SUDDIKSHANA KANNADA NEWS/ DAVANAGERE/ DATE:12-08-2024
ದಾವಣಗೆರೆ: 66/11 ಕೆ.ವಿ. ಆನಗೋಡು ಮತ್ತು ಅತ್ತಿಗೆರೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತಾಗಿ ನಿರ್ವಾಹಣಾ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಆಗಸ್ಟ್ 13 ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಆನಗೋಡು ವ್ಯಾಪ್ತಿಯ ಹನುಮನಹಳ್ಳಿ, ಕೊಗ್ಗನೂರು, ಹನುಮನಹಳ್ಳಿ, ಆನಗೋಡು, ಹೆಬ್ಬಾಳು, ನೀರ್ಥಡಿ, ಶಿವಪುರ, ಹಾಲುವರ್ತಿ, ಗಂಗನಕಟ್ಟೆ, ನೇರ್ಲಿಗಿ, ಚಿನ್ನಸಮುದ್ರ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳು ಮತ್ತು ಆರಾಧ್ಯಾ ಕೈಗಾರಿಕೆ, ಅತ್ತಿಗೆರೆ ವ್ಯಾಪ್ತಿಯ ಅತ್ತಿಗೆರೆ, ಕುರ್ಕಿ, ಬಾಡ, ಕಬ್ಬೂರು, ಹೀರೆತೊಗಲೇರಿ, ಗೊಪಾನಾಳು, ಕಂದ್ಗಲ್, ರಾಮಗೊಂಡನಹಳ್ಳಿ, ಕಾಶೀಪುರ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ವಿದ್ಯುತ್ ವ್ಯತ್ಯಯ:
ಜಲಸಿರಿ ಯೋಜನೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆಗಸ್ಟ್ 13 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಜಯನಗರ ಫೀಡರ್ ವ್ಯಾಪ್ತಿಯ ಭಗೀರಥ ಲೇಔಟ್, ಆಂಜನೇಯ ಮಂಟಪ, ಕರಿಯಮ್ಮ ದೇವಸ್ಥಾನ, ಚಿಕ್ಕನಹಳ್ಳಿ ಹೊಸ ಬಡಾವಣೆ, ಮಣಿಕಂಠ ಸರ್ಕಲ್, ರಾಷ್ಟ್ರೋತ್ಥಾನ ಶಾಲೆ, ಕಲ್ಲು ಬಡಾವಣೆ, ಜಯನಗರ ಚರ್ಚ್ ಎದುರು, ಶ್ರೀರಾಮ್ ಬಡಾವಣೆ, ನಿಟುವಳ್ಳಿ, ನಿಟುವಳ್ಳಿ ಹೊಸ ಬಡಾವಣೆ, ದುರ್ಗಾಂಬಿಕ ದೇವಸ್ಥಾನ, ಇ.ಎಸ್.ಐ ಆಸ್ಪತ್ರೆ, ನಿಟ್ಟುವಳ್ಳಿ ಸಂತೆ ಮಾರ್ಕೇಟ್, 60 ಅಡಿ ರಸ್ತೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.