SUDDIKSHANA KANNADA NEWS/ DAVANAGERE/ DATE:11-10-2024
ಬೆಂಗಳೂರು: ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪರ ವಿರುದ್ಧ ಪೋಕ್ಸೋ ಕೇಸ್ ಸಂಬಂಧ ಎಫ್ ಐ ಆರ್ ಆಗಿದೆ. ಮೊದಲು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಸ್ಥಾನದಿಂದ ತೆಗೆದು ಹಾಕಲು ಹೇಳಲಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಸರಾ ಕುರಿತು ನಾವು ನೀಡಿದ ಜಾಹೀರಾತು ಸರಿಯಾಗಿಯೇ ಇದೆ. ಸುಳ್ಳು ಹೇಳುತ್ತಾ ಹೋದರೆ ಶೋಭಾ ಕರಂದ್ಲಾಜೆ ಹೇಗೆ ಎಂದು ಪ್ರಶ್ನಿಸಿದರು.
ಪೋಕ್ಸೋ ಕೇಸ್ ಇದೆಯಲ್ವಾ. ಕೋರ್ಟ್ ಕೃಪೆಯಿಂದ ಉಳಿದುಕೊಂಡಿದ್ದಾರೆ. ಇಲ್ಲದಿದ್ದರೆ ಒಳಗಡೆ ಇರಬೇಕಿತ್ತು ಎಂದು ಸಿದ್ದರಾಮಯ್ಯ ಹೇಳಿದರು.