ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ತುಂಬು ಗರ್ಭಿಣಿ ಎನ್ನೋದನ್ನ ನೋಡದೇ ಪತ್ನಿ ಕತ್ತು ಹಿಸುಕಿ ಕೊಂದ ಪಾಪಿ ಪತಿ!

On: April 15, 2025 10:35 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:15-04-2025

ಹೈದರಾಬಾದ್: ಹೆರಿಗೆಗೆ ಕೆಲವೇ ವಾರಗಳ ಮೊದಲು ಹೆಂಡತಿಯ ಕತ್ತು ಹಿಸುಕಿ ಪತಿ ಕೊಂದ ಘಟನೆ ವಿಶಾಖಪಟ್ಟಣಂನಲ್ಲಿ ನಡೆದಿದೆ.

ಜ್ಞಾನಶ್ವರ್ ಹತ್ಯೆ ಮಾಡಿದ ಆರೋಪಿ. ಅನುಷಾ ಕೊಲೆಗೀಡಾದ ಮಹಿಳೆ. ಕಳೆದ ಎರಡು ವರ್ಷಗಳ ಹಿಂದೆ ಜ್ಞಾನಶ್ವರ್ ಮತ್ತು ಅನುಷಾ ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದರು. ಜ್ಞಾನಶ್ವರ್ ಪೊಲೀಸರಿಗೆ ಅನುಷಾಳನ್ನು ಕೊಂದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ.

ಕೌಟುಂಬಿಕ ಕಾರಣಗಳಿಂದಾಗಿ ಇಬ್ಬರ ನಡುವೆ ಜಗಳ ನಡೆದಿದ್ದು, ಈ ಸಂದರ್ಭದಲ್ಲಿ ಜ್ಞಾನಶ್ವರ್ ಕೆಲವು ವಾರಗಳಲ್ಲಿ ಹೆರಿಗೆಯಾಗಬೇಕಿದ್ದ ಪತ್ನಿ ಅನುಷಾಳ ಕತ್ತು ಹಿಸುಕಿ ಕೊಂದಿದ್ದಾನೆ.

ಸ್ಕೇಪ್ಸ್‌ನ ಸಾಗರ್ ನಗರ ವೀಕ್ಷಣಾ ತಾಣದ ಬಳಿ ಫಾಸ್ಟ್‌ಫುಡ್ ಅಂಗಡಿಯನ್ನು ಜ್ಞಾನೇಶ್ವರ್ ನಡೆಸುತ್ತಿದ್ದ. ಪತಿ ಮತ್ತು ಪತ್ನಿ ನಡುವೆ ಗಲಾಟೆಯಾಗಿ ಕತ್ತು ಹಿಸುಕಿದ್ದರಿಂದ ಅನುಷಾ ತೀವ್ರ ಅಸ್ವಸ್ಥಗೊಂಡಿದ್ದರು. ಸಂಬಂಧಿಕರು ಮತ್ತು ಸ್ನೇಹಿತರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಆಕೆ ಮೃತಪಟ್ಟಿದ್ದಾರೆ ಎಂದು ತಿಳಿಸಿದರು. ಆಕೆಯ ಮೃತದೇಹವನ್ನು ಕೆಜಿಎಚ್ ಶವಾಗಾರಕ್ಕೆ ಸ್ಥಳಾಂತರಿಸಲಾಯಿತು.

ಪಿ.ಎಂ. ಪಾಲೆಮ್ ಪೊಲೀಸರ ಮುಂದೆ ಜ್ಞಾನೇಶ್ವರ್ ತಪ್ಪೊಪ್ಪಿಕೊಂಡಿದ್ದಾನೆ, ನಂತರ ಪೊಲೀಸರು ಆತನನ್ನು ವಶಕ್ಕೆ ಪಡೆದರು. ಅನುಷಾಳ ತಾಯಿ ಮತ್ತು ಸ್ನೇಹಿತರು ಜ್ಞಾನೇಶ್ವರ್‌ಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ. ಬೇರೆ ಯಾವುದೇ ಮಹಿಳೆಗೆ ಇದೇ ರೀತಿಯ ಗತಿ ಎದುರಾಗಬಾರದು ಎಂದು ಹೇಳಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment