ಬಿಹಾರ: ಶ್ರಾವಣ ಮಾಸದ 3ನೇ ಸೋಮವಾರದ ಅಂಗವಾಗಿ ಬಿಹಾರದ ಲಖಿಸರಾಯ್ ಜಿಲ್ಲೆಯ ಪ್ರಸಿದ್ಧ ಅಶೋಕ್ ಧಾಮ್ ಶಿವ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಕೆಗೆ ಸಾವಿರಾರು ಭಕ್ತರು ನೆರೆದಿದ್ದ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಏಳು ಭಕ್ತರು ಮೃತಪಟ್ಟು, 12ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಘಟನೆಯ ವಿವರ:
ಸೋಮವಾರ ಬೆಳಿಗ್ಗೆ ಸುಮಾರು 6.45ರ ವೇಳೆಗೆ ದೇವಾಲಯದ ಆವರಣದಲ್ಲಿ ಭಕ್ತರ ದಂಡೇ ಹರಿದುಬಂದಿತ್ತು. ಈ ವೇಳೆ ಇದ್ದಕ್ಕಿದ್ದಂತೆ ವಿದ್ಯುತ್ ತಂತಿಯೊಂದು ತುಂಡಾಗಿ ಬಿದ್ದಿದ್ದರಿಂದ ಭಕ್ತರಲ್ಲಿ ತೀವ್ರ ಭಯ ಮತ್ತು ಗೊಂದಲ ಉಂಟಾಯಿತು. ಇದರಿಂದ ತಪ್ಪಿಸಿಕೊಳ್ಳಲು ಜನರು ಓಡಲು ಯತ್ನಿಸಿದಾಗ ಕಾಲ್ತುಳಿತ ಸಂಭವಿಸಿದೆ.
ಬಿದಿರಿನ ಬ್ಯಾರಿಕೇಡ್ಗಳ ಮೇಲೆ ಭಕ್ತರ ಒತ್ತಡ ಹೆಚ್ಚಾದ ಕಾರಣ ಬ್ಯಾರಿಕೇಡ್ ಕುಸಿದು ಬಿದ್ದು, ಜನರು ಒಬ್ಬರ ಮೇಲೊಬ್ಬರು ಬಿದ್ದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕಾಲ್ತುಳಿತದಲ್ಲಿ ಗಾಯಗೊಂಡವರನ್ನು ತಕ್ಷಣವೇ ಲಖಿಸರಾಯ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸಂತಾಪ ಸೂಚಿಸಿದ ಮುಖ್ಯಮಂತ್ರಿ:
ಘಟನೆಗೆ ತೀವ್ರ ಕಂಬನಿ ಮಿಡಿದಿರುವ ಬಿಹಾರ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ, “ಈ ಘಟನೆ ಅತ್ಯಂತ ದುಃಖಕರ ಮತ್ತು ಹೃದಯವಿದ್ರಾವಕವಾಗಿದೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ಅವರು, ಗಾಯಾಳುಗಳಿಗೆ ಶೀಘ್ರ ಮತ್ತು ಉಚಿತ ಚಿಕಿತ್ಸೆ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.
ಈ ಹಿಂದೆಯೂ ಅಂದರೆ 2019ರ ಆಗಸ್ಟ್ 12 ರಂದು ಶ್ರಾವಣ ಮಾಸದ ಅವಧಿಯಲ್ಲೇ ಇದೇ ದೇವಾಲಯದಲ್ಲಿ ಕಾಲ್ತುಳಿತ ಸಂಭವಿಸಿ ಒಬ್ಬರು ಮೃತಪಟ್ಟು 15 ಜನರು ಗಾಯಗೊಂಡಿದ್ದರು.
- Ashok Dham temple news
- Bihar News
- Bihar temple stampede
- Lakhisarai Ashok Dham
- Lakhisarai DM Shailendra Kumar
- Samrat Choudhary
- Shravan Monday temple rush
- temple crowd tragedy India
- ಬಿಹಾರ ದೇವಾಲಯ ಕಾಲ್ತುಳಿತ
- ಬಿಹಾರ ಸುದ್ದಿ
- ಲಖಿಸರಾಯ್ ಅಶೋಕ್ ಧಾಮ್
- ಲಖಿಸರಾಯ್ ಸುದ್ದಿ
- ವಿದ್ಯುತ್ ತಂತಿ ತುಂಡಾಗಿ ದುರಂತ
- ಶಿವ ದೇವಾಲಯ ದುರಂತ
- ಶ್ರಾವಣ ಸೋಮವಾರ ಕಾಲ್ತುಳಿತ
- ಸಾಮ್ರಾಟ್ ಚೌಧರಿ





Leave a comment