ದಾವಣಗೆರೆ: ವನ್ಯಜೀವಿಗಳ ಸಂಚಾರ ಹೆಚ್ಚಿರುವ ಪ್ರಮುಖ ಹೆದ್ದಾರಿ ಹಾಗೂ ರಸ್ತೆಗಳಲ್ಲಿ ‘ವನ್ಯಜೀವಿ ಸಂಚಾರ ವಲಯ’ ಎಂಬ ಎಚ್ಚರಿಕೆ ನಾಮಫಲಕಗಳನ್ನು ಅಳವಡಿಸಬೇಕು. ವಾಹನ ಸವಾರರು ವೇಗ ಕಡಿಮೆ ಮಾಡಿಕೊಂಡು ಸಂಚರಿಸುವಂತೆ ಸೂಚಿಸುವ ಫಲಕಗಳ ಮೂಲಕ ಜಾಗೃತಿ ಮೂಡಿಸಬೇಕು ಎಂದು ಸಚಿವ ಕೆ. ಎಸ್. ಬಸವಂತಪ್ಪ ಹೇಳಿದರು.
ಆನಗೋಡುವಿನಲ್ಲಿ ಚಿರತೆ ದಾಳಿಗೆ ತುತ್ತಾದ ಅರಣ್ಯ ಇಲಾಖೆ ಸಿಬ್ಬಂದಿ ಆರೋಗ್ಯ ವಿಚಾರಿಸಿದ ಬಳಿಕ ಅವರು ಮಾತನಾಡಿದರು.
ಕಾಡಿನಲ್ಲೇ ನೀರು–ಆಹಾರ ಒದಗಿಸಲು ಸೂಚನೆ:
ಕಾಡಿನಲ್ಲಿ ನೀರು ಮತ್ತು ಆಹಾರದ ಲಭ್ಯತೆ ಕಡಿಮೆಯಾಗುತ್ತಿರುವುದರಿಂದ ವನ್ಯಜೀವಿಗಳು ನಾಡಿನತ್ತ ಬರುತ್ತಿರುವ ಸಾಧ್ಯತೆ ಇದೆ. ಹೀಗಾಗಿ ಅರಣ್ಯದ ಸೂಕ್ಷ್ಮ ವಲಯಗಳನ್ನು ಗುರುತಿಸಿ ಪ್ರಾಣಿಗಳಿಗೆ ಕಾಡಿನೊಳಗೇ ಕುಡಿಯುವ ನೀರು ಮತ್ತು ಆಹಾರ ದೊರೆಯುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸೌರ ವಿದ್ಯುತ್ ಬೇಲಿ, ಟೆಂಚ್ ಅಳವಡಿಕೆಗೆ ನಿರ್ದೇಶನ:
ವನ್ಯಜೀವಿಗಳು ಕಾಡಿನಿಂದ ನಾಡಿನತ್ತ ಬರುವುದನ್ನು ತಡೆಯಲು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಅಗತ್ಯವಿರುವ ಪ್ರದೇಶಗಳಲ್ಲಿ ಟೆಂಚ್ ಹಾಗೂ ಸೌರ ವಿದ್ಯುತ್ ಬೇಲಿ ಅಳವಡಿಸಿ ವನ್ಯಜೀವಿಗಳ ಸಂರಕ್ಷಣೆ ಹಾಗೂ ಮಾನವ–ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ಅಪಘಾತಕ್ಕೀಡಾದ ಚಿರತೆಯ ರಕ್ಷಣೆಗೆ ತೆರಳಿದ್ದ ಸಿಬ್ಬಂದಿಯ ಮೇಲೆಯೇ ಚಿರತೆ ದಾಳಿ ನಡೆಸಿರುವುದು ಅರಣ್ಯ ಪ್ರದೇಶಗಳಂಚಿನಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷದ ಗಂಭೀರತೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.
- Anagodu leopard rescue
- Davanagere leopard attack
- Forest department staff
- K.S. Basavantappa
- Karnataka Local News.
- Leopard tranquilized and captured.
- NH 48 leopard accident
- Wildlife human conflict
- ಅನಗೋಡು ಚಿರತೆ ರಕ್ಷಣೆ
- ಅರಣ್ಯ ಇಲಾಖೆ ಸಿಬ್ಬಂದಿ
- ಕರ್ನಾಟಕ ಸುದ್ದಿ
- ಕೆ ಎಸ್ ಬಸವಂತಪ್ಪ
- ಚಿರತೆ ಸೆರೆ ಕಾರ್ಯಾಚರಣೆ.
- ದಾವಣಗೆರೆ ಚಿರತೆ ದಾಳಿ
- ರಾಷ್ಟ್ರೀಯ ಹೆದ್ದಾರಿ 48
- ವನ್ಯಜೀವಿ ಸಂಘರ್ಷ





Leave a comment