ದಾವಣಗೆರೆ: ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ₹187 ಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ನೇರ ಹಸ್ತಕ್ಷೇಪ ಹೊಂದಿರುವ ಕಳಂಕಿತ ಸಚಿವ ಬಿ. ನಾಗೇಂದ್ರ ಅವರನ್ನು ತಕ್ಷಣವೇ ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಘಟಕವು ಆ.17ರಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಾವಣಗೆರೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಎ. ಇ. ನಾಗರಾಜ ಮೆಳ್ಳೇಕಟ್ಟೆ, “ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಿದ್ದ ಅನುದಾನವನ್ನು ಬಳ್ಳಾರಿ ಲೋಕಸಭಾ ಹಾಗೂ ತೆಲಂಗಾಣ ವಿಧಾನಸಭಾ ಚುನಾವಣೆಗಳಿಗೆ ಅಕ್ರಮವಾಗಿ ಬಳಸಿಕೊಳ್ಳಲಾಗಿದೆ. ಸಿಬಿಐ ಮತ್ತು ಇಡಿ ತನಿಖೆಯಲ್ಲಿ ಸಚಿವರ ಪಾತ್ರ ಸಾಬೀತಾಗಿ ಚಾರ್ಜ್ಶೀಟ್ ಸಲ್ಲಿಕೆಯಾಗಿದ್ದರೂ, ಅವರನ್ನು ಮರಳಿ ಸಂಪುಟಕ್ಕೆ ಸೇರಿಸಿಕೊಂಡಿರುವುದು ವಾಲ್ಮೀಕಿ ಸಮುದಾಯಕ್ಕೆ ಎಸಗಿದ ಘೋರ ಅನ್ಯಾಯ” ಎಂದು ಆರೋಪಿಸಿದರು.
ಅನಿರ್ದಿಷ್ಟಾವಧಿ ಧರಣಿಯ ಎಚ್ಚರಿಕೆ:
ಸರ್ಕಾರ ತಕ್ಷಣವೇ ನಾಗೇಂದ್ರ ಅವರ ರಾಜೀನಾಮೆ ಪಡೆದು ಅವರನ್ನು ಬಂಧಿಸದಿದ್ದರೆ, ಆಗಸ್ಟ್ 17 ರಿಂದ ದಾವಣಗೆರೆ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.
“ವಾಲ್ಮೀಕಿ ಸಮುದಾಯದ ಏಳಿಗೆಗೆ ಶ್ರಮಿಸುವ ಅನೇಕ ಹಿರಿಯ ನಾಯಕರಿದ್ದಾರೆ. ಕಳಂಕಿತ ಸಚಿವರನ್ನು ತಕ್ಷಣ ಸಂಪುಟದಿಂದ ಕೈಬಿಟ್ಟು, ಸಮುದಾಯದ ಅರ್ಹ ನಾಯಕರಿಗೆ ಆ ಸ್ಥಾನ ನೀಡಿ ನ್ಯಾಯ ಒದಗಿಸಬೇಕು.”
– ಎ. ಇ. ನಾಗರಾಜ್ ಮೆಳ್ಳೇಕಟ್ಟೆ, ಜಿಲ್ಲಾಧ್ಯಕ್ಷರು, ಬಿಜೆಪಿ ದಾವಣಗೆರೆ.
ಗೋಷ್ಠಿಯಲ್ಲಿ ನಿಕಟಪೂರ್ವ ಜಿಲ್ಲಾಧ್ಯಕ್ಷ ರಾಜಶೇಖರ್ ನಾಗಪ್ಪ, ಪ್ರಧಾನ ಕಾರ್ಯದರ್ಶಿ ಧನಂಜಯ್ ಕಡ್ಲೆಬಾಳ್, ಲಕ್ಷ್ಮಣ್ ಆರ್., ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಲೋಹಿತ್ ಕುಮಾರ್, ಎಂ. ಪಿ. ರೇಣುಕಾಚಾರ್ಯ, ಮಾಡಾಳ್ ಮಲ್ಲಿಕಾರ್ಜುನ್ ಹಾಗೂ ಇತರ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.
- AE Nagaraj Mellekatte
- B Nagendra
- CBI ED Chargesheet
- Davanagere BJP Protest
- DK Shivakumar
- Indefinite Strike Davanagere
- Karnataka Cabinet Controversy
- Karnataka Politics News 2026
- Siddaramaiah Govt
- Valmiki Corporation Scam
- ಅನಿರ್ದಿಷ್ಟಾವಧಿ ಧರಣಿ
- ಇಡಿ ಚಾರ್ಜ್ಶೀಟ್
- ಎ ಇ ನಾಗರಾಜ್ ಮೆಳ್ಳೇಕಟ್ಟೆ
- ಕರ್ನಾಟಕ ರಾಜಕೀಯ ಸುದ್ದಿ
- ಡಿ. ಕೆ. ಶಿವಕುಮಾರ್
- ದಾವಣಗೆರೆ ಬಿಜೆಪಿ
- ಬಿ ನಾಗೇಂದ್ರ
- ಮಾಡಾಳ್ ಮಲ್ಲಿಕಾರ್ಜುನ್
- ರೇಣುಕಾಚಾರ್ಯ
- ವಾಲ್ಮೀಕಿ ನಿಗಮದ ಹಗರಣ
- ಸಚಿವ ಸಂಪುಟ
- ಸಿದ್ದರಾಮಯ್ಯ
- ಸಿಬಿಐ ತನಿಖೆ





Leave a comment