Home ದಾವಣಗೆರೆ ಭತ್ತದ ನಾಟಿಗೆ ನೀರಿಲ್ಲದೆ ರೈತರ ಆತಂಕ: ಭದ್ರಾ ಡ್ಯಾಂ, ತುಂಗಭದ್ರಾ ನದಿಯಿಂದ ನಾಲೆಗಳಿಗೆ ಕೂಡಲೇ ನೀರು ಹರಿಸುವಂತೆ ಆಗ್ರಹ
ದಾವಣಗೆರೆಬೆಂಗಳೂರು

ಭತ್ತದ ನಾಟಿಗೆ ನೀರಿಲ್ಲದೆ ರೈತರ ಆತಂಕ: ಭದ್ರಾ ಡ್ಯಾಂ, ತುಂಗಭದ್ರಾ ನದಿಯಿಂದ ನಾಲೆಗಳಿಗೆ ಕೂಡಲೇ ನೀರು ಹರಿಸುವಂತೆ ಆಗ್ರಹ

Share
ಭದ್ರಾ ಡ್ಯಾಂ
Share

ದಾವಣಗೆರೆ / ಹೊನ್ನಾಳಿ: ದಾವಣಗೆರೆ ಜಿಲ್ಲೆಯ ಹೊನ್ನಾಳಿ ಹಾಗೂ ಚನ್ನಗಿರಿ ಭಾಗದ ಕೃಷಿಕರು ಪ್ರಸ್ತುತ ಸಾಲಿನ ಭತ್ತದ ನಾಟಿ ಕಾರ್ಯಕ್ಕೆ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದು, ನೀರಿಗಾಗಿ ತುಂಗಭದ್ರಾ ಮತ್ತು ಭದ್ರಾ ಡ್ಯಾಂ ನೀರನ್ನು ನೆಚ್ಚಿಕೊಂಡಿದ್ದಾರೆ. ಆದರೆ, ನದಿಯಲ್ಲಿ ಸಮರ್ಪಕವಾಗಿ ನೀರು ಹರಿಯದಿರುವುದರಿಂದ ಸಾವಿರಾರು ರೈತ ಕುಟುಂಬಗಳು ತೀವ್ರ ಆತಂಕ ಹಾಗೂ ಸಂಕಷ್ಟಕ್ಕೆ ಈಡಾಗಿವೆ.

ಪ್ರಸ್ತುತ ತುಂಗಭದ್ರಾ ಜಲಾಶಯದ ನೀರಿನ ಮಟ್ಟ 172 ಅಡಿ ದಾಟಿರುವುದು ಕೃಷಿಕರಲ್ಲಿ ಹೊಸ ಆಸೆ ಮೂಡಿಸಿದೆ. ಜಲಾಶಯದಲ್ಲಿ ಉತ್ತಮ ನೀರು ಸಂಗ್ರಹವಿರುವ ಹಿನ್ನೆಲೆಯಲ್ಲಿ, ಭತ್ತದ ನಾಟಿ ಕಾರ್ಯಕ್ಕೆ ತಕ್ಷಣ ಅಗತ್ಯವಿರುವಷ್ಟು ನೀರನ್ನು ನದಿಗೆ ಹರಿಸಬೇಕು ಎಂದು ದಾವಣಗೆರೆ ಜಿಲ್ಲಾ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಜಾಫರ್ ಅವರು ನೀರಾವರಿ ಇಲಾಖೆ ಹಾಗೂ ಜಲಾಶಯ ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

“ನಾಟಿಗೆ ಇದುವೇ ಸೂಕ್ತ ಸಮಯ. ಈಗಲೇ ನೀರು ಸಿಗದಿದ್ದರೆ ಕೃಷಿ ಚಟುವಟಿಕೆ ವಿಳಂಬವಾಗಿ ರೈತರು ಭಾರಿ ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ. ಅಧಿಕಾರಿಗಳು ಮಾನವೀಯ ಆಧಾರದ ಮೇಲೆ ತಕ್ಷಣವೇ ಸ್ಪಂದಿಸಿ ನೀರು ಬಿಡುಗಡೆ ಮಾಡಬೇಕು.”

— ಜಾಫರ್, ಅಧ್ಯಕ್ಷರು, ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ (ರಿ.), ದಾವಣಗೆರೆ.

ರೈತರ ಜೀವನೋಪಾಯ ಮತ್ತು ಇಡೀ ವರ್ಷದ ಶ್ರಮ ನೀರಾವರಿ ವ್ಯವಸ್ಥೆಯನ್ನೇ ಅವಲಂಬಿಸಿರುವುದರಿಂದ, ಯಾವುದೇ ವಿಳಂಬ ಮಾಡದೆ ತಕ್ಷಣವೇ ತುಂಗಭದ್ರಾ ನದಿಗೆ ನೀರು ಹರಿಸುವ ಕ್ರಮ ಕೈಗೊಳ್ಳಬೇಕೆಂದು ರೈತರ ಪರವಾಗಿ ಸಮಿತಿಯ ಅಧ್ಯಕ್ಷ ಜಾಫರ್ ಆಗ್ರಹಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles