SUDDIKSHANA KANNADA NEWS/ DAVANAGERE/DATE:20_09_2025
ದಾವಣಗೆರೆ: ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ 58ನೇ ಹುಟ್ಟುಹಬ್ಬದ ಪ್ರಯುಕ್ತ ಕೆಟಿಜೆ ನಗರ 27ನೇ ವಾರ್ಡ್ ನಲ್ಲಿ ಮುಖಂಡರು ಹಾಗೂ ಉತ್ತರ ವಲಯ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಶ್ರೀನಿವಾಸ್ ಕಲ್ಪತರು ಅವರ ನೇತೃತ್ವದಲ್ಲಿ ಆಟೋ ನಿಲ್ದಾಣಗಳಲ್ಲಿನ ಆಟೋ ಚಾಲಕರಿಗೆ ಸಮವಸ್ತ್ರ ವಿತರಿಸಲಾಯಿತು.
READ ALSO THIS STORY: ರಕ್ತದಾನ ಅಭಿಯಾನ: ಡಾ. ಪ್ರಭಾ ಮಲ್ಲಿಕಾರ್ಜುನ್ ರಿಂದ ರಕ್ತದಾನ: ಓದಿದ ಕಾಲೇಜಿನಲ್ಲಿ ರಕ್ತದಾನ ಮಾಡಿ ಮಾದರಿಯಾದ ಸಂಸದರು
ಈ ವೇಳೆ ಮಾತನಾಡಿದ ಶ್ರೀನಿವಾಸ್ ಕಲ್ಪತರು ಅವರು, ಎಸ್. ಎಸ್. ಮಲ್ಲಿಕಾರ್ಜುನ್ ಅರವರ ಹುಟ್ಟುಹಬ್ಬದ ಪ್ರಯುಕ್ತ ಲೋಕಸಭಾ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಸಲಹೆ ಮೇರೆಗೆ ಕೇಕ್, ಹಾರ, ಶಾಲು ಸೇರಿದಂತೆ ಇತರೆ ಅನಗತ್ಯಕ್ಕೆ ಖರ್ಚು ಮಾಡದೇ ಅನ್ನ ಸಂತರ್ಪಣೆ ಹಾಗು ಸಾಮಾಜಿಕ ಕಾರ್ಯಕ್ರಮ ಆಯೋಜನೆ ಮಾಡಬೇಕೆಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಆಟೋ ಚಾಲಕರಿಗೆ ಸಮವಸ್ತ್ರ ವಿತರಿಸಲಾಯಿತು
ಎಂದು ತಿಳಿಸಿದರು.
ದೇಶದಲ್ಲಿ ಆಟೋ ಚಾಲಕರು ಕೂಡ ಸಹೋದರರಿದ್ದಂತೆ. ಯಾವಾಗಲೂ ನಮ್ಮ ಹಾಗೂ ಸಮಾಜದ ಜೊತೆಯಲ್ಲಿ ಇರುತ್ತಾರೆ. ಸಾರಿಗೆ ವ್ಯವಸ್ಥೆಯ ಒಂದು ಅವಿಭಾಜ್ಯ ಅಂಗ. ಎಸ್ ಎಸ್ ಮಲ್ಲಿಕಾರ್ಜುನ್ ರವರು ಆಟೋ ಮಾಲೀಕರು ಹಾಗು ಚಾಲಕಾರಿಗಾಗಿ ಆಟೋ ಕಾಲೋನಿ ಎಂದು ನಾಮಕರಣ ಮಾಡಿ ಸಾವಿರಾರು ಆಶ್ರಯ ಮನೆಗಳನ್ನು ನೀಡಿದ ಧೀಮಂತ ನಾಯಕರು ಎಂದು ಬಣ್ಣಿಸಿದರು.
ಕಾರ್ಯಕ್ರಮಕ್ಕೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಮಾತನಾಡಿ ಈ ಒಂದು ವಿಭಿನ್ನ ಕಾರ್ಯಕ್ರಮ ಆಯೋಜಿಸಿರುವ ಶ್ರೀನಿವಾಸ್ ಕಲ್ಪತರು ಅವರ ಯೋಚನೆ ತುಂಬಾ ಚೆನ್ನಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಉತ್ತರ ವಲಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಜಿ. ಶಿವಕುಮಾರ್ ಮಾತನಾಡಿ ನಮ್ಮ ಅಣ್ಣಾ ತಮ್ಮಂದಿರ ಹಾಗೆ ಇರುವ ಆಟೋ ಚಾಲಕರು ನಮ್ಮ ಜೀವನದಲ್ಲಿ ತುಂಬಾ ಅವಶ್ಯಕ. ಅವರು ಇಲ್ಲದೇ ಸಾರಿಗೆ ವ್ಯವಸ್ಥೆ ಇಲ್ಲ. ಹಾಗಾಗಿ ಆಟೋ ಚಾಲಕರು ನಮ್ಮ ದೇಶದ ಒಂದು ಆಸ್ತಿ ಎಂದು ಬಣ್ಣಿಸಿದರು
ಮಹಾನಗರ ಪಾಲಿಕೆ ಮಾಜಿ ವಿರೋಧ ಪಕ್ಷದ ನಾಯಕ ಡಿ. ಎನ್. ಜಗದೀಶ್ ಮಾತನಾಡಿ, ಇನ್ನು ಮುಂದಿನ ದಿನಗಳಲ್ಲಿ ಅಪಘಾತವಾದಾಗ, ಹಾವು ಕಚ್ಚಿದಾಗ, ಹಾರ್ಟ್ ಅಟ್ಟ್ಯಾಕ್ ಆದಾಗ ತುರ್ತು ಚಿಕಿತ್ಸೆ ಹೇಗೆ ನೀಡಬೇಕೆಂದು ನಮ್ಮ ವಾರ್ಡ್ ನಲ್ಲಿ ತರಬೇತಿಯನ್ನು ನೀಡುವ ಒಂದು ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದು ಹೇಳಿದರು.
ಕನ್ನಡಪರ ಹೋರಾಟಗಾರ ನಾಗೇಂದ್ರಪ್ಪ ಬಂಡಿಕರ, ವಾರ್ಡ್ ಅಧ್ಯಕ್ಷ ಗೊಣ್ಣೆಪ್ಪ, ಎಸ್. ಮಾನು, ಅಜಯ್, ಚೈತನ್ಯ ಕುಮಾರ, ಯೋಗೇಶ್, ಪ್ರದೀಪ್ ಸುಲೇಮಾನ್, ಅಕ್ಬರ್, ನಾಗರಾಜ್, ಪರಶುರಾಮ್, ಧರ್ಮರಾಜ್, ಭಾಸ್ಕರ್, ರಾಂಪಾ, ಬಸವರಾಜ್, ಶಂಕರ್, ಬಸವರಾಜ್, ದುಗ್ಗಪ್ಪ, ತಿಪ್ಪೇಶ್, ಗಿಡ್ಡಪ್ಪ ಹಾಗೂ ಆಟೋ ಚಾಲಕರು ಹಾಜರಿದ್ದರು.