ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

10 ಸಾವಿರ ರೂ. ಬೆಟ್ ಗೆ “5 ಕ್ವಾಟ್ರು ರಾ” ಕುಡಿದ: ಅಸ್ವಸ್ಥಗೊಂಡು ಸತ್ತೇ ಹೋದ…!

On: May 1, 2025 12:56 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE-01-05-2025

ಬೆಂಗಳೂರು: ಸ್ನೇಹಿತರೊಂದಿಗೆ ಹತ್ತು ಸಾವಿರ ರೂಪಾಯಿ ಬೆಟ್ ಕಟ್ಟಿ ಐದು ಕ್ವಾಟ್ರು ರಾ ಎಣ್ಣೆ ಕುಡಿದ ಯುವಕ ಸತ್ತೇ ಹೋದ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ನಡೆದಿದೆ.

21 ವರ್ಷದ ಯುವಕ ಕಾರ್ತಿಕ್ ಮೃತಪಟ್ಟ ಯುವಕ. ತನ್ನ ಸ್ನೇಹಿತರೊಂದಿಗೆ 10,000 ರೂ. ಬೆಟ್‌ ಕಟ್ಟಿದ್ದ. ಐದು ಕ್ವಾಟ್ರು ನೀರು ಹಾಕಿಕೊಳ್ಳದೇ ಕುಡಿಯುತ್ತೇನೆ ಎಂದು ಸವಾಲು ಹಾಕಿದ. ಆಗ ಕಾರ್ತಿಕ್ ಗೆ ಐದು ಕ್ವಾಟ್ರು ನೀರು ಹಾಕದೇ ಕುಡಿದರೆ 10 ಸಾವಿರ ರೂಪಾಯಿ ನೀಡುವುದಾಗಿ ವೆಂಕಟ್ ರೆಡ್ಡಿ ಹೇಳಿದ್ದ. ಈ ವೇಳೆ ಕಾರ್ತಿಕ್ ಸ್ನೇಹಿತ ಸುಬ್ರಮಣಿ ಇದ್ದ.

ಕಾರ್ತಿಕ್ ಐದು ಕ್ವಾಟ್ರು ಕುಡಿದುಬಿಟ್ಟ. ಎಣ್ಣೆ ಮುಗಿಸುತ್ತಿದ್ದಂತೆ ಕುಸಿದು ಬಿದ್ದು ತೀವ್ರ ಅಸ್ವಸ್ಥನಾದ. ಕೂಡಲೇ ಮುಳಬಾಗಿಲಿನ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಯ ಸಮಯದಲ್ಲಿ ಆತ ಸಾವನ್ನಪ್ಪಿದ್ದ. ಕಾರ್ತಿಕ್ ಮದುವೆಯಾಗಿ ಒಂದು ವರ್ಷವಾಗಿತ್ತು ಮತ್ತು ಅವರ ಪತ್ನಿ ಕೇವಲ ಎಂಟು ದಿನಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದರು. ವೆಂಕಟ ರೆಡ್ಡಿ ಮತ್ತು ಸುಬ್ರಮಣಿ ಸೇರಿದಂತೆ ಆರು ವ್ಯಕ್ತಿಗಳ ವಿರುದ್ಧ ನಂಗಲಿ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪ್ರಕರಣ ದಾಖಲಾಗಿದೆ. ಇಬ್ಬರನ್ನೂ ಬಂಧಿಸಲಾಗಿದ್ದು, ಪೊಲೀಸರು ಇತರ ಆರೋಪಿಗಳನ್ನು ಹುಡುಕುತ್ತಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರತಿ ವರ್ಷ ಸುಮಾರು 2.6 ಮಿಲಿಯನ್ ಜನರು ಮದ್ಯ ಸೇವನೆಯಿಂದ ಸಾಯುತ್ತಾರೆ, ಇದು ಜಾಗತಿಕ ಸಾವುಗಳಲ್ಲಿ ಶೇಕಡಾ 4.7 ರಷ್ಟಿದೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

Leave a Comment