ಬೆಂಗಳೂರು: ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯದ ಹಿತಾಸಕ್ತಿ ಕಾಯಲು ಸರ್ಕಾರ ಬದ್ಧವಾಗಿದ್ದು, ಯಾವುದೇ ಕಾರಣಕ್ಕೂ ರಾಜಕೀಯವನ್ನು ಬದಗಿಟ್ಟು ಪಕ್ಷಾತೀತವಾಗಿ ಒಟ್ಟಾಗಿ ನಿಲ್ಲುತ್ತೇವೆ ಎಂದು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಪ್ರತಿಪಾದಿಸಿದ್ದಾರೆ.
ಇಂದು ನಡೆದ ಕಾವೇರಿ ಸರ್ವಪಕ್ಷ ಸಭೆಯಲ್ಲಿ ಆರಂಭಿಕವಾಗಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಅವರು, ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳು ಹಾಗೂ ಮುಂದಿನ ನಿಲುವುಗಳ ಕುರಿತು ಪ್ರಮುಖ ಅಂಶಗಳನ್ನು ಹಂಚಿಕೊಂಡರು.
ಮುಖ್ಯ ಅಂಶಗಳು:
ರಾಜ್ಯದ ಹಿತರಕ್ಷಣೆಗೆ ಪಕ್ಷಾತೀತ ಬೆಂಬಲ: “ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ನಾವೆಲ್ಲರೂ ಈ ಸಮಸ್ಯೆಯನ್ನು ಮೈಗೆ ಅಂಟಿಸಿಕೊಂಡೇ ಬೆಳೆದಿದ್ದೇವೆ. ಆದರೆ ರಾಜಕೀಯ ಲಾಭಕ್ಕಿಂತ ರಾಜ್ಯದ ರೈತರ ಮತ್ತು ಸಾರ್ವಜನಿಕರ ಹಿತವೇ ನಮಗೆ ಅತಿ ಮುಖ್ಯ” ಎಂದು ಡಿ. ಕೆ. ಶಿವಕುಮಾರ್ ಹೇಳಿದರು.
ಕುಡಿಯುವ ನೀರಿಗೆ ಪ್ರಥಮ ಆದ್ಯತೆ: ರಾಜ್ಯದಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗದಂತೆ ನೋಡಿಕೊಳ್ಳುವುದು ಸರ್ಕಾರದ ಪ್ರಥಮ ಆದ್ಯತೆಯಾಗಿದೆ. ಈ ದೃಢ ನಿಲುವಿಗೆ ಸಭೆಯಲ್ಲಿದ್ದ ವಿರೋಧ ಪಕ್ಷಗಳ ಎಲ್ಲಾ ನಾಯಕರೂ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ ಎಂದು ಅವರು ತಿಳಿಸಿದರು.
ಕೇಂದ್ರ ನಾಯಕರು ಹಾಗೂ ಮಾಜಿ ಸಿಎಂಗಳ ಜೊತೆ ಸಮಾಲೋಚನೆ: CWRC ಮತ್ತು CWMA ಸಭೆಗಳಿಗೂ ಮುಂಚಿತವಾಗಿಯೇ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ವಿ. ಸೋಮಣ್ಣ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಮತ್ತು ಜಗದೀಶ್ ಶೆಟ್ಟರ್ ಅವರನ್ನು ಭೇಟಿಯಾಗಿ ಪರಿಸ್ಥಿತಿಯ ಗಂಭೀರತೆಯನ್ನು ಮನವರಿಕೆ ಮಾಡಿಕೊಡಲಾಗಿತ್ತು. ಅವರು ಸಹ ದೆಹಲಿಯಲ್ಲಿ ರಾಜ್ಯದ ಪರವಾಗಿ ಧ್ವನಿ ಎತ್ತಿದ್ದಾರೆ ಎಂದು ಸಚಿವರು ಅವರಿಗೆ ಧನ್ಯವಾದ ಅರ್ಪಿಸಿದರು.
ದೆಹಲಿಯಲ್ಲಿ ಸಂಸದರ ಒಗ್ಗಟ್ಟು: ದೆಹಲಿಯಲ್ಲಿ ನಡೆದ ರಾಜ್ಯದ ಸಂಸತ್ ಸದಸ್ಯರ ಸಭೆಯಲ್ಲಿ ಪಕ್ಷಬೇಧ ಮರೆತು ಎಲ್ಲ ಜನಪ್ರತಿನಿಧಿಗಳು ಕರ್ನಾಟಕದ ಹಿತರಕ್ಷಣೆಗೆ ಒಟ್ಟಾಗಿ ನಿಲ್ಲುವುದಾಗಿ ಭರವಸೆ ನೀಡಿದ್ದಾರೆ ಎಂದು ಅವರು ವಿವರಿಸಿದರು.
- Basavaraj Bommai
- Cauvery all party meeting
- Cauvery dispute
- CWMA
- CWMA order
- CWRC
- CWRC meeting
- DK Shivakumar Statement.
- Karnataka drinking water
- Karnataka water dispute
- Mekedatu Project
- Pralhad Joshi
- ಕರ್ನಾಟಕ ನೀರಾವರಿ
- ಕಾವೇರಿ ನೀರು ಹಂಚಿಕೆ
- ಕಾವೇರಿ ವಿವಾದ
- ಕಾವೇರಿ ಸರ್ವಪಕ್ಷ ಸಭೆ
- ಕುಡಿಯುವ ನೀರು
- ಡಿ. ಕೆ. ಶಿವಕುಮಾರ್
- ಪ್ರಹ್ಲಾದ್ ಜೋಶಿ
- ಬಸವರಾಜ ಬೊಮ್ಮಾಯಿ
- ಸಿ ಆರ್ ಪಾಟೀಲ್






Leave a comment