Home ಕ್ರೈಂ ನ್ಯೂಸ್ ನಿಮ್ಮನ್ನು ಶೀಘ್ರದಲ್ಲೇ “ಕಠೋರ ಭಯೋತ್ಪಾದಕರು ಕೊಲ್ಲುತ್ತಾರೆ’: ಚಿರಾಗ್ ಪಾಸ್ವಾನ್ ಗೆ ಬೆದರಿಕೆ ಪತ್ರ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ನಿಮ್ಮನ್ನು ಶೀಘ್ರದಲ್ಲೇ “ಕಠೋರ ಭಯೋತ್ಪಾದಕರು ಕೊಲ್ಲುತ್ತಾರೆ’: ಚಿರಾಗ್ ಪಾಸ್ವಾನ್ ಗೆ ಬೆದರಿಕೆ ಪತ್ರ!

Share
ಚಿರಾಗ್ ಪಾಸ್ವಾನ್
Share

ನವದೆಹಲಿ: ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕಾ ಸಚಿವರು ಹಾಗೂ ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ರಾಷ್ಟ್ರೀಯ ಅಧ್ಯಕ್ಷರಾದ ಚಿರಾಗ್ ಪಾಸ್ವಾನ್ ಅವರಿಗೆ ಜೀವ ಬೆದರಿಕೆ ಪತ್ರ ಬಂದಿದೆ.

ಸಚಿವರಿಗೆ ‘ಕಠ್ಕೋರ್ ಭಯೋತ್ಪಾದಕರು’ (Hardcore Terrorists) ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿ ಅನಾಮಧೇಯ ಪತ್ರವೊಂದು ಬಂದಿದ್ದು, ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

ಅಪರಿಚಿತ ವ್ಯಕ್ತಿಗಳ ಕಳುಹಿಸಿರುವ ಈ ಪತ್ರದಲ್ಲಿ ಎರಡು ಮೊಬೈಲ್ ನಂಬರ್‌ಗಳನ್ನು ನಮೂದಿಸಲಾಗಿದ್ದು, “ನಿಮ್ಮನ್ನು ಶೀಘ್ರದಲ್ಲೇ ಕಠ್ಕೋರ್ ಭಯೋತ್ಪಾದಕರು ಹತ್ಯೆ ಮಾಡಲಿದ್ದಾರೆ” ಎಂದು ನೇರವಾಗಿ ಬೆದರಿಕೆ ಹಾಕಲಾಗಿದೆ. ಪ್ರಸ್ತುತ ‘ಝೆಡ್-ಪ್ಲಸ್’ ಭದ್ರತೆಯನ್ನು ಹೊಂದಿರುವ ಚಿರಾಗ್ ಪಾಸ್ವಾನ್ ಅವರ ಜೀವಕ್ಕೆ ಬಂದಿರುವ ಈ ಗಂಭೀರ ಬೆದರಿಕೆಯ ಕುರಿತು ಸಚಿವರ ಆಪ್ತ ಕಾರ್ಯದರ್ಶಿಯು ಕೂಡಲೇ ಕೇಂದ್ರ ಗೃಹ ಸಚಿವಾಲಯಕ್ಕೆ ಅಧಿಕೃತವಾಗಿ ಪತ್ರ ಬರೆದು ಮಾಹಿತಿ ನೀಡಿದ್ದಾರೆ.

ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಸಿಆರ್‌ಪಿಎಫ್ ಮತ್ತು ಬಿಹಾರ ರಾಜ್ಯ ಸರ್ಕಾರಕ್ಕೂ ಅಗತ್ಯ ಮಾಹಿತಿ ಮುಟ್ಟಿಸಲಾಗಿದೆ. ಸಚಿವರ ಸುರಕ್ಷತೆಯನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು, ಕೂಡಲೇ ತುರ್ತು ತನಿಖೆ ಕೈಗೊಳ್ಳುವಂತೆ ಮತ್ತು ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸುವಂತೆ ಮನವಿ ಮಾಡಲಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles