ದಾವಣಗೆರೆ: ದೆಹಲಿಯ ಜಂತರ್ ಮಂತರ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಯು ಕೇವಲ ವಿದ್ಯಾರ್ಥಿಗಳ ಚಳವಳಿಯಲ್ಲ, ಬದಲಿಗೆ ಇದೊಂದು ವ್ಯವಸ್ಥಿತ ದೇಶವಿರೋಧಿ ಷಡ್ಯಂತ್ರ ಎಂದು ಬಿಜೆಪಿ ಯುವ ಮುಖಂಡ ಹಾಗೂ ದಾವಣಗೆರೆ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಶಿವನಗೌಡ ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ.
“ನೀಟ್ ವಿದ್ಯಾರ್ಥಿಗಳ ಭವಿಷ್ಯದ ನೆಪವೊಡ್ಡಿ ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ಯತ್ನಿಸಲಾಗುತ್ತಿದೆ. ಮುಗ್ಧ ವಿದ್ಯಾರ್ಥಿಗಳ ಮುಖವಾಡದ ಹಿಂದೆ ಮಾವೋವಾದಿಗಳು ಮತ್ತು ದೇಶದ್ರೋಹಿ ಶಕ್ತಿಗಳು ಅಡಗಿವೆ” ಎಂದು ಖಂಡಿಸಿದ್ದಾರೆ.
ನೇಪಾಳ, ಬಾಂಗ್ಲಾದೇಶ ಮಾದರಿಯ ದಂಗೆ ಸಂಚು:
“ಪೆನ್ನು ಹಿಡಿಯಬೇಕಾದ ಕೈಗಳಿಗೆ ಕಲ್ಲು ನೀಡಿ ದೇಶದಲ್ಲಿ ಅಶಾಂತಿ ಹಬ್ಬಿಸಲಾಗುತ್ತಿದೆ. ಶಿಕ್ಷಣ ಸುಧಾರಣೆಯ ನೆಪದಲ್ಲಿ ‘ತುಕ್ಡೇ-ತುಕ್ಡೇ ಗ್ಯಾಂಗ್’ ನೇಪಾಳ ಹಾಗೂ ಬಾಂಗ್ಲಾದೇಶ ಮಾದರಿಯ ಗಲಭೆ ಸೃಷ್ಟಿಸಿ, ಚುನಾಯಿತ ಸರ್ಕಾರವನ್ನು ಉರುಳಿಸಲು ಸಂಚು ರೂಪಿಸಿದೆ. ವಿದೇಶಿ ಪ್ರಾಯೋಜಿತ ಈ ಕುತಂತ್ರಕ್ಕೆ ಭಾರತ ಎಂದಿಗೂ ತಲೆಬಾಗುವುದಿಲ್ಲ” ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಕಿಡಿಕಾರಿದ್ದಾರೆ.





Leave a comment