Home ಕ್ರೈಂ ನ್ಯೂಸ್ ಹಾವು ನೋಡಿ ಹೆದರಿದ್ದ ಯುವತಿ ಸಾವಿನಲ್ಲಿ ಅಂತ್ಯ: ಶಿವಮೊಗ್ಗದ ಪುನರ್ವಸತಿ ಕೇಂದ್ರದ ವಿರುದ್ಧ ಪೋಷಕರ ಆಕ್ರೋಶ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಹಾವು ನೋಡಿ ಹೆದರಿದ್ದ ಯುವತಿ ಸಾವಿನಲ್ಲಿ ಅಂತ್ಯ: ಶಿವಮೊಗ್ಗದ ಪುನರ್ವಸತಿ ಕೇಂದ್ರದ ವಿರುದ್ಧ ಪೋಷಕರ ಆಕ್ರೋಶ!

Share
ಯುವತಿ
Share

ಶಿವಮೊಗ್ಗ: ಒಂದು ಸಣ್ಣ ಘಟನೆ ಮನುಷ್ಯನ ಬದುಕನ್ನೇ ಹೇಗೆ ಅಲ್ಲೋಲ ಕಲ್ಲೋಲ ಮಾಡಬಹುದು ಎಂಬುದಕ್ಕೆ ಶಿಕಾರಿಪುರದ ಈ ಯುವತಿಯ ಸಾವೇ ಸಾಕ್ಷಿ. ಎಂಟು ತಿಂಗಳ ಹಿಂದೆ ಹಾವನ್ನು ನೋಡಿ ಬೆಚ್ಚಿಬಿದ್ದಿದ್ದ 17 ವರ್ಷದ ನೇಹಾ, ಅಂತಿಮವಾಗಿ ಪುನರ್ವಸತಿ ಕೇಂದ್ರಕ್ಕೆ ಸೇರಿದ ಒಂದೇ ದಿನದಲ್ಲಿ ಶವವಾಗಿ ಹೊರಬಂದಿದ್ದಾಳೆ.

ಘಟನೆಯ ಹಿನ್ನೆಲೆ:

 ಶಿಕಾರಿಪುರದ ಈಸೂರಿನ ನಿವಾಸಿ ನೇಹಾ ಓದಿನಲ್ಲಿ ಮುಂದಿದ್ದ ಲವಲವಿಕೆಯ ಹುಡುಗಿ. ಆದರೆ, ಕಳೆದ 8 ತಿಂಗಳ ಹಿಂದೆ ಕಾಲೇಜಿಗೆ ಹೋಗುವಾಗ ಹಾವನ್ನು ಕಂಡು ಭಯಬಿದ್ದಿದ್ದಳು. ಅಂದಿನಿಂದ ಮಾನಸಿಕವಾಗಿ ಕುಗ್ಗಿದ್ದ ಈಕೆ, ಇತ್ತೀಚೆಗೆ ಬ್ಲೇಡ್‌ನಿಂದ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಮಾನಸಧಾರ ಪುನರ್ವಸತಿ ಕೇಂದ್ರಕ್ಕೆ ಚಿಕಿತ್ಸೆಗಾಗಿ ಪೋಷಕರು ಸೇರಿಸಿದ್ದರು.

ಪೋಷಕರ ಗಂಭೀರ ಆರೋಪ:

“ಸಂಪೂರ್ಣ ಜವಾಬ್ದಾರಿ ನಮ್ಮದು” ಎಂದು ಹೇಳಿ ಸೇರಿಸಿಕೊಂಡಿದ್ದ ಕೇಂದ್ರದವರು, ನೇಹಾಳನ್ನು ಸರಿಯಾಗಿ ನೋಡಿಕೊಂಡಿಲ್ಲ. ಬೇಸಿಗೆ ಶಿಬಿರದ ಬದಲು ಮಾನಸಿಕ ರೋಗಿಗಳ ಜೊತೆ ಇರಿಸಲಾಗಿತ್ತು. ಅಲ್ಲದೆ, ಸಾವಿನ ಸುದ್ದಿ ತಿಳಿದ ನಂತರವೂ ಪೊಲೀಸರಿಗೆ ಮಾಹಿತಿ ನೀಡದೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೋಷಕರು ಕಣ್ಣೀರಿಡುತ್ತಾ ಆರೋಪಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles