Home ದಾವಣಗೆರೆ ಮನೆಮನೆಗೆ ಕಾಂಗ್ರೆಸ್ ತಲುಪಿಸಿ: BLA ಕಾರ್ಯಕರ್ತರಿಗೆ ಶಾಸಕ ಸಮರ್ಥ್ ಶಾಮನೂರು ಮಾರ್ಗದರ್ಶನ
ದಾವಣಗೆರೆಬೆಂಗಳೂರು

ಮನೆಮನೆಗೆ ಕಾಂಗ್ರೆಸ್ ತಲುಪಿಸಿ: BLA ಕಾರ್ಯಕರ್ತರಿಗೆ ಶಾಸಕ ಸಮರ್ಥ್ ಶಾಮನೂರು ಮಾರ್ಗದರ್ಶನ

Share
ಸಮರ್ಥ್ ಶಾಮನೂರು
Share

ದಾವಣಗೆರೆ: ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಲಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರು, ಬೂತ್ ಮಟ್ಟದ ಸಂಘಟಕರು (BLA) ಹಾಗೂ ಪಕ್ಷದ ಕಾರ್ಯಕರ್ತರ ಜೊತೆ ಶಾಸಕ ಸಮರ್ಥ್ ಶಾಮನೂರು ಅವರು ಸಭೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿ, ಪಕ್ಷದ ತಳಮಟ್ಟದ ಸಂಘಟನೆಯೇ ಕಾಂಗ್ರೆಸ್‌ನ ಶಕ್ತಿಯಾಗಿದ್ದು, ಪ್ರತಿಯೊಬ್ಬ BLA ಹಾಗೂ ಕಾರ್ಯಕರ್ತರು ಮತದಾರರ ಪಟ್ಟಿಯ ಪರಿಷ್ಕರಣೆ ಸೇರಿದಂತೆ ಪಕ್ಷದ ಸಂಘಟನಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಅಲ್ಲದೆ, ಪಕ್ಷದ ಸಿದ್ಧಾಂತ ಮತ್ತು ಜನಪರ ಕಾರ್ಯಕ್ರಮಗಳನ್ನು ಮನೆಮನೆಗೆ ತಲುಪಿಸುವ ಮೂಲಕ ಸಂಘಟನೆಯನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕೆಂದು ಸಲಹೆ ನೀಡಿದರು.

ಸಭೆಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಕಾರ್ಯದರ್ಶಿ ಹಾಗೂ ಜಿಲ್ಲಾ ಕಾಂಗ್ರೆಸ್ ವೀಕ್ಷಕರಾದ ರಾಹುಲ್ ಬಾಲ್ ಉಪಸ್ಥಿತರಿದ್ದು, ಪಕ್ಷದ ಸಂಘಟನಾ ಚಟುವಟಿಕೆಗಳ ಕುರಿತು ಮಾರ್ಗದರ್ಶನ ನೀಡಿದರು.

ಈ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ವಿವಿಧ ಪದಾಧಿಕಾರಿಗಳು, ಮುಖಂಡರು, ಬೂತ್ ಮಟ್ಟದ ಸಂಘಟಕರು (BLA) ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Grassroot Organization is the Core Strength of Congress: MLA Samarth Shamanur

Summary: MLA Samarth Shamanur chaired a pivotal meeting of Congress leaders, Booth Level Agents (BLAs), and party workers of the Davanagere South constituency at the District Congress Office. He urged workers to actively participate in voter list revisions and take party ideologies directly to households. AICC Secretary and District Inspector Rahul Bahl also attended to guide organizational strategies.

Share

Leave a comment

Leave a Reply

Your email address will not be published. Required fields are marked *