ದಾವಣಗೆರೆ: ನಗರ ಹಾಗೂ ಜಿಲ್ಲೆಯಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ವಿಶೇಷ ಮುತುವರ್ಜಿಯಿಂದ ಕೋಟ್ಯಂತರ ರೂ. ಅನುದಾನ ತರಲಾಗಿದ್ದು, ಅಭಿವೃದ್ಧಿ ಕಾರ್ಯಗಳು ಭರಾಟೆಯಲ್ಲಿ ಸಾಗುತ್ತಿವೆ. ಇದನ್ನು ಸಹಿಸಲಾಗದ ಬಿಜೆಪಿ ನಾಯಕರು ವಿನಾಕಾರಣ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಮಹಾನಗರ ಪಾಲಿಕೆಯ ವಿರೋಧ ಪಕ್ಷದ ಮಾಜಿ ನಾಯಕ ಜಿ.ಎಸ್. ಮಂಜುನಾಥ್ ಗಡಿಗುಡಾಳ್ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರ ಪ್ರಯತ್ನದಿಂದ ಜಿಲ್ಲೆಯಲ್ಲಿ ಕೈಗೆತ್ತಿಕೊಂಡಿರುವ ಪ್ರಮುಖ ಅನುದಾನ ಹಾಗೂ ಅಭಿವೃದ್ಧಿ ಕಾಮಗಾರಿಗಳ ವಿವರಗಳನ್ನು ಬಿಚ್ಚಿಟ್ಟರು:
ಪ್ರಮುಖ ಅನುದಾನಗಳ ವಿವರ:
ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ – 20 ಕೋಟಿ ರೂ.
400 ಹಾಸಿಗೆಗಳ ಹಳೆಯ ಆಸ್ಪತ್ರೆ ಅಭಿವೃದ್ಧಿಗೆ – 193 ಕೋಟಿ ರೂ.
ಕ್ರಿಟಿಕಲ್ ಕೇರ್ ಸೆಂಟರ್ ನಿರ್ಮಾಣಕ್ಕೆ – 6.50 ಕೋಟಿ ರೂ.
ರಸ್ತೆ ಹಾಗೂ ಕಾಂಪೌಂಡ್ ಅಭಿವೃದ್ಧಿಗೆ – 6.12 ಕೋಟಿ ರೂ.
ಎಂಸಿಸಿ ‘ಎ’ ಬ್ಲಾಕ್ 24ನೇ ವಾರ್ಡ್ ವಿಶ್ವೇಶ್ವರಯ್ಯ ಪಾರ್ಕ್ ಅಭಿವೃದ್ಧಿಗೆ – 70 ಲಕ್ಷ ರೂ.
ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು, ಕಾಂಗ್ರೆಸ್ ಅಥವಾ ಬಿಜೆಪಿ ಎನ್ನುವ ಯಾವುದೇ ಪಕ್ಷಭೇದವಿಲ್ಲದೆ ಎಲ್ಲಾ ವಾರ್ಡ್ಗಳ ಸಮಗ್ರ ಅಭಿವೃದ್ಧಿಗೆ ಅನುದಾನ ನೀಡುತ್ತಿದ್ದಾರೆ. ಮಹಾನಗರ ಪಾಲಿಕೆ ಮಾಜಿ ವಿರೋಧ ಪಕ್ಷದ ನಾಯಕ ಪ್ರಸನ್ನ ಕುಮಾರ್ ಅವರು ಪ್ರತಿನಿಧಿಸುತ್ತಿದ್ದ 24ನೇ ವಾರ್ಡ್ ಎಂಸಿಸಿ ಎ ಬ್ಲಾಕ್ ನ ವಿಶ್ವೇಶ್ವರಯ್ಯ ಉದ್ಯಾನವನ ಅಭಿವೃದ್ಧಿಗೆ 70 ಲಕ್ಷ ರೂಪಾಯಿ ನೀಡಿದ್ದಾರೆ. ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ನಡೆದುಕೊಂಡ ರೀತಿ ಎಲ್ಲರಿಗೂ ಗೊತ್ತು ಎಂದು ತಿರುಗೇಟು ನೀಡಿದ್ದಾರೆ.
ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಮತ್ತು ಮೇಯರ್ಗಳಿದ್ದಾಗ ಬಿಜೆಪಿಗರಿಗೆ ಮಾತ್ರ ಹೆಚ್ಚಿನ ಅನುದಾನ ನೀಡಲಾಗಿತ್ತು. ಕಾಂಗ್ರೆಸ್ ಸದಸ್ಯರು ಕೇಳಿದರೂ ಅನುದಾನ ನೀಡುತ್ತಿರಲಿಲ್ಲ. ನೀಡಿದ್ದರೂ ತುಂಬಾನೇ ಕಡಿಮೆ ಆಗಿತ್ತು. ಆಗ ಶಾಸಕರಾಗಿದ್ದ ಎಸ್.ಎ. ರವೀಂದ್ರನಾಥ್ ಅವರಿಗೂ ಅನುದಾನ ನೀಡುವಂತೆ ಮನವಿ ಮಾಡಿದ್ದೆವು. ಆದರೂ ಪ್ರಯೋಜನ ಮಾತ್ರ ಶೂನ್ಯ. ಇದನ್ನು ಮೊದಲು ಅರಿತುಕೊಳ್ಳಲಿ ಎಂದು ಟೀಕಾಪ್ರಹಾರ ನಡೆಸಿದರು.
ಪ್ರಸ್ತುತ ಬಿಜೆಪಿ ಮಾಜಿ ಕಾರ್ಪೊರೇಟರ್ಗಳು ಸರಿಯಾಗಿ ಅನುದಾನದ ಬಗ್ಗೆ ಕೇಳದೆ ಅಭಿವೃದ್ಧಿಯನ್ನು ವಿರೋಧಿಸುತ್ತಿದ್ದಾರೆ ಎಂದು ಟೀಕಿಸಿದರು. ಇದುವರೆಗೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಬಳಿ ಅನುದಾನ ಕೇಳಲು ಯಾಕೆ ಬಂದಿಲ್ಲ ಎಂದು ಪ್ರಶ್ನಿಸಿದರು.
ಬಿಜೆಪಿಯ ಈ ಹತಾಶೆ ಹಾಗೂ ಸುಳ್ಳು ರಾಜಕಾರಣಕ್ಕೆ ಮುಂಬರುವ ದಿನಗಳಲ್ಲಿ ದಾವಣಗೆರೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
- BJP Allegations
- Davangere
- Davangere Development
- Davangere News
- GS Manjunath Gadigudaal
- Karnataka Politics
- MCC Davangere
- Mother and Child Hospital
- SS Mallikarjun
- SS Ravindranath
- ಎಸ್. ಎ. ರವೀಂದ್ರನಾಥ್
- ಎಸ್. ಎಸ್. ಮಲ್ಲಿಕಾರ್ಜುನ್
- ಕಾಂಗ್ರೆಸ್ ರಾಜಕಾರಣ
- ಜಿ ಎಸ್ ಮಂಜುನಾಥ್ ಗಡಿಗುಡಾಳ್
- ತಾಯಿ ಮತ್ತು ಮಕ್ಕಳ ಆಸ್ಪತ್ರೆ
- ದಾವಣಗೆರೆ
- ದಾವಣಗೆರೆ ಅಭಿವೃದ್ಧಿ.
- ದಾವಣಗೆರೆ ಸುದ್ದಿ
- ಬಿಜೆಪಿ ಆರೋಪ
- ಮಹಾನಗರ ಪಾಲಿಕೆ





Leave a comment