಲಯ ಕಚೇರಿ- 01 ಎಸ್ ಎಂ ಕೃಷ್ಣ ನಗರ ದಾವಣಗೆರೆ – ಆಯುಕ್ತರಾದ ಸವಿತಾ ಎಂ. ಜಿ. ಮೊಬೈಲ್ – 98808-09146

ವಲಯ ಕಚೇರಿ – 02 ಹದಡಿ ರಸ್ತೆ, ಟಿವಿ ಸ್ಟೇಷನ್ ಹತ್ತಿರ, ದಾವಣಗೆರೆ: ಆಯುಕ್ತರಾದ ನಾಸೀರ್ ಬಾಷಾ ಮೊಬೈಲ್ – 94485-65904

ವಲಯ ಕಚೇರಿ-03 ಆಶ್ರಯ ಆಸ್ಪತ್ರೆಯ ಪಕ್ಕ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ: ಆಯುಕ್ತರಾದ ಕೆ. ನಾಗರಾಜ್ ಮೊಬೈಲ್ – 94826-86755

ಯೋಗರಾಜ್

ಇದು ಡಿಜಿಟಲ್ ಯುಗ. ಕೈ ಬೆರಳಿನಲ್ಲೇ ಸುದ್ದಿಗಳು ಜನರಿಗೆ ತಲುಪಬೇಕು ಎಂಬುದು ನಮ್ಮ ಸದುದ್ದೇಶ. ಈಗಾಗಲೇ ಲಕ್ಷಾಂತರ ಓದುಗರನ್ನೊಳಗೊಂಡ ಈ ಡಿಜಿಟಲ್ ಮಾಧ್ಯಮ ಜನಮನ ಗೆದ್ದಿದೆ. ಡೈಲಿಹಂಟ್ ನಲ್ಲಿಯೂ ಜನರ ಕೈಬೆರಳಿನಲ್ಲೇ ಸಿಗುತ್ತದೆ. ದಾವಣಗೆರೆ, ಕೃಷಿ, ಉದ್ಯೋಗ, ವಾಣಿಜ್ಯ, ಅಪರಾಧ ಜಗತ್ತಿನ, ರಾಷ್ಟ್ರ, ಅಂತಾರಾಷ್ಟ್ರೀಯ ಸೇರಿದಂತೆ ಓದುಗರಿಗೆ ಬೇಕಾದ ಮಾಹಿತಿ ಒದಗಿಸಲಾಗುತ್ತಿದೆ. ಭಾರೀ ಮಟ್ಟದಲ್ಲಿ ಪ್ರತಿಕ್ರಿಯೆಯೂ ಬಂದಿದೆ, ಬರುತ್ತಲೇ ಇದೆ. ಓದುಗರು ನೀಡಿದ ಪ್ರೋತ್ಸಾಹ, ತೋರಿದ ಪ್ರೀತಿ, ನೀಡುತ್ತಿರುವ ಮಾರ್ಗದರ್ಶನವೇ ಈ ಮಾಧ್ಯಮ ಇಷ್ಟೊಂದು ಪ್ರಮಾಣದಲ್ಲಿ ಬೆಳೆಯಲು ಸಾಧ್ಯವಾಗಿದೆ. ದಾವಣಗೆರೆಯಲ್ಲಿ ನಂಬರ್ ಒನ್ ನ್ಯೂಸ್ ಪೋರ್ಟಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಎಷ್ಟೋ ಮಂದಿ ನ್ಯೂಸ್ ಪ್ರಕಟಿಸುವಂತೆ ಹೇಳುತ್ತಲೇ ಇದ್ದಾರೆ. ದಾವಣಗೆರೆ ಜಿಲ್ಲೆ ಮಾತ್ರವಲ್ಲ, ಬೇರೆ ಜಿಲ್ಲೆಗಳಿಂದಲೂ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಸ್ಥಳೀಯ ಸಮಸ್ಯೆಗಳು, ಜನರಿಗೆ ಮತ್ತಷ್ಟು ಹತ್ತಿರವಾಗುವ ಸದುದ್ದೇಶದಿಂದ ಸುದ್ದಿಗಳನ್ನು ಪ್ರಕಟಿಸಲಾಗುವುದು. ವೈಯಕ್ತಿಕ ವಿಚಾರ, ಆಸ್ತಿ ವಿಚಾರ, ಗಂಡ ಹೆಂಡತಿ ಸಮಸ್ಯೆಯಂಥ ಸುದ್ದಿಗಳನ್ನ ಬಿತ್ತರಿಸಲಾಗುವುದಿಲ್ಲ. ನಿಜವಾದ ಸಮಸ್ಯೆಗಳಿದ್ದರೆ ಖಂಡಿತವಾಗಿಯೂ ಪ್ರಕಟಿಸಲಾಗುವುದು. ಹಾಗಾಗಿ, ಹೊಸ ವೇದಿಕೆ ಕಲ್ಪಿಸಿಕೊಡಲಾಗುತ್ತಿದೆ. ವಾಟ್ಸಪ್ ನಂಬರ್: 96869-97836, ಇ-ಮೇಲ್ ವಿಳಾಸ: suddikshana.com ಈ ವಿಳಾಸಕ್ಕೆ ಕಳುಹಿಸಿಕೊಡಿ. ಅರ್ಹವಿದ್ದ ಸುದ್ದಿಗಳನ್ನು ಖಂಡಿತವಾಗಿಯೂ ಪ್ರಕಟಿಸಲಾಗುತ್ತದೆ. ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment