SUDDIKSHANA KANNADA NEWS/ DAVANAGERE/ DATE:11-10-2024
ದಾವಣಗೆರೆ: ನಗರದ ಜಯದೇವವೃತ್ತದಲ್ಲಿರುವ ಶ್ರೀ ಮಜ್ಜಗದ್ಗುರು ಶ್ರೀ ಕೂಡಲೀ ಶೃಂಗೇರಿ ಶಂಕರಾಚಾರ್ಯ ಮಹಾಸಂಸ್ಥಾನಂ ಶ್ರೀ ಶಂಕರ ಮಠದಲ್ಲಿ ಶ್ರೀ ಶಾರದಾ ಶರನ್ನವರಾತ್ರಿ ಉತ್ಸವ ವಿಜೃಂಭಣೆಯಿಂದ ನೆರವೇರಿತು.
ಶರನ್ನವರಾತ್ರಿ ಪ್ರಯುಕ್ತ ಚಂಡಿಕಾ ಹೋಮ ಪೂರ್ಣಹುತಿ ನಡೆಯಿತು. ಈ ಕಾರ್ಯಕ್ರಮದಲ್ಲಿ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಭಾಗವಹಿಸಿದ್ದರು.
ಮಠದ ಉತ್ಸವ ಸಮಿತಿಯು ಉಮಾ ಪ್ರಶಾಂತ್ ಅವರಿಗೆ ಸುಮಂಗಲಿ ಪೂಜೆ ನಡೆಸಿ ಉಡಿ ತುಂಬಿ ಬಾಗಿನ ಅರ್ಪಿಸಿತು. ಮಠದ ಪ್ರಧಾನ ಅರ್ಚಕ ಪವನ್ ಕುಲಕರ್ಣಿ,ಮಾಲತೇಶ್ ನಾಡಿಗೇರ್, ಎಂ. ಜಿ. ಶ್ರೀಕಾಂತ್, ಅಜಯ್ ಭಟ್, ಗಣೇಶ್ ಭಟ್, ಕೃಷ್ಣ, ಪ್ರಾಣೇಶ್ ಕುಲಕರ್ಣಿ, ಎ. ಎಲ್. ತಾರಾನಾಥ್, ಪ್ರಸನ್ನ ಕುಲಕರ್ಣಿ, ಬೃಂದಾ ಶ್ರೀನಿವಾಸ್, ರಾಗಿಣಿ ನಾಡಿಗೇರ್, ರಾಘು, ಅಡುಗೆ ಗುರುರಾಜ್ ಹಾಗೂ ಭಕ್ತಾದಿಗಳು ಈ ವೇಳೆ ಉಪಸ್ಥಿತರಿದ್ದರು.