SUDDIKSHANA KANNADA NEWS/ DAVANAGERE/ DATE:18-07-2023
ದಾವಣಗೆರೆ (Davanagere): 8 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಅಪರಾಧಿಗೆ ದಾವಣಗೆರೆಯ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 5 ವರ್ಷ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಕೆ. ಎನ್. ನಾಗರಾಜ್ ಶಿಕ್ಷೆಗೊಳಪಟ್ಟ ಅಪರಾಧಿ. 2021ರ ಸೆಪ್ಟಂಬರ್ 19ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಹರಿಹರ ತಾಲ್ಲೂಕಿನ ಮಲೆಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿ ಗ್ರಾಮದ ಬಸನಗೌಡ್ರರವರ ಮನೆಯ ಪಕ್ಕದ ಖಾಲಿ ಜಾಗದಲ್ಲಿ 8 ವರ್ಷದ ಬಾಲಕಿ ಕರೆದುಕೊಂಡು ಹೋಗಿ ಅವಳನ್ನು ಬಿಗಿಯಾಗಿ ಹಿಡಿದುಕೊಂಡಿದ್ದ. ಮುತ್ತು ಕೊಟ್ಟು ಅವಳ ದೇಹದ ಅಂಗಾಂಗಳನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದ. ಈ ಸಂಬಂಧ ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಕಲಂ 354 ( ಎ ) ಐಪಿಸಿ, ಕಲಂ 8 ಮತ್ತು 12ರ ಪೋಸ್ಕೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಸುದ್ದಿಯನ್ನೂ ಓದಿ:
School: ಶಾಲೆಯೊಳಗೆ ಕುಳಿತರೆ ಮೇಲ್ಛಾವಣಿ ಬೀಳುವ ಭಯ… ಹೊರಗಡೆ ಹೋದರೆ ಕರೆಂಟ್ ಶಾಕ್ ಆತಂಕ… ಮಕ್ಕಳಿಗೇನಾದರೂ ಆದ್ರೆ ಯಾರು ಹೊಣೆ…?
ಪ್ರಕರಣದ ವಿಚಾರಣೆ ನಡೆಸಿದ ದಾವಣಗೆರೆಯ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ. – 1 ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಪಾದ ಎನ್. ಅವರು ಆರೋಪಿತನನ್ನು ತಪ್ಪಿತಸ್ಥನೆಂದು ತೀರ್ಮಾನಿಸಿ
ಆತನಿಗೆ 5 ವರ್ಷಗಳ ಕಠಿಣ ಜೈಲು ಶಿಕ್ಷೆ, 10,000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸಂತ್ರಸ್ಥೆಗೆ ರೂ. 2,00,000 ಪರಿಹಾರ ಧನವನ್ನು ಸರಕಾರದಿಂದ ನೀಡಬೇಕೆಂದು ಆದೇಶಿಸಿದ್ದಾರೆ. ಈ ಪ್ರಕರಣದ ತನಿಖೆ ನಡೆಸಿದ್ದ ಆಗಿನ ಮಲೇಬೆನ್ನೂರು ಪಿಎಸ್ ಐ ರವಿ ಕುಮಾರ್ ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಸುನಂದಾ ಈಶ್ವರಪ್ಪ ಮಡಿವಾಳ ಅವರು ವಾದ ಮಂಡಿಸಿದ್ದರು.